ಭಾನುವಾರ, ಫೆಬ್ರವರಿ 15, 2015

ಉಪಾಯ!

ಬರೆಯಲೇಬೇಕಾದ
ಅನಿವಾರ್ಯತೆಗೆ ಸಿಕ್ಕಂತೆ
ಕೆಲವೊಮ್ಮೆ ಭಾವ ಮೂಡಿ ,
ಅಟ್ಟದಲ್ಲಿ ಅವಿತಿಟ್ಟ ಎದೆಗೆ
ಇಕ್ಕಳವಿರಿದು  ಮುಳ್ಳಿನಂತ
ನಿನ್ನ  ನೆನಪ ಹುಡುಕುತ್ತೇನೆ,
ಕೆದಕಿ ಮಾಡಿಕೊಂಡ ರಾಡಿಯ
ಹೊರತು ಮತ್ತೇನು ??
ಈ  ಗಾಯಕ್ಕೆ ರಕ್ತಸ್ರಾವವು ಇಲ್ಲ,
ಈ ಕಣ್ಣ ಗೂಡಲ್ಲಿ ತೇವವೂ  ಇಲ್ಲ ,
ಮತ್ತೆ ಅಟ್ಟಕ್ಕೆ ಎದೆಯ ಸೇರಿಸಿ ,
ಪೆನ್ನ ಮುಚ್ಚಳ ಮುಚ್ಚುತ್ತೇನೆ .

ಮುಂಚೆಲ್ಲಾ
ನಿನ್ನ ನೆನಪಾದಾಗಲೆಲ್ಲ ಕಣ್ಣಿರು ಹರಿದು
ನಾನು ಹಗುರಾಗುತ್ತಿದೆ ,
ಸ್ವಲ್ಪ ಮಾಗಿದಂತಾದೆ
ಕಣ್ಣಿರು ಬಂದಾಗ ಮಾತ್ರ
ನೀನು ನೆನಪಾಗುತ್ತಿದೆ ,
ನಂತರದಲ್ಲಿ ಯಾಕೋ
ಕಣ್ಣೀರಿಗೆ  ಬರವಾಗಿತ್ತು :(
ಗಾಳಿಗೆ ಕಣ್ಣೊಡ್ಡುವುದು ,
ಬೆಳಕಿಗೆ  ಕಣ್ಣೊಡ್ಡುವುದು,
ಒಟ್ಟಾರೆ ಕಣ್ಣಿರು , ನಿನ್ನ ನೆನಪು
ಜೋಡಿಯಾಗಿ ಬರುವಂತದೊಂದು
ಉಪಾಯ ಕಂಡುಕೊಂಡೆ !!!

ಈಗ ಬರೆಯಲ???

ಮ್ .. !


ಮುಚ್ಚಿಟ್ಟ ಪೆನ್ನ
ಪಕ್ಕಕ್ಕೆ ಸರಿಸಿ
ಕಾಗದಕ್ಕೆ ಕಣ್ಣಿರು
ಹರಿಸಿದೆ ಸಣ್ಣದೊಂದು
ಕವನ .. :-)
ಕಣ್ಣಿರು ಆರುವವರೆಗೂ
ಕಾದು ,
ನನ್ನ ಡೈರಿಗೆ ಆ ಕಾಗದ ಅಂಟಿಸಿ
ನಿದ್ದೆ ಹೋದೆ  ...!


ಬೆಳಕ ಮುಂದೆ
ಕಾಗದ
ಇಡಿದರೆ ಖಾಲಿ ಹಾಳೆ  ..
ಕಾಗದದಮೂಲಕ
ಬೆಳಕ ನೋಡಿದರೆ  ..
ಅಜ್ಞಾತನ  ಆತ್ಮ ಕಥೆ !!!!

ಪ್ರತಿಪಲನಕ್ಕೆ ಕೆಲವೊಮ್ಮೆ
ಕನ್ನಡಿ ಬೇಡ ..
ಬೆಳಕೇ ಸಾಕು !!




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ