ಮಂಗಳವಾರ, ಮಾರ್ಚ್ 31, 2015

ಸುಳ್ಳು ಮತ್ತು ವಾಸ್ತವ !

ಈ ಮಳೆ ,
ಆ ಸಮಾದಿಯ
ಮೇಲಿನ
ಒಣ ಹೂವಗಳಿಗೆ 
ಸುಳ್ಳೇ ಆಶ್ವಾಸನೆ
ನೀಡಿತ್ತು  ..
ಬಹುಶ: ,
ಮಣ್ಣ ಒದ್ದು
ಮಲಗಿದವನಿಗೂ ,
ಸುಳ್ಳೆ ... !

ವಾಸ್ತವ!!

ಅವನ ಹೂಳುವಾಗ
ಕಿತ್ತಿಟ್ಟ ಒಂದೆರಡು
ಪಾರ್ಥೆನಿಯುಮ್
ಗಿಡಗಳು ಮತ್ತೆ
ಚಿಗುರುತ್ತಿವೆ ,
ಸಮಾಧಿ ಇನ್ನಷ್ಟು
ಭದ್ರವಾಗಿದೆ ,
ಶ್ರದಾಂಜಲಿಗೆ
ಬಂದವರ ಹೆಜ್ಜೆ
ಗುರುತು ಸಂಪೂರ್ಣ
ಮಾಸಿದೆ ...

ಹೂಳುವವರೋ,
ಹೊಸ ಹಳ್ಳ
ತೋಡಿ ,
ಆಹ್ವಾನ ಪತ್ರಿಕೆ
ಮುದ್ರಿಸಿದ್ದಾರೆ ,







ಬುಧವಾರ, ಮಾರ್ಚ್ 25, 2015

ಮಂಗಳವಾರ, ಮಾರ್ಚ್ 10, 2015

ಹೊಸದೊಂದು ಜನ್ಮ

ಮೇಜಿನ ಮೇಲಿನ ನಾಲಕ್ಕು ಖಾಲಿ ಹಾಳೆ ನನ್ನ ಅರ್ಥ ಮಾಡಿಕೊಂಡ ಅಹಮ್ಮಿನಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಹೊರಳುತ್ತವೆ , ನೀಳವಾದ ಉಸಿರು ನನಗೆ ಅರಿವಿಲ್ಲದಂತೆ ನನ್ನ ಬಿಟ್ಟು ದೂರ ಸರಿಯುತ್ತದೆ , ಕಿಟಕಿಯ ಆಚೆ ದಿಟ್ಟಿಸಿ ಮುಗಿದ ಮಳೆಯ ಅವಶೇಷಗಳ ನಡುವೆ ತೊಯ್ದ ಅಂಗವಿಕಲ ತರೆಗೆಲೆಗಳ ಅಸಹಾಯಕತೆ , ನಿಶ್ಚಲತೆ ಚೆಡಿಸಿದನ್ತಾಗಿ ದೃಷ್ಟಿ ಒಳಗೆ ಎಳೆದುಕೊಂಡು ನಿರ್ಲಿಪ್ತನಾಗುತ್ತೇನೆ ... ಎದುರಿನ ಗೋಡೆಗೆ ಮುಪ್ಪಾದಂತಿದೆ ,ಅಲ್ಲಲ್ಲಿ ನೇತು ಹಾಕಿದ ಹಳೆಯ ಫೋಟೋಗಳು , ನಾನು ಬೇಡವೆಂದು ಕಿತ್ತಿಟ್ಟ ಫೋಟೋಗಳು ಉಳಿಸಿ ಹೋದ ಮೊಳೆಗಳ ಗುರುತು , ಮೈಯೆಲ್ಲಾ ಗಾಯದ ಗುರುತ್ತಂತೆ ಎಡೆದು ಹೋದ ಸುಣ್ಣದ ಚಕ್ಕೆಗಳು , ಮತ್ತೆ ಇವು ನನ್ನ ನಾಳೆಯ ನೆನಪಿಸಿದೆ ....... ನಾನು ಖಾಲಿಯಾಗದ ಭಾವದ ಒರತೆಯಾಗಿದೆ , ಹರಿಯುತ್ತಾ ಸದಾ ತುಳುಕುತ್ತಿದೆ ಇಂದೇಕೆ ಹೀಗೆ ಖಾಲಿ ಭಾವ ? ಕನ್ನಡಕ ಹುಡುಕಿ ಮುಖಕ್ಕೆ ನೀರು ತಾಕಿಸಿ ಮೇಲೆದ್ದು , ಮನೆಯೆಲ್ಲ ಹುಡುಕಿ ಇಲ್ಲಿ ಬಂದವರ , ಇದ್ದವರ , ಹೋದವರ ಎಲ್ಲರ ನೆನಪು ತರಿಸುವ ಎಲ್ಲ ನಿಗೂಡ ಗುರುತುಗಳ ಹುಡುಕಿ ಸುಟ್ಟಿದೇನೆ , ಬಣ್ಣದಂಗಡಿಯಿನ್ದ ಹೊಸದಂದು ಬಣ್ಣ ಆರಿಸಿ ತಂದಿದ್ದೇನೆ , ಒಂದಷ್ಟು ಸೀಮೆಂಟ್ ಬಳಿದು ನಂತರ ಇಲ್ಲಿ ಬಣ್ಣ ಬದಲಿಸಿ ನನ್ನ ಶೈಥಿಲ್ಯದ ಸೂಚ್ಯದಂತ ಮನೆಯ ವಾಸ್ತು ಬದಲಿಸುತ್ತೇನೆ ... ನನ್ನ ಮನೆಯ ನಡುವಲ್ಲಿ ಇದ್ದ ಉದ್ದದ ಕನ್ನಡಿಯ ಹೊರಗಾಕ್ಕಿದ್ದೇನೆ ... ಈಗ ಇಲ್ಲಿ ಹೊಸದೊಂದು ಜನ್ಮವಾಗಿದೆ , ಇವನಿಗೆ ನೆನ್ನೆಯಿಲ್ಲ , ನಾಳೆಯಿಲ್ಲ , ಪರಿಚಯಸ್ತರಿಲ್ಲ , ಕಲಿತ ವಿದ್ಯೆಗಳೆಲ್ಲವನ್ನು
ತೊಳೆದ ಮೇಲೆ ಒಂದಷ್ಟು ಖಾಲಿ ಹಾಳೆಯ ಮೇಲೆ ಅಕ್ಷರಾಭ್ಯಾಸ ನಡೆಯುತ್ತಿದೆ ...

ಸೋಮವಾರ, ಮಾರ್ಚ್ 9, 2015

ಸಂಗಾತ

ಸಂಗಾತ ಅಂಗಾತವಾಗಿದೆ
ಮುಂಗುರಳ ಕಂಪನ ,
ಅಂಗೈಯ ನಡುಕ
ಉಸಿರ ಕುರುಹಿಗೆ
ಎದೆಯ ಸಂಚಲನ,
ಈಗೆ ಬದುಕ ಪ್ರತಿಫಲಿಸೋ
ಸೂಕ್ಷ್ಮ ಹುಡುಕಿ ಹುಡುಕಿ
ಹೆಣ ಕಾಯುತ್ತಿದೇನೆ ....
ಬಾಯಾರಿದೆ , ಕಣ್ಣಿಗೂ ದಾಹ ,
ಉಸಿರು ಎದೆಯ ತಲುಪುವ
ಮುನ್ನ ಗಂಟಲಲ್ಲಿ ನಲುಗುತ್ತದೆ ...
ಈ ಸ್ಮಾಶನದ ಮುದುಕ
ಎರಡು ಹಳ್ಳ ತೆಗೆದಿದ್ದಾನೆ
ದೂರ ನಿಂತು ನನ್ನ ನೋಡಿ
ಮರುಗುತ್ತಾನೆ .....
ಅವ ನನ್ನಲ್ಲಿ
ಸಾವಿನ ಕುರುಹು
ಕಂಡಿದ್ದಾನೆ ..,,

ಪ್ರೀತಿ!

ಸುಡಲು ವಿರಹವಿತ್ತು ನಡುವೆ ,
ಪ್ರತಿ ಭೇಟಿಯಲಿ ಪ್ರೀತಿಗೆ ಪುನರುತ್ಥಾನದಿ 
ಸಾಕಾರ,
ಒಟ್ಟಿಗೆ ಬದುಕುವ ದಾಸ್ಯ ಒದಗಿ
ಪ್ರೀತಿ ಇನ್ನು ಉತ್ಕಲನದ ವಿಚಾರ

ಚಂದ್ರ ಮತ್ತು ಅವಳು !

ದಡಗಳ ನೇವರಿಸಿ ,
ಹರಿವ ನದಿಯಂತ ಅವಳು 
ಹೋದಮೇಲೆ ,
ಸಾಲು ಸಾಲು ಮರಗಳ 
ಒತ್ತರಿಸಿ ಓಡುವ 
ಟಾರ್ ರಸ್ತೆಯ ಮಧ್ಯೆ ,
ಚಂದ್ರ ಸ್ಥಿರವಾಗುತ್ತಾನೆ ....
ಈ ರಸ್ತೆ ಅವನ ಪ್ರತಿಫಲಿಸುವುದಿಲ್ಲ ,
ಅವನಿಗೆ ಮಂಪರು ಹಚ್ಚುವಂತೆ
ತೂಗುವುದೂ ಇಲ್ಲ ,
ಮುಂಜಾನೆಯವರೆಗೂ ಕಾದು
ಸೂರ್ಯನಲ್ಲಿ ದೂರುತ್ತಾನೆ ,,
ಮರುದಿನ ಇಲ್ಲಿ ಜೋರು
ಮಳೆ ..,
ಇರುಳಿನ ತಿಳಿ ಆಗಸದ ಕೆಳಗೆ
ಪ್ರೀತಿ ಉಕ್ಕುತ್ತಿದೆ .....!!
ಇಲ್ಲೊಂದು ಹೊಸಾ ನದಿ

 ಚಂದ್ರನ ತೂಗುತ್ತಿದೆ !!

ಕೋರಿಕೆ

ಉಸಿರು ದಾರಿ ಸವೆಸಿದಷ್ಟು ಹೊತ್ತು ಬದುಕ ಕಾಲಿಗೆ ನಿನ್ನ ಹೆಜ್ಜೆ ಗುರುತು ಮೂಡಿಸುವ ನೈತಿಕತೆ ಮೆರೆಯುತ್ತೇನೆ , ನಾ ನಡೆದು ಹೋದಲ್ಲಿ ಜನ ನಿನ್ನ ಶ್ಲಾಘಿಸುತ್ತಾರೆ , ಪ್ರೇಮದ ಹೆಸರಲ್ಲಿ ನಿನಗೆ ಮಾಡಿಕೊಟ್ಟ ಕರಾರುಗಳಲ್ಲಿ ಒಂದಷ್ಟು ಪೂರೈಸಿ ಪ್ರಾಯಶ್ಚಿತ ಮಾಡಿಕೊಳ್ಳುವ ನನ್ನ ಗರ್ವಕ್ಕೆ ಭುಜ ತಟ್ಟಿದ ಮೇಲೆ , ಕಲ್ಪನೆಯ ಕಣ್ಣಿಗೆ ಇಂಕು ತುಂಬಿ ನಿನ್ನ ಮತ್ತೆ ಬರೆಯುತ್ತೇನೆ ... ನಿನ್ನ ಕಣ್ಣಲ್ಲಿ ನನ್ನಗಾಗಿ ಕರುಣೆ ಹುಡುಕುತ್ತೇನೆ , ಅಲ್ಲಿ ಇನ್ನು ಮುಗಿಯದ ತಿರಸ್ಕಾರ ಕಂಡು ಕಣ್ಣ ರೆಪ್ಪೆ ಅಲುಗಿಸಿ ಮತ್ತೆ ನಿನ್ನ ಪಾದಗಳ ಹಣೆಗೆ ಕಟ್ಟಿಕೊಂಡು ನಾವಿಬ್ಬರು ಒಟ್ಟಾಗಿ ನಡೆದಲ್ಲಿ ಆಕಾಶ ಮಾರ್ಗವಾಗಿ ಮತ್ತೊಮ್ಮೆ ಗಿರಕಿ ಹೊಡೆಯುತ್ತೇನೆ ....
ಈಗೆ ಸಾಗುವ ರಾತ್ರಿಗಳು ಬದುಕಿನ ಅರ್ಧ ನುಂಗಿವೆ , ಇನ್ನರ್ಧ ಬದುಕ್ಕಿನುದ್ದಕ್ಕೂ ದಿನಗಳಲ್ಲಿ ಕಂಡ ಬೆಳಕ ಭದ್ರಮಾಡಿಕೊಂಡಿದ್ದೇನೆ , ನಿನ್ನ ಕಣ್ಣಲ್ಲಿ ನಾನು ಪ್ರತಿಫಲಿಸಿದ ರಾತ್ರಿಯ ನಂತರ
ಇಲ್ಲಿ ಬೆಳಕಿನ ಹಬ್ಬ .. ಸೂರ್ಯ ಚಂದ್ರರಿಗೆ ಶಾಶ್ವತ ರಜೆ ಇತ್ತು ನೀನು ಬೆಳಗಬೇಕು ..ನಮ್ಮಿಬ್ಬರ ನೆರಳು ಸೂರ್ಯನ ಜೊತೆಗೆ ಬೆಳೆಯುವುದು ಬೇಡ ,ಕಳೆಯುವುದು ಬೇಡ ...
ಒಂದನ್ನೊಂದು ಆಲಂಗಿಸಿ ಸ್ಥಿರವಾಗಲಿ , ಅನಂತ ಆಗಸಗಳಲ್ಲಿ ನಮ್ಮ ಆತ್ಮೈಕ್ಯ ಚಿರಾಯುವಾಗಲಿ .. ಉಸಿರ ದಾರಿ ಸವೆಯುವ ಮುನ್ನ ಸಮಾಧಿಯಾಗುವ ನನ್ನ ಕೋರಿಕೆ ಕೇಳಿಸಿಕೋ !!!!

ಸೋಮವಾರ, ಮಾರ್ಚ್ 2, 2015

ಮಳೆ

ಮುಗಿದ ಮಳೆ
ಸೆರೆಗಿಡಿದು
ಎಳೆ ಬಿಸಿಲು ,.
ನೆಲಕ್ಕೀಗ
ನವ ಪ್ರೇಮಿಯ
ವಿರಹ ,
ಸ್ವಲ್ಪ ತಾಪ   ,
ಸ್ವಲ್ಪ ತಂಪು