ಬುಧವಾರ, ಫೆಬ್ರವರಿ 27, 2013

ಹನಿಯಾದರೂ ??

ಏ ಸಂಧ್ಯೆ ನಿನ್ನದು
ಅದೆಂತ  
ವೈಕರಿ ?

ದಿನಲು 
ಅರಳುತ 
ಮರಳಿ ಬಾರುತ,  
ತಂಪ 
ಸುರಿಸುವ 
ನಿತ್ಯ ಐಸಿರಿ .. .. 

ನೀನು ಎರೆವ
ರಾತ್ರಿಗಳು .. .., !
ನಡು ನಡುವಲಿ  
ಕಾಡೋ
ಕನವುಗಳು  .. !!

ನೆನಪ ಕೈ ತುತ್ತಲಿ 
ನಿನ್ನೆಗಳ ಮೆಲುಕು , 

ಮುಂಜಾನೆ ಕಳೆದ
ಇಬ್ಬನಿಗಳ ಕೆದುಕುವ 
ನಿರ್ಗತಿಕ ., 

ಮಣ್ಣಾಗಿದೆ
ಮಂಜ ಹನಿ
ಯಾರ ಕೇಳಲಿ ...??

ಸಂಧ್ಯೆ .,

ನೀ
ಅರಿತಿರುವೆ
ನನ್ನೆದೆಯ ಕೋರ್ಟಿನ
ಅವರಣಗಳಲ್ಲಿ
ನಡುಯುವ ವಾದ
ವಕಾಲತ್ತು ..,
ಒಮ್ಮೆ ಅವಳಿಗೆ
ಜೀವವಾಧಿ
ಒಮ್ಮೆ  ನನಗೆ
ಗಲ್ಲು ...

ಆಂಟಿ ಹರಿವ ನದಿ
ಅವಳು
ನಾನು
ಅವಳ
ನೇವರಿಸಿ ಸತ್ಕರಿಸುವ
ನೆಲ ..,
ಅವಳಿಗೆ ನನ್ನ
ಆವರಿಸಿದ ಅಹಂ
ನನಗೆ ಅವಳ
ನೇವರಿಸಿದ ಅಹಂ ..,

ತಿರುಗಿ
ನೋಡುವಷ್ಟರಲ್ಲಿ
ಅವಳು  ಆವಿ
ನಾನು ಬಿರುಕು
ಭುವಿ ..,

ಅವಳು ಮತ್ತೆ
ಮಳೆಯಗುವಳೇ ?
ಆದರು,
ನನ್ನ ನೆಲವ
ಸೇರುವಳೇ ??
ಭೋರ್ಗರೆತ
ಬೇಡ
ಬೊಗಸೆ
ದಕ್ಕುವುದೇ ?

ಹನಿಯಾದರೂ ??

ಕಾದು ಕುಳಿತಿರುವೆ ...,

ಸಂಧ್ಯೆ..
ನಾಳೆ ಇಲ್ಲಿ ಬರುವ ಮುನ್ನ
ಅಲ್ಲಿ ಹೋಗಿಬಾ
ನನ್ನ ನೆಲದ
ಬಂಜರಿಗೆ
ಅಲ್ಲಿ ಕಣ್ಣಹನಿಯ
ಬಳುವಳಿ ತಾ..
ನೇವರಿಸಿ ನೇವರಿಸಿ
ಹನಿಯ ಮುತ್ತಾಗಿಸಿ
ತಿರುಗಿ ಅವಳಿಗೆ
ಎರೆವೆ ...,



















ಗುರುವಾರ, ಫೆಬ್ರವರಿ 21, 2013

ಅರಿವು

ವರುಷಗಳ
 ಹಿಂದಿನ ಮಾತು
ನಾನು ಮಳೆಯಗಿದ್ದೆ
ಋತು ನನಗೆ ಸಂಗಾತಿ
ಅದೊರೊಟ್ಟಿಗೆ  ಪಯಣ,
ಅದರೊಟ್ಟಿಗೆ ಯಾನ ,
ಅದು ನಿಂತಲ್ಲಿ
ನಿಂತು ,
ತಿರುಗಿದಲ್ಲಿ
ತಿರುಗಿ
ಸಾಗಿತ್ತಿದೆ ..

ಋತು ಮೊದಲಿಂತೆ ಇರಲಿಲ್ಲ
ದಿನಕೊಮ್ಮೆ ಬದಲು ..,
ಒಮ್ಮೊಮ್ಮ್ಮೆ ದಿನಕ್ಕೆ ನಾಲಕ್ಕು  ಸಾರಿ ..,


ದಾರಿಯ ಅಂದಾಜು ಸಿಗುತ್ತಿರಲಿಲ್ಲ
ನಕ್ಷೆಯ ಬರೆದಿಟ್ಟು
ನನ್ನ ಕಾಲಿಗೆ ಇಂಕು ಮೆತ್ತಿ
ದಾರಿ ಬರೆದೆ , ..,

ಎಷ್ಟು ತಿರುವು !!???

ತಿರುವ ತಿರಿಸಿ
ನಕ್ಷೆ ನೋಡಲು
ನಿಂತಲೇ ನಿಂತ ಭಾವ !!
ನಾನು ಚಲಿಸಿದ್ದು ಸುಳ್ಳೇ
ಹುಟ್ಟಿದ ಚಪಲ .. :(

ನಿಂತ ನಾನು
ಮಳೆಯಲ್ಲ ,
ಇಲ್ಲಾವುದೋ  ರಸ್ತೆ
ಬದಿಯಲ್ಲಿ ಉಳಿದು ಹೋದ
ನೀರ  ಹನಿ
ನಾನು ..

ಸೂರ್ಯನಿಂದ ದೂರಾದೆ ಮೇಲೆ
ಅನಾಥ ಭಾವ ..,
ಭೂಮಿಯ ಅಪರಿಚಿತ
ಮಡಿಲಿಗೆ
ಅಸ್ಪರ್ಶ್ಯ ಭಾವ ..,





ಶುಕ್ರವಾರ, ಫೆಬ್ರವರಿ 15, 2013

ನಾ ಸೋಲಲಿಲ್ಲ ಗೆಳತಿ

 ದಿನಗಳು ಲೆಕ್ಕಕ್ಕೆ ಸಿಲುಕವು .., ತಿರುಗಿ ನೋಡಿದರೆ ಬದುಕು ಎರಡೇ ಭಾಗ ಒಂದು ನಿನ್ನ ತೆಕ್ಕೆಯಲಿ ಕಳೆದದ್ದ್ದು ಮಾತೊಂದು ನಿನ್ನ ಕಳೆದು ಹೋದ  ತೆಕ್ಕೆಯನು ಹರಸಿದ್ದು ..,
ಆ ಊರಿನ ಬೀದಿಗಳಲೆಲ್ಲ ನನ್ನ ನಿನ್ನ ಮನೆಗೆ ತಲುಪಿಸಲೆಂದೇ ಹುಟ್ಟಿದವ ? ಗೊತ್ತಿಲ್ಲ , ಊರಿನ ಅಷ್ಟು ಪರಿಚಯಗಳೆಲ್ಲ ಮುಗಿಸಿ ನಿನೆಡೆಗೆ ಬಂದವನು ನಾನು , ಈಗ ನೀನಿರುವ  ಮನೆಯ ಅರಿಯದೆ ಬೀದಿಗಳೆಲ್ಲ ದಿಕ್ಕೆಟಿವೆ , ನಾ ಅವುಗಳ ಬೆನ್ನೇರಿ ಹೊರಟು  ಮತ್ತೆ ಮತ್ತೆ ದಾರಿ ತಪ್ಪುತೇನೆ ..,ಮತ್ತೆ ಮತ್ತೆ ಅರಸುತೇನೆ .. 

ಉರಿವ ಬೆಳಕಂತ ನಿನ್ನ ನಗುವ ಅರಸಿ ಅರಸಿ ಮತ್ತೆ ಮತ್ತೆ ಆ ಮನೆಯ ಗೋಡೆಗಳನ್ನು ದಿಟ್ತಿಸುತೇನೆ , ನಿನ್ನ ಕಣ್ಣ ಮಿಂಚಿನ ಬೆಳಕು ನನ್ನ ಮೊಗವ ಮತ್ತೆ ಅರಳೀಸಿತೆಂಬ ಆಕ್ರಂದನೆ...ಅನಂದವಲ್ಲಿ .., 
ಈ ದೇಹ ಮಂಡಿಯೂರಿ ಆ ಪರಿ ದೈವವನ್ನು ಬಯಸಲಿಲ್ಲ , 
ನಿನಗೂ  ಗೊತ್ತು ಉಸಿರ ಬಗೆದು ಎನ್ನ ಕದ್ದೊಯುವ ಸಾವಿಗೂ ನಾ  ಆ ಪರಿ  ಸೋಲುವುದಿಲ್ಲ ..,
ಅದಾವ ಕ್ರೌರ್ಯದ ಮೊನಪೋ ನಿನ್ನ ಮಾತಿನ ಬಿರುಸಿಗೆ , ಆ ಕೊನೆಯ ಚೂಪಿಗೆ ನಾ ಕೊರಗಿ ಸೊರಗಿ 
ನಲುಗಿ ಹೋದೆ .., 

ನಾ ಸೋಲಲಿಲ್ಲ ಗೆಳತಿ ನಿನ್ನ ಗೆಲ್ಲಿಸಿ ಹೊರಟೆ .., 

ನಿನಗೆಂದು ಬರೆದ , ಬರೆಯದೆ ಉಳಿಸಿದ ಅಷ್ಟು ಕವಿತೆಗಳು ಇಂದು ಎದೆ ಒಳಗೆ ಬೇಯುತ್ತವೆ , 
ನನ್ನ ಭಾವದ ತೆಕ್ಕೆಯ ಬಿಸಿ ಇದ್ದದ್ದು ನನ್ನ ಕಾವ್ಯದಲ್ಲಿ,   ನಾ ಕಾವ್ಯವಾಗಿ  ಹೊಮ್ಮಿದ್ದರೆ  ನೀನು ಕರಗುತ್ತಿದೆಯೇನೋ ..

ಉಳಿದು ಹೋದ ಎಲ್ಲ ಜೀವಗಳಂತೆ ನನ್ನಲು ಜನ್ಮಕಾಗುವಷ್ಟು ನೋವಿದೆ , ಮೋಸ ಹೋದ ದಣಿವಿದೆ ..,

ಚೆಲುವ ನಿನ್ನದು ? ನನ್ನ ಸಳದದ್ದು , ಮುಗ್ಧತೆಯ ? ಅದಾವ ಸಂಕೀರ್ಣ ಅಭೇದ್ಯ ಗಣಿತವೋ ಇನ್ನು ಉತ್ತರ ಅರಸಿ ತತ್ತರಿಸುತಿರುವೆ .., ಪ್ರತಿ ಬಾರಿ ಉಳಿದದ್ದು ಸೊನ್ನೆಯೆ ..,
ಬದುಕು ಹಿಂದೆ ಹೋಗುವ ಪಯಣವಲ್ಲ , ಮುಂದೆ ಸಾಗಲು ನನ್ನ ಗಾಲಿಗಳೆಲ್ಲ ಈ ಗಾಡಿ ಬಿಟ್ಟು ಹೋಗಿ ಅರ್ಧ ಆಯಸ್ಸಾಗಿದೆ.

ನಿನಗೆ ಹೇಳದ ಒಂದು ಸಂಗತಿ ಗೊತ್ತ , ತಿಂಗಳು ನಿನ್ನ ಕಾಣದೆ ನಾ ನೋವುಂಡು  ಕಾಯುತಿದದ್ದು ??
ಅಪರರೂಪಕ್ಕೆ ನಿನ್ನ  ಮನೆಯ ಬಾಗಿಲಿಗೆ  ಬಂದಾಗ   ನಿನ್ನಲ್ಲಿ   ನನ್ನ ಕಂಡೊಡನೆ ಮೂಡುವ ಸುಳ್ಳು ಆಶ್ಚರ್ಯದ್ದು ,
 ಗೆಳತಿ ನೀ ದೂರ ದೂಡುವೆಯೆಂಬ ಸಣ್ಣ ಸುಳಿವ ನನಗೆ ತೋರಬಾರದಿತ್ತೆ :(??
 ಆ ತಿಂಗಳು , ,ವಾರ  ವರುಷ ನಿನ್ನ ಉಸಿರಗಂಟಿ ನಿಂತು  ಬಿಡುತ್ತಿದೆ ,

 ಇರಲಿ ನಾನು ಕರುಣೆಗೆ ಅರ್ಹನಲ್ಲ ಎಂಬುದು ನೀನಿಟ್ಟ ತೀರ್ಪು , ನಾ  ಅರಿಯಬಲ್ಲೆ ...,

ನಮ್ಮೂರ   ಹೊಳೆಗೆ ಅಂಟಿದ ಮೆಟ್ಟಿಲ  ಮೇಲೆ , ಅ ದೇವಸ್ಥಾನದ ಹಜಾರದಲ್ಲಿ  ಕುಳಿತು ,  ಮತ್ತೆ  ಮತ್ತೆ ಅಳುತೇನೆ .
ನಿನಗೆ ಗೊತ್ತ ಆ ಬಸವನಿಗೆ   ನಮ್ಮ  ಪ್ರೀತಿ ಫಲಿಸಿದರೆ  ಸಣ್ಣ  ಕಿರೀಟ ಕೊಡುವ ಹರಕೆ ಇಟ್ಟಿದ್ದೆ ??
 ಈ ನಡುವೆ ಆ ಗುಡಿಯ   ಬಾಗಿಲಲ್ಲಿ ಕೂತು ಅಣಕಿಸುವ ಅವನಿಂದ  ಅವಿತು  ನಿಂತು ನಿಟ್ಟುಸಿರು ಬಿಡುತೇನೆ..

ಆ ಕೃಷ್ಣನ ಗುಡಿಯ ಬಕುತಿಯ ಅಲೆಗೆ ಸಿಕ್ಕಿ ಉನ್ಮಾದದಿ ತೇಲುತಿದ್ದ ನಾ , ನಿನ್ನ ಪ್ರೀತಿಯೂ  ಪ್ರಾಪಂಚಿಕ ವಿಚಾರದ , ಮೋಹಕ್ಕೆ ಮುಸುಕು  ಹಾಕಿದ ಸೆಳೆತ ಎಂದು ಭಾವಿಸಿದ ಮರುಕ್ಷಣಕ್ಕೆ   ಅಧ್ಯಾತ್ಮದ ಹಸಿವು ಮರೆಸಿ ಹೊರಗೆ ಬಂದೆ .

ಈಗ  ನೀನಿಲ್ಲ , ಆ ಗುಡಿಯ ಬಾಗಿಲು ನನ್ನ ವ್ಯಂಗ್ಯದಿ  ಕರೆಯುತಿದೆ , ಹೋಗಲಾರೆ  ...,

ದೈವ ಇಲ್ಲಿಂದ ಸೋತವರು ಅರಸುವ ಪಲಾಯನ ಸೂತ್ರವಲ್ಲ ಅದು ಗೆದ್ದವನಲ್ಲಿ ಹುಟ್ಟುವ ವೈರಾಗ್ಯ ..,
ನಾನು ಗೆದ್ದರೆ ದೈವಕ್ಕೆ ಕೈ ಚಾಚುವೆ ,  ಇಲ್ಲವಾದರೆ ದೈವಕ್ಕೆ ಅವಮಾನ , ಒಮ್ಮೆ ದಿಕ್ಕರಿಸಿರುವೆ ಮತ್ತೆ ದಿಕ್ಕರಿಸಲಾರೆ .
ನಾನು ತಿರಸ್ಕಾರಕ್ಕೆ ಸಿಲುಕಿ ಕೊಚ್ಚಿ ಹೋದ  ಆತ್ಮಾಬಿಮಾನವ ?
ಇಲ್ಲ ,
ನಿನ್ನ ಪ್ರೀತಿಯ ಹಳಸಿದ ನೆನಪ ,  ನಿನ್ನೆಗಳ , ನಿನ್ನ ಸಾ೦ಗತ್ಯದ ಮೆಲುಕಿನ ಸಣ್ಣ ಬಿಸಿಲಿಗೊಡ್ಡಿ ಒಣಗಿಸಿ ಒಣಗಿಸಿ ಎದೆಗಪ್ಪುವ,  ಮನಸ್ಸ  ಸುಟ್ಟಿ ಕೊಳ್ಳುವ  ಕಾವ ...,
ನನ್ನ ಪ್ರೀತಿ ಅತಿರೇಕ , ಮೌಡ್ಯ , ಹುಚ್ಚು , ನನ್ನ ಪ್ರೀತಿ  ಕಂಬನಿ , ನೋವು ,  ಸಂಕಟ
ನಾ ಬರೆವ ಪ್ರತಿ ಪದವು ನಿನ್ನ ಪಡೆಯದೇ ಹೋದ ಮನವು ಸಾವಿನೆಡೆಗೆ ಮುಖ ಮಾಡಿ ದೂಡಿದ ದಿನವ ,
 ಇಲ್ಲ ಬದುಕ ಗಾಡಿಗೆ ನಿನ್ನೊಡನೆ ಹೋದ ಗಾಲಿಯ ಅರಸುವ ಸೋಲುವ  ಪ್ರೀತಿಯ ..,

 ನನ್ನೆದೆ  ಸ್ಮಾಶನವಾಗಿದೆ , ನಾನು ಚಂಡಲ , ಇಲ್ಲಿ ದಿನ ಸಾಯುತ್ತೇನೆ , ನನ್ನನ್ನು ನಾ  ಸುಡುತೇನೆ , ನನ್ನ ನಿನ್ನೆಗಳ ಹೂಳುತೇನೆ ..ಮತ್ತೆ ಮೇಲೇರುವ ದೇಹವಿರದ ಆತ್ಮದಂತೆ ಗೊರಿಯಗಳಾಚೆ  ಹೊರಳುತೇನೆ , ನರಳುತೇನೆ ..,

 ನಾ  ವರುಷಗಳು  ಹಿಂದೆ ನೀ ಕೊಂದ ಆತ್ಮ , ಗೆಳತಿ .., ಮುಕ್ತಿ ನನಗೆ ಬೇಡವಾದ ವರ,
 ನನಗೆ ನಿನ್ನೊಡನೆ  ಮುಕ್ತನಾಗುವ ಬಯಕೆ .., ಮುಂದೆಲ್ಲೋ ಸಾವಿನಾಚೆಯ ಜನ್ಮದಲ್ಲಿ ನನ್ನ ತಪವು ಫಲಿಸಿ ನಿನ್ನ ಆರಾಧಿಸುವ ಜ್ವರ .... 

ಭಾನುವಾರ, ಫೆಬ್ರವರಿ 10, 2013

ಸುಳ್ಳೇ ಸರಿ...

ಮಾತು, ಮೌನ, ನೋವು ,ಸುಖದ ನಿಕ್ಷೇಪ ಅರಸಿ ಹೊರಟವಗೆ ಮಾರ್ಗ ಮಧ್ಯೆ ಅನಂತ ಅನಂತ ಅನುಭವ . ಗುರಿ, ನಡೆದು ಸೇರಲು   ಹೊರಟ್ಟಿದವಳ ಹೆಸರ ? ಇಲ್ಲ ಕಾಲ ಕೆಳಗೆ ಬಿಡದೆ ಬೀಳದೆ ಅಂಟಿದವಳ  ಹೆಸರ ??  ನೂರು ನೂರು ಪ್ರಶ್ನೆಗಳ ಸಲುಹುತಿರುವವನಿಗೆ ಆ ಪ್ರಶ್ನೆ ಮಲತಾಯಿಯ ಮಗು ..

ಬದುಕು ಅಧ್ಯಾತ್ಮದ , ಧೈವಾನುಭುತಿಯ  ಅವಕಾಶವ ? ಇಲ್ಲ ಸಾವಿನೆಡೆಗೆ ಮನುಜ ಮಾಡಿಕೊಳ್ಳುವ ಸಣ್ಣ ಪೂರ್ವ ಸಿದ್ದತೆಯ ?
ಪ್ರೀತಿ , ಸಂಬಂದ ,ಸ್ನೇಹ ,ದ್ವೇಷದ ಅವಶೇಷಗಳ ಕೆಳಗೆ ಮನುಕುಲ ಹುಡುಕುವುದು ತಾತ್ಕಾಲಿಕ ಮರೆವ , ನಶೆಯ ನಿಶೆಯ?
ಸಣ್ಣ  ಮಂಪರ ?ಮುಗಿದು ಹೋಗುವ ಆ ಜೋಂಪು , ದಿಟ್ಟಿಸಿ ನೋಡುವ ವಾಸ್ತವ , ಬಿಡದೆ ಕಾಡುವ ವ್ಯರಾಗ್ಯ !!  ನಡುವೆ ಸುಡುವ ಹೊಸ ಬಂಧಗಳು,  ಅವುಗಳ ತುಸು ಹಿಂದೆ ನಿಂತು ಅಣಕಿಸುವ ಹಳೆಯ ಅವಶೇಷದ ಧೂಳು .....

ಏತ ಹೋಗಲೋ ನಾನು ಸುತ್ತಲು ಕವಿದವನೇ
ಇತ್ತ ಬಾರದಿರೆಂಬ ದಾರಿಯೆಡೆಗೆ .... !!

ಇಂದು ನಿನ್ನೆಯೆದಲ್ಲ ಕಣ್ಣಿನ ದಣಿವು ,ದಿಟ್ಟಿಸೋ ಕಸುವು , ಆದರು ಮುಂಜಾವ ಕರೆಗೆ ನನ್ನ ಆರಂಬಿಸಿ , ಕತ್ತಲ ನಿದ್ದೆಗೆ ಜಾರಿಸಿ ಎಂತದೋ ಸುಂಕಕೆ , ಋಣಕ್ಕೆ ಸಿಲುಕಿ ನನ್ನ ಜೊತೆ ಸಾಗುವ ಬಗೆ...
ನನ್ನ ಬಿಟ್ಟು ಹೋಗಿ ಕ್ಷಣವೂ ದೂರವಿರದೆ ಮತ್ತೆ ಬಿಗಿದಪ್ಪುವ ಉಸಿರ ಬುಗ್ಗೆ ..,
ಸದಾ ನನ್ನೊಳಗೆ ಮೀಟುವ ,ನನ್ನ ಭಾವಗೀತೆಗಳಿಗೆ ಹಿನ್ನೆಲೆಯಾಗಿ ನನ್ನಾ ಕಾಲ ಚಕ್ರದೊಡನೆ ನೂಕುವ ಹೃದಯ ..,
ನನ್ನ ನಾನತ್ವಕ್ಕೆ , ಉಳಿವಿಗೆ , ಅಸ್ತಿತ್ವವೆ ಉದ್ದೇಶದಂತಿರುವ ಈ ದೇಹ ...,

ಈ ಪಯಣ ಎಲ್ಲಿಗೋ ಇರಬಹುದೆಂಬ ಸಮರ್ಥನೆ ಕೊಡುತಿದೆ.

ಎಲ್ಲರ ಬದುಕು ಈಗಿರಲಾರದೇನೋ ? :(
 ಪ್ರೀತಿಯ ಜೊಂಪು ಇಳಿಯದೆ ಬದುಕೆಲ್ಲ ಮಿಂದವರು ,
ಸಾಧನೆಯ ಎತ್ತು ದಾರಿ ಸವೆಸಿ ಆಯಸು ಕಳೆದು ...
ವಾಸ್ತವದೊಳಗೆ ವಾಸ್ತವಗಳ ಕೋಟೆ ಕಟ್ಟಿ ಮೆರೆದವರು ಇಲ್ಲೇ ಬದುಕಿದಾರಂತೆ .., ಸುಳ್ಳೇ ಸರಿ , ದ್ವಂದ್ವ ಮೀರಿ ಬದುಕಿದರಲ್ಲವೇ ನಿರ್ದಿಷ್ಟತೆ ??


                                                                                                            (to be continued ...)