ಭಾನುವಾರ, ಫೆಬ್ರವರಿ 1, 2015

ಹುಳಿ ಮಾವಿನ ಮರ ...

 ನನಗೆ ಮೊದಲಿನಿಂದಲು ಆತ್ಮ ಕಥನಗಳ ಬಗೆಗೆ ವಿಚಿತ್ರ ವ್ಯಾಮೋಹ , ಅಲ್ಲಿ ಸತ್ಯ, ಅರ್ಧ ಸತ್ಯ , ಬಿಟ್ಟು ಹೋದ ಸೂಕ್ಷಗಳು ಎಲ್ಲ ಇರುತ್ತವೆ . ಬರೆದವನ , ಬದುಕಿನವನ ಸಂಪೂರ್ಣ ಬದುಕಿನ ಚಿತ್ರ ಅಥವಾ ಅವನು ಬದುಕಬೇಕೆನ್ದಿದ್ದ ಬದುಕಿನ ಕಲ್ಪನೆಯೊ , ಒಟ್ಟಾರೆ ಅದೊಂದು ವ್ಯಕ್ತಿತ್ವದ ಅನಾವರಣ .

ಸ್ಟೀವ್ ಜಾಬ್ಸ್ , ಅಗಸ್ಸಿ, ಪ್ರೊತಿಮ ಬೇಡಿ , ಕುಶವಂತ್ ಸಿಂಗ್ ,ಕುಲದೀಪ್ ನಾಯರ್ , ಬೆಳೆಗೆರೆ ಕೃಷ್ಣ ಶಾಸ್ತ್ರಿ , ಐನ್ಸ್ಟೈನ್ , ಚಲಂ , ಸ್ವಾಮಿ ಯೋಗಾನಂದ , ಜಾನ್ ನ್ಯಾಶ್ , ರಾಮಕೃಷ್ಣ ಪರಮಹಂಸ , ರಾಧಾನಾಥ ಸ್ವಾಮೀಜಿ , ಮುಕುಂದೂರು ಸ್ವಾಮಿಗಳು , .. ಈಗೆ ಮುಗಿಯದ ಸಾಲು ಸಾಲು ಬದುಕುಗಳು ನನ್ನ  ಸ್ಮ್ರತಿಯಲ್ಲಿ ಸೇರಿಹೋಗಿವೆ    .
ಒಬಬ್ಬರದು ವಿಶಿಷ್ಟ  ಬದುಕು , ಹಲವಾರು  ಆಯಾಮಗಳು , ತಿಣುಕಾಟ , ಮೆರವಣಿಗೆ  .

ಬದುಕು ನೀಡುವ  ಸವಾಲು ಅದನ್ನು ಪ್ರತಿಯೊಬ್ಬರೂ ಎದುರಿಸಿದ ರೀತಿ , ಅವರ ಸೋಲು, ಗೆಲುವು , ಪ್ರೀತಿ , ವಿರಹ , ಸಂಭಂದಗಳು .. ಬಹು ಮುಖ್ಯವಾಗಿ ಎಲರಲ್ಲೂ ಸಾಮಾನ್ಯವಾಗಿ ಹುಟ್ಟುವ ಬದುಕಿನ ಅವಶ್ಯಕತೆ ಮತ್ತು ಸಾವಿನ ಅನಿವಾರ್ಯತೆಯ ಭಯ !! ಎಂತದೋ ವಿಚಿತ್ರ ಆಕರ್ಷಣೆ . ನನಗೆ ಇಷ್ಟವಾಗುವ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಆತ್ಮ ಕಥನ ಅಗ್ರ ಶ್ರೇಣಿಯದ್ದು .

ಈಗಗಿಯೇ ರವಿ ಬೆಳೆಗೆರೆಯವರ ಖಾಸ್ ಬಾತ್ , ಜೋಗಿಯವರ  ಜಾನಕಿ ಕಾಲಂ  ನನಗೆ ಇಷ್ಟವಾಗುತ್ತದೆ  ,ಬರವಣಿಗೆಗೆ ವಿಷಯ ನಾವೇ ಆದಾಗ ಬರವಣಿಗೆಗೆ ಒಂದು ಮೊನಪು , ತೀಕ್ಷತೆ ಮತ್ತು ವಾಸ್ತವಿಕತೆ ದಕ್ಕುತ್ತದೆ .  ಅಲ್ಲಿನ ಸುಳ್ಳುಗಳು ಉಹಾ ಪೋಹಗಳಗಿರುವುದಿಲ್ಲ ,ಅವು ತುಂಬಾ ಯೋಚಿಸಿ ಲೇಖಕ ಬೇಕಂತಲೇ ಸೃಷ್ಟಿಸಿದ gap fillerನಂತವು  ಅವನ್ನು   harmless ಎಂದು ಭಾವಿಸಿ ಉಳಿದ ಅನುಭವಗಳಲ್ಲಿ ಲೇಖಕನ ಬದುಕು ಕಾಣಬಹುದು  .

ಇನ್ನೊಬರ ಬದುಕ ಬಗ್ಗೆ ಕುತೂಹಲ ಯಾಕೆ ? ಈ ಭಾವನೆ ಹಲವಾರು ಬಾರಿ ಬಂದಿದ್ದು ಅದಕ್ಕೆ ನನ್ನದೇ ಆದ ಕಾರಣಗಳಿವೆ . ಮನುಜರು  ಹುಟ್ಟು , ದೇಶ , ಪರಿಸರ , ಆಕರ , ರೂಪು , ಧರ್ಮ ಇವುಗಳೆಲ್ಲದರ ನಡುವೆಯೂ ಒಂದು ಸಾಮ್ಯತೆ ಇದೆ . ಬಾಲ್ಯದ , ಯೌವನದ ,ಮಧ್ಯ ವಯಸ್ಸಿನ , ವ್ರದಾಪ್ಯದ ಆಗು ಹೋಗುಗಳಿಗು ಒಂದು ಸಾಮ್ಯತೆ ಇದೆ . ಬದುಕಿನುದ್ದಕು ಎದುರಾಗುವ ಪ್ರಶ್ನೆಗಳು , ಅವಕ್ಕೆ ಉತ್ತರಗಳ ಹುಡುಕಾಟ ಎಲದಕ್ಕು ಒಂದು ಸಾಮ್ಯತೆ ಇದೆ . ಈಗೆ ಯಾರದೋ ಬದುಕಿನ ಯಾವುದೋ ಘಟನಾವಳಿ , ಅದಕ್ಕೆ ಮತ್ತಾರೋ ಮಹಾತ್ಮಾ , ಬುದ್ದಿವಂತ ಪ್ರತಿಕ್ರಿಯಿಸಿದ ರೀತಿ ಇವೆಲ್ಲ ಸೂಕ್ಷ್ಮ ಮತಿಯ ಯಾವುದೋ ಮೂಲೆಯಲ್ಲಿ ಉಳಿದು , ಅಂತದೆ ಸಮಸ್ಯೆ ನಮಗೆ ಬಂದಾಗಲೋ , ನಮ್ಮ ಪ್ರಿಯ ವ್ಯಕ್ತಿಗಳಿಗೆ ಬಂದಾಗಲೋ ಉಪಯುಕ್ತವಾಗುತ್ತವೆ . ಒಟ್ಟಾರೆಯಾಗಿ ಮನುಜನಿಗೆ ದೈವ  ಒಡ್ಡುವ  ಎಲ್ಲ ಅನುಭವಗಳನ್ನು ಅನುಭವಿಸಲು , ಅಭ್ಯಸಿಸಲು ಈ  ಬದುಕು ತುಂಬಾ ಸಣ್ಣದು ಎನ್ನುವುದು ಸತ್ಯ ಹಾಗಾಗಿ ಮತ್ತಾರ ಬದುಕ ಸಾರಾಂಶಗಳನ್ನು ಓದುವುದು ಅದರಿಂದ ಪರಿ ಪಕ್ವವಾಗುವುದು ಒಂದು harmless  ಅಭಿಯಾನ !! I am guiltless to peek in to others life provided they write a book on it :)


ನಾನು ಲಂಕೇಶರನ ಓದಿ  ಕೊಂಡಿರಲಿಲ್ಲ   , ಅವರ ಬಗ್ಗೆ ಹಾಯ್ ಬೆಂಗಳೂರಿನಲ್ಲಿ ರವಿ ಬೆಳೆಗೆರೆಯವರ ಉಲೇಖದ ಹೊರತಾಗಿ ನನಗೆ ಅವರ ಬಗ್ಗೆ ಯಾವುದೇ ಮಾಹಿತಿಯು ಇರಲಿಲ್ಲ .ಸಪ್ನಾ ಬುಕ್ ಹೌಸಿನಲ್ಲಿ ಅಕಸ್ಮಾತಾಗಿ ಕಣ್ಣಿಗೆ ಬಿದ್ದ "ಹುಳಿ ಮಾವಿನ ಮರ " ಖರೀದಿಸಿದೆ .
ಹುಳಿ ಮಾವಿನ ಮರ .. ಲಂಕೇಶರ ಆತ್ಮ ಕಥನ .

ಈ ಪುಸ್ತಕ ಅಥವಾ ಆ ಬದುಕು ನನ್ನನು ಅತಿ ಶೀಘ್ರವೇ ಆವರಿಸಿದ ಸಂಕೀರ್ಣ ಬದುಕಿನ ಒಂದು ಅಸಂಕಿರ್ಣ ಸಂಕಲನ .
ನಿಜಕ್ಕೂ ಅವರ ಬದುಕು ಅದರ ಪಾರದರ್ಶಕತೆ ನನ್ನನ್ನು ಯಾವ ಪರಿ ಆಕ್ರಮಿಸಿತು  ಎಂದರೆ ಒಂದು ದಿನದ ಓದಿಗೆ ಪೂರ್ತ ಪುಸ್ತಕ ಜೀರ್ಣವಾಗಿ ಹೋಯಿತು . ತನ್ನ ಬಗ್ಗೆ ತಾನು ತುಂಬಾ ಸಾಮನ್ಯನಂತೆಯು ಬರೆದುಕೊಂಡಿರುವ ಅವರ ಪ್ರಭುದ್ದತೆ ಪ್ರಶಂಸನೀಯ , ಒಬ್ಬ ಲೇಖಕನಿಗೆ ತನ್ನ ಹೊಗಳಿಕೊಳ್ಳುವುದು ಸುಲಭ ಆದರೆ ತನ್ನ  ಸೋಲುಗಳನ್ನು , ನ್ಯೂನತೆಗಳನ್ನು ಯಾವುದೇ ಅಂಜಿಕೆಯಿಲ್ಲದೆ ಒಪ್ಪಿಸುವುದಕ್ಕೆ ಒಂದು ಗಟ್ಟಿತನದ ವ್ಯಕ್ತಿತ್ವ ಬೇಕು , ಇದು ಬಹಳ ಇಷ್ಟವಾಯಿತು . ಲಂಕೇಶ್ ಎಂದರೆ ಪ್ರತ್ರಕರ್ತ ಎಂದಷ್ಟೇ ತಿಳಿದಿದ್ದ ನನಗೆ ಅವರ ಅಧ್ಯಾಪಕ ವೃತ್ತಿ , ಅವರ ಸಿನಿಮ ಸಾಹಸಗಳು , ರೈತನಾಗುವ ಹಪಹಪಿ ,ಮದ್ಯೆ ಮದ್ಯೆ ಜಾಗೃತವಾಗುವ ಅವರ ಗ್ರಹಸ್ತಾಶ್ರಮ ,ಕುಡಿತ , ಸಿಗರೇಟೆ ,ಜೂಜು , ಅವರ ಪ್ರೇಮಗಳು , ಸಂವೇದನೆಗಳು , ಬಂಡಾಯದ ಪತ್ರಿಕೋದ್ಯಮ ... ಆಹ್ !! ಪರಿಪೂರ್ಣ ಬದುಕು ...


ನಾನು ಹೆಮ್ಮೆ ಪಡುವ ಬದುಕಗಳಿಗೆ ಹೊಸದೊಂದು ಸೇರ್ಪಡೆಯಾಗಿದೆ . ಇನ್ನು  ಅವರ  ಸಾಹಿತ್ಯ ಬಾಕಿ ಇದೆ... ಅಲ್ಲಿ  ಅವರ ವ್ಯಕ್ತಿತ್ವ ಮತ್ತಷ್ಟು ಹುಡುಕಬೇಕಿದೆ .



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ