ಮಂಗಳವಾರ, ಡಿಸೆಂಬರ್ 30, 2014

ಪಾಳು ಮನೆಯಾದರು..

ಸಿಡಿಲಿಗೆ  ಅರ್ಧ 
ಉರಿದ ಮರ
ಪ್ರತಿರೋಧವಿರದೆ 
ಒಣಗುತ್ತಿರುವೆ  , 

ಪಾಳು ಮನೆಯಾದರು  ಬೇಕು  .  
ಅಲ್ಲಿನ ಹೆಂಚಿಗೆ ಆಸರೆ  , 
ಬಾಗಿಲು  ಕಿಟಕಿಗೆ ಮೈಯಿ  ..,  
ನೆಲಕ್ಕೆ ಹೊಸ್ತಿಲು ., 
ಒಲೆಗೆ ಹೊಗೆ ಗೂಡು , 
ಯಾವ ಖಾಲಿತನವಾದರು 
ಪೂರೈಸುವೆ .., 
ಫಲಾನುಫಲಕ್ಕೆ 
ಒಂದಷ್ಟು ಆತ್ಮ ರತಿಯ 
ಗಂಟು ಸಾಕು ..,


ಅರ್ಧ ಬೆಂದಿದೆ ಬೇರು ,
ನಡುವು ಅರ್ಧ ..,
ಎಲೆಗಳಿಗೆ ಇಬ್ಬನಿಯು 
ದಕ್ಕುವುದು ಕಾಣೆ ., 
ರವಿಯ ಬೆಳಕ ಅದು 
ಮುಕ್ಕುವುದು ಕಾಣೆ ., 

ಅಪ ಮೃತ್ಯುವಂತದ್ದು ಎರಗಿ 
ಮುಕ್ಕಾಲು ಜೀವ ಸೊರಗಿ  .,
ವ್ಯವಹಾರ ಹಪಹಪಿಯಲ್ಲಿ 
ಕಾಲು ಜೀವ  ಕೊರಗಿ .., 

ಆತ್ಮ ಹತ್ಯೆಗಾದರು ಸರಿ 
ಪಾಳು ಮನೆಯಾದರು  ಬೇಕು  ..... 

ಸೋಮವಾರ, ಡಿಸೆಂಬರ್ 22, 2014

ಎಡೆ

ಒಂದಿಷ್ಟು ಕನಸು
ಕೊಂದ್ದಿದೇನೆ
ರಕ್ತ ಕೈಗಂಟಿದೆ ,
ಪಶ್ಚಾತಾಪಕ್ಕೆ
ಕವಿತೆಗಳ
ಎಡೆ ಇಡುತ್ತೇನೆ .. 

ಶನಿವಾರ, ಡಿಸೆಂಬರ್ 20, 2014

ಪ್ರಾರ್ಥನೆ ...

ಹಿಂದೆ ಎಂದೋ ಬರೆದ ಸಾಲುಗಳೆಲ್ಲ ಅಪರಿಚಿತ ಎನ್ನುವಷ್ಟು ಬದುಕು, ಮನಸ್ಥಿತಿ ಬದಲಾಗಿದೆ , ನನ್ನದೇ ಬರಹಗಳು ನನ್ನ ಅಣಕಿಸುತ್ತಿವೆ , ನೋವಿನ ತೀಕ್ಷ್ಣತೆ , ಭಾವಗಳ ಉತ್ಕಟತೆ ಎಲ್ಲ  ಈಗ ತಳ ತಲುಪಿವೆ  . ಅಂದು ಇಡಿಯಾಗಿ ಆವರಿಸಿದ್ದ ಚಿಂತೆಗಳ ತೊಳಲಾಟಕ್ಕೆ ಒಂದು ನಿರ್ದಿಷ್ಟ ಹಾದಿಯಿತ್ತು,  ಈಗೆ ಆರಂಭವಾಗಿ ಈಗೆ ಮುಗಿಯುವ ಅದೃಶ್ಯ ಹಳಿಗಳ ಜಾಲವಿತ್ತು , ಆ ಜಾಲದಲ್ಲೇ ಗಿರಕಿ ಹೊಡೆಯುತ್ತಾ  ಕಳೆಯುತ್ತಿದ ಸಮಯ, ಮತ್ತೆ ಮತ್ತೆ ತುಳಿದ ಹಾದಿಯ ಅನುಕರಿಸಲು ಮಾಡಿದ ವ್ಯರ್ಥ ಯತ್ನ , ಅಸಾಧ್ಯ ಎನುವಷ್ಟೂ ಖಿನ್ನತೆ , ಮ್ .. ಆ ಕ್ಷಣಕ್ಕೆ ಅಲ್ಲಿಂದ ನಾ  ಮುಕ್ತನಾಗುವುದು ನನ್ನ ಸುತ್ತಲಿನವರು ಬಯಸಿದ , ನಾನು ಎಂದು ಬಯಸದ ಬೌದ್ದಿಕ ಕಾದಾಟ . ಒಂದು ಹಂತಕ್ಕೆ ಚಿಂತನೆಗಳಿಗೆ ಏಕತಾನತೆ ಕಾಡಿತೇನೋ ಅವೇ ಏಕಾಗ್ರತೆ ಕಳೆದುಕೊಂಡು ಸಡಿಲವಾಗಿ ಹರಡಿ ಹೋದವು, ನಾ   ನನ್ನನ್ನೇ ಕೆತ್ತಿ  ಬರೆಯುತಿದ್ದ ಕವನಗಳಿಗೆ ಇಟ್ಟ ವಿರಾಮ ಕೂಡ  ನೆನಪ ದೇಹ ವಿಸರ್ಜನೆಗೆ ಪೂರಕವಾಯಿತು.
ನಿಸ್ತೆಜಗೊಂಡ ದುಃಖಕ್ಕೆ ವಿಮುಖನಾಗಿ ಹೊಸದೊಂದು ದಾರಿ ಅರಸಬೇಕ್ಕಿತ್ತು  , ಹಾಗೆ ಹುಡುಕ ಹೋರಾಟ ದಾರಿಯಲ್ಲಿ ಮದುವೆ , ಮಗು ಹೊಸದೊಂದು ನಿಲ್ದಾಣ . ಈಗೆ ಸಿಕ್ಕ ನಿಲ್ದಾಣಗಳೆಲ್ಲ ತಲುಪಿ ಸೇರಬೇಕಾದ ಗೊರಿಗಳಾಗಿಬಿಟ್ಟರೆ  !  ಹಾಹ್! ಎಲ್ಲರ ಬದುಕು ಸುಖಾಂತ್ಯ . ಆದರೆ ಹಾಗಾಗದು , ಸಿಕ್ಕ ನಿಲ್ದಾಣ ಮತ್ತು ಅವುಗಳೊಳಗಿನ ಸಾಂತ್ವಾನ ಅರೆ ಕ್ಷಣದ   ಮೋಹದಷ್ಟೇ ಅಲ್ಪಾಯುಷಿ . ಮತ್ತೆ ಹೊಸ ಹುಡುಕಾಟಗಳು , ಗೊಂದಲಗಳ ತಡಕಾಟ , ಏಕಾಗ್ರತೆಯಿಂದ ಚಿಂತೆಗಳ ಸುಳಿಯಲ್ಲಿ ಗಿರಕಿ ಹೊಡೆಯುವ ಅದ್ಭುತ ಧ್ಯಾನ ಮತ್ತು ಅದು ತೋರಿಸುವ ಭೌತಿಕ ನೀರ್ವಾಣದ ಆಮಿಷ ...  ಯಾಕೋ ಈ ನಡುವೆ ಅಂತಹ ಯಾವ ಮೋಹವು ನನಗೆ ದಕ್ಕುತ್ತಿಲ್ಲ , ಯಾವ ದಾರಿ ತುಳಿದರು ನಾಲಕ್ಕು ಹೆಜ್ಜೆಗೇ  ಕಾಡುವ ನೀರಸತೆ , ವೈರಾಗ್ಯದಂತಹ ಸೋಮಾರಿತನ , ಎಂತದೋ ಜಡತ್ವ . ಎಲ್ಲ ಹೊಸ ಪ್ರಯತ್ನಗಳು ಯಾವುದೋ ಓಟದ  ಆಟಕ್ಕೆ ನೋಂದಣಿ ಮಾಡಿಸಿದಂತೆ ಭಾಸವಾಗುತ್ತದೆ , ಓಡುತಿರುವವರ  ಬೆನ್ನ  ಮೇಲೇ   ಬೆವರು ಮಾಡಿಕೊಂಡ ದಾರಿ , ಉಳಿಸಿದ ಕಲೆಯ ಕೊರೆತ ,  ಅಂತ್ಯವೇ ಇಲ್ಲದ ಓಟಕ್ಕೆ ಬೆನ್ನು ತೋರಿಸಿದಕ್ಕೆ ಸಮರ್ಥನೆ ಕೊಟ್ಟು ತಲೆ ನೇವರಿಸುತ್ತವೆ . ಕುಳಿತರೆ ? ನಿಂತಲ್ಲಿ ನಿಂತರೆ ? ಜಡತ್ವ .. ಹರಿದರೆ ಬದುಕು , ನಿಂತರೆ ಜೀವಂತ ಹೆಣ , ನಾವೇ ಹೊರಬೇಕಾದ , ಯಾರು ಕಣ್ಣೀರ ಮುಯ್ಯು ಹಾಕದ ಹೆಣ (ಜನರ ಮುಯ್ಯಿ  ನನಗೆ  ಸಾಮಾಜಿಕ ಪ್ರಸ್ತುತತೆಯ ತೋರುಗನ್ನಡಿ ),  ಸಾಯುವ ಮೊದಲೆ ಹೆಣವಾಗುವುದು ಹೇಸಿಗೆ .  ಮತ್ತೆ ನನ್ನ ಸಂಬಾಳಿಸಿ  ನಾನೇ ಪುಟಿಯುತೇನೆ ಆ ದಾರಿಗಳೆಲ್ಲ ಕವಲಾಗುವ ವೃತ ತಲುಪುತ್ತೇನೆ  , ಮತ್ತೆ ಸುತ್ತ ದಿಟ್ಟಿಸುವುದು ವ್ಯತ್ಯಾಸವೇ ಇಲ್ಲದ ದಾರಿಗಳ ಮಧ್ಯೆ ತರ್ಕಬದ್ದ ಆಯ್ಕೆಗೆ ಚಡಪಡಿಸುವುದು .


ಪ್ರಾರ್ಥನೆ
 ಇಗೋ ನನ್ನ ಪೂರ್ತಿ
ಮಾಡುವ ಸವಾಲುಗಳೆ ,
ಎಲ್ಲಿರುವಿರೋ ,
ಒಟ್ಟಾಗಿ  ಬನ್ನಿ ,
ಉತ್ತರ ಹುಡುಕುವ  ..,
ಕೂತು ಹರಟುವ ,
ಒಂದು ವಿಮರ್ಶೆ ,
ಒಂದಷ್ಟು ವಾದ ,
ಹೇಗೋ ನೀವಳಿಸಿ
ಬಿಸಾಡುವ
ಉತ್ತರಗಳ ಪಟ್ಟಿ ..,
ಅದ  ಸುಟ್ಟು , ಬೆಳಕು
ಹರಡುವ ,
ನೆರಳ ಸೃಷ್ಟಿಸಿ

ಮರೆಯಾಗುವ ..

ಮುಂದೆ
ನಿಮ್ಮ ಅಹ್ವನವಾದಗಲೆಲ್ಲ ,
ಹೊಗೆ ಉಸಿರಾಡುವ ,
ನಿಮ್ಮ ಕೈಗಂಟಿದ ಈ ಬೂದಿ
ಅನಂತವಾಗಲಿ ,
ಬಿಡಿಸಲು ಅನುವಾಗಲಿ
ಬದುಕ ಕಗ್ಗಂಟು ...












ಭಾನುವಾರ, ಡಿಸೆಂಬರ್ 14, 2014

ಮಂಗಳವಾರ, ಡಿಸೆಂಬರ್ 2, 2014

ಪೂರ್ತಿಯಾಗಲಿ

ಅರೆ ಬರೆ ಕಾವ್ಯ .., 
ಪೂರ್ತಿಯಾಗಲಿ   

ಇಳೆಯ ಪರಿಧಿ
ಮೀರಿ ,
ಅವನ ಸರದಿ
ಜಾರಿ ,
ಖಾತ್ರಿಯಾಗಲಿ , 

ಎಂದು ಜಾರದ 
ಕಣಿವೆ ,
ಎಂದು ನಿಲ್ಲದ 
ಹರಿವು .., 
ಕಾವ್ಯದೊಡಲ 
ತುಂಬಿ ಬರಲಿ ,

ಬದುಕಿ  ಬರಲಿ 
ಬದುಕು 
ನೀರಸತೆ ಮೀರಿ , 
ಉಕ್ಕಿ ಬರಲಿ 
ಕಾವ್ಯ 
ಜಡತನವ ತೂರಿ ., 

ಅರೆ ಬರೆ ಕಾವ್ಯ .., 
ಪೂರ್ತಿಯಗಲಿ  

ಇಳೆಯ ಪರಿಧಿ
ಮೀರಿ ,
ಅವನ ಸರದಿ
ಜಾರಿ ,
ಖಾತ್ರಿಯಾಗಲಿ , 

ಎಂದು ಜಾರದ 
ಕಣಿವೆ ,
ಎಂದು ನಿಲ್ಲದ 
ಹರಿವು .., 
ಕಾವ್ಯದೊಡಲ 
ತುಂಬಿ ಬರಲಿ ,

ಬದುಕಿ  ಬರಲಿ 
ಬದುಕು 
ನೀರಸತೆ ಮೀರಿ , 
ಉಕ್ಕಿ ಬರಲಿ 
ಕಾವ್ಯ 
ಜಡತನವ ತೂರಿ ., 

ಅರೆ ಬರೆ ಕಾವ್ಯ .., 
ಪೂರ್ತಿಯಗಲಿ  










ಗುರುವಾರ, ನವೆಂಬರ್ 27, 2014

ಲೆಕ್ಕ

ದಿಗಿಲು ದಿಗಿಲು
ಬದುಕ ಒಡಲು .,

ಒಮ್ಮೆ ವಿಸ್ಮಯ , ಒಮ್ಮೆ ವಿಕೃತ
ನಿತ್ಯ ವಿಕ್ರಯವೆಸಗೋ
ಮಡಿಲು ..,

ಸರಸ ಬೆರೆಸಿ ,
ಮನವ ಮೆರೆಸಿ ..,
ಉಸಿರ ಸವೆಸುವ
ದೀರ್ಘ ಕಡಲು ..,

ಅಲ್ಲಿ ಜನನ ,
ಇಲ್ಲಿ ಜನನ,
ನಡುವೆ  ಅಣಕಿಸೊ ,
ಸಾವ ಗಣನ ..,

ಅಲ್ಲಿ ಬೆಳಕು ,
ಇಲ್ಲಿ ಬೆಳಕು
ಸರದಿಯಂತೆ
ಕತ್ತಲ ಮೆಲುಕು ..,  

ದೂರ ನಿಂತ
ರವಿಯ ಕಣ್ಣಲಿ  .,
ನಿತ್ಯವಿಲ್ಲಿ  ರಂಗಮಂಚ ..,
ಓಡಿ ,ಕುಂಟಿ ,ತೆವಳಿ
ಹುಗಿದು ಹೋದವು ಎಷ್ಟೋ .,, ??
ಸೀಳಿ ಬಗೆದು ತೆವಳಿ
ಜಿಗಿಯುತ್ತಿರುವವು ಅಷ್ಟೇ .., !!

ಲೆಕ್ಕಪತ್ರಕ್ಕೆ ಅವನೆ ರುಜುವು ..,












ಮಂಗಳವಾರ, ನವೆಂಬರ್ 25, 2014

ಸೂರ್ಯಾಸ್ತಮ...

ಇಂದು ಕಡೆಯ ಸೂರ್ಯಾಸ್ತಮ !!
ಇಡಿ ಊರೇ ದಿಗಿಲಿನಿಂದ ,ಆಶ್ಚರ್ಯದಿಂದ ಮುಗಿಲು ನೋಡುತ್ತ ನಿಂತಿದೆ , ನಿನ್ನೆಯವರೆಗೂ ಯಾವ ಸೂರ್ಯನ ಉದಯಾಸ್ತಮಗಳು ಉಸಿರಿನಷ್ಟೇ ನಿರಂಕುಶವಾಗಿತ್ತೋ  ಅದು ವಿಸ್ಮಯಕಾರಿ ರೂಪು ತಳೆದಿದೆ . ಜನ ಮಾನಸವೆಲ್ಲ ವಿಧ ವಿಧ ವಿಭಾಗವಾಗಿ ,ಒಂದಿಷ್ಟು ದುಃಖದಲ್ಲೂ , ಒಂದಷ್ಟು ವಿಸ್ಮಯದಲ್ಲೂ ,ಒಂದಷ್ಟು ಆಘತದಲ್ಲೂ ಹಂಚಿಹೊಗಿವೆ .
ಈಗೆ ಧಿಡೀರನೆ ಹಬ್ಬಿದ ಸುದ್ದಿ ಊರ ತುಂಬೆಲ್ಲ ಹರಡಿ ಎಲ್ಲರಲ್ಲೂ ಪ್ರಶ್ನೆಗಳು ಉಕ್ಕಿ ಹರಿದು ಅವುಗಳ ದಟ್ಟಣೆಗೆ ಅವೇ ನಲುಗುತ್ತಿವೆ  . ಮಂದಿರದ ಬಾಗಿಲ ಬಳಿ ಸೇರಿದ ಸಮೂಹ ಕಾಲ್ತುಳಿತಡ  ಆಟೊಟಕ್ಕೆ ನಲುಗಿ ದೇವರಿಗೇ ದರ್ಶನದ ಭಾಗ್ಯ ತಪ್ಪಿಸುವಂತೆ ಒಂದೇ ಒಂದು ಪ್ರಶ್ನೆಯು ತುಟಿಯ ದಾಟಿ ಬಾರದೆ ಗಂಟಲಿನ ಇಕ್ಕೆಲದಲ್ಲಿ ಚಡಪಡಿಸುತ್ತಿವೆ.
T V ಕಾರ್ಯಕ್ರಮದಲ್ಲಿ, ಅಂತರ್ಜಲದಲ್ಲಿ ಎಲ್ಲೂ ಕೂಡ ಇದರ ವಿವರವಿಲ್ಲದಿದ್ದರೂ ಜನ ನಂಬಿದಂತೆ ಕಂಡು ಬರುತ್ತಿದೆ.
ಈ ಸಂಜೆ ಸೂರ್ಯನದು ಕಡೆಯ ಸೂರ್ಯಸ್ತಮ ಎಂದು ಘೋಷಿಸಿದ್ದೆ ಸರಿ ,ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಮೋಡದಂತೆ ಮುಂದುವರಿದು ಊರ ಕೇರಿಗೆಲ್ಲ ಸುದ್ದಿ ಹಂಚಿದೆ. ಹಿಂದಿನ ರಾತ್ರಿ ಶಿವಾರಾತ್ರಿಯಾಗಿದದ್ದ ನೆನೆದು ಕಡುಕಪ್ಪು ಕತ್ತಲೆಯಲ್ಲಿ ಇಡಿ ರಾತ್ರಿಯ ಕಳೆದದ್ದರಿಂದ ಕತ್ತಲ ಬಗ್ಗೆ ಜನರಲ್ಲಿ ಸಣ್ಣ ಮಟ್ಟದ ಜಿಗುಪ್ಸೆ ಹುಟ್ಟಿದೆ , ಆ ಜಿಗುಪ್ಸೆ ಈಗ ಪರ್ವತಾಕಾರವಾಗಿ ಬೆಳೆಯುವ ಮುಂಸೂಚನೆ ಎಲ್ಲರಿಗು ಗೋಚರಿಸುತ್ತಿದೆ .


ಸವಿತ  ಮೆಲ್ಮಹಡಿಯಲ್ಲಿ ನಿಂತು ಅಕ್ಕ ಪಕ್ಕದ ಮನೆಯವರೊಡನೆ ಮಾತನಾಡಿಸುತ್ತ ನಿಂತಿದ್ದಾರೆ , ಗಂಡ  ಶೇಷಾದ್ರಿ  ಬ್ಯಾಂಕ್ ಉದ್ಯೋಗಿ ೨೦ ವರ್ಷಗಳ ಹಿಂದೆಯ ಬಿ ಎಸ್ಸಿ  ಮುಗಿಸಿದ್ದ ಅವರು ನುಗ್ಗಹಳ್ಳಿಯ ಕೆನರಾ ಬ್ಯಾಂಕಿಗೆ ವರ್ಗವಾಗಿ ಸರಿಯಾಗಿ ೨ ವರುಷ  . ಪಕ್ಕದ ಮನೆಯವರು ಹೆಂಡತಿ ಸವಿತಳಿಗೆ ಹೇಳುತ್ತಿದನ್ನು ಕೇಳಿಸಿದರು ಕೇಳಿಸದಂತೆ ನಿರ್ಲಕ್ಷಿಸಿ ಏನೋ ಓದುತ್ತ ಕುಳಿತಿದ್ದರು . ಓದುತ್ತಿದ  'ನಿರಾಕರಣ '  ಕಾದಂಬರಿಯ ನಾಯಕ ಹಿಮಾಲಯದ ತಪ್ಪಲಿನ ಹಳ್ಳಿಗಳಲ್ಲಿ ನಡೆಯುತ್ತಿದದ್ದು,  ಅವನ ಹುಡುಕಾಟದ ತಳಮಳ ,ಪರ್ವತಾರೋಹಣದ ದಣಿವು , ಕೊರೆಯುವ ಚಳಿಯ ಮೊನಚು ಎಲ್ಲ ಒಟ್ಟಾಗಿ ಛೇಡಿಸಿದಂತಾಗಿ ಮಹಡಿಯಮೇಲೆ ನಡೆಯುತ್ತಿರುವ , ನಡೆಯ ಬಹುದಾದ ವಿಸ್ಮಯಕ್ಕೆ ನೆರವಾಗುವಂತೆ ದಾವಂತವಾಗಿ ಮೆಟ್ಟಿಲು ಹತ್ತಿ ಮಹಡಿಗೆ ನಡೆದರು .ತಮ್ಮ ಒಟ್ಟು ೪೮ ವರುಷಗಳ ಜೀವಿತಾವದಿಯಲ್ಲಿ ಹಲವಾರು ಬಗೆಯ  ಮೌಡ್ಯಗಳನ್ನೂ  ,ಕಂದಾಚಾರಗಳ ನೋಡಿದ್ದರು. ಮನದಲ್ಲಿ ಓದಿದ ವಿಜ್ಞಾನವೆಲ್ಲ ಗುಂಪಾಗಿ ಬಂದು ಹಾಸ್ಯ ಮಾಡಿದಂತೆ ಅನಿಸಿದರೂ ತಾನು ನಾಳೆ ಹುಟ್ಟಿಬರುವ ಸೂರ್ಯನ ಮುಂದಾಗಿರಿಸಿ ತನ್ನ ಹೆಂಡತಿ ಮತ್ತು ಅಕ್ಕ ಪಕ್ಕದವರ ಪರಿಹಾಸ್ಯಮಾಡಲು ಸಾಕ್ಷ್ಯ ಸಂಗ್ರಹಕ್ಕೆ ಹೋಗುತ್ತಿರುವಂತೆ ಸಮರ್ಥಿಸಿ  ಕೊಂಡು ಒಂದು ಮೂಲೆಗೆ ಹೋಗಿ ನಿಂತದ್ದರು  .

"ಯಾರ್ ಹೇಳುದ್ರು , ಇನ್ಗಂತ ?"  ಸವಿತಮ್ಮ  ಪಕ್ಕದಮನೆಯ ಶ್ಯಮಲಳನ್ನ  ಕೇಳಿದರು ,"ನಾವು   ಸಾಮನ್ ತರಕ್ಕೋದಾಗ  ಅಂಗಡಿಲಿ ಮತಾಡ್ಕೊತ್ತಿದ್ದದು ಕೇಳಿಸ್ತು " ಅಂದ ಶ್ಯಾಮಲಾ  ಮತ್ತೆ ಆಕಾಶವನ್ನ ದಿಟ್ಟಿಸಿ ನೋಡ್ತಾ ನಿಂತರು .
"ಇದು ನಿಜಾನ , ಮತ್ತೆ ಟಿ ವಿ ಲಿ ಯಾಕೆ ಇದ್ರ ಬಗ್ಗೆ ನ್ಯೂಸ್ ಇಲ್ಲ ?ನಮ್ಮನೆಯವ್ರು  ಇಂಟೆರ್ನೆಟ್ನಲ್ಲು ನೋಡುದ್ರಂತೆ , ಅಲ್ಲೂ ಸುದ್ದಿ ಇಲ್ವಂತೆ ?! "  ಸವಿತಮ್ಮ ಮತ್ತೆ  ಶ್ಯಮಲಳೆಗೆಡೆಗೆ ದಿಟ್ಟಿಸಿದರು . ನಡೆಯುತ್ತಿರುವ ಅವಿಸ್ಮರಣೀಯ ಘಟನೆಯ ಕಣ್ತುಂಬಿಕೊಂಡು ಸೂರ್ಯನೇ ಇಲ್ಲದ ಪ್ರಪಂಚದಲ್ಲಿ ಮುಂದೆ ಹುಟ್ಟಿ ಬರುವ ತನ್ನ ಸಂತತಿಯ ಮುಂದೆ ನೆನಪು ಮೆರೆಯುವ ಆಸೆಗೆ ಮತ್ತೆ ಮತ್ತೆ ವಿಘ್ನವೆಸಗುತ್ತಿರುವ ಸವಿತಮ್ಮನ ಒಮ್ಮೆ ತೀಕ್ಷ್ಣವಾಗಿ ನೋಡಿ "ರೀ , ಅದೆಲ್ಲ ನನ್ಗೊತಿಲ್ಲ ನಾನ್ ಕೇಳಿದ ಮಟ್ಟಗೆ , ಇದನ್ನ ತಡಿಯೋಕಾಗಲ್ಲ ಅದನ್ನ ಜನಕ್ಕೆ ಗೊತ್ತಾಗೊ ಹಾಗೆ  ಮಾಡಿ ಹೆದರಿಸೋದ್ ಬಿಟ್ಟು ಹಾಗೆ ಇದ್ರೆ ಸರಿ ಅಂತ ಮಾಡಿದಾರಂತೆ  ,ಅದಕ್ಕೆ ಈ ವಿಚಾರ ಯಾರು ಸುದ್ದಿ ಮಾಡ್ತಿಲ್ಲ " ಅಂದು ಪುನಃ ಆಗಸ ದಿಟ್ಟಿಸುವ ಕಾರ್ಯಕ್ಕೆ ನಿಯತವಾದರು .

ಇತ್ತ ಶೇಷಾದ್ರಿ ನಡೆಯುತ್ತಿರುವ ಸಂಬಾಷಣೆ ಕೇಳಿ ಮೆಲ್ಲಗೆ ಯೋಚನಾ ಲಹರಿಗೆ ಜಾರಿದರು .
ಕಾಲೇಜಿನ ದಿನಗಳಲ್ಲಿ ಕಲಿತ ಭೌತಶಾಸ್ತ್ರ , ಗುರುತ್ವಾಕರ್ಷಣೆ , ಸೌರಮಂಡಲ , ಎಲ್ಲದರ ಮೆಲುಕು ಹಾಕಿ ಹೇಗೆ ಇದು ಸಾದ್ಯ ಎಂದು ಬಗೆ ಬಗೆಯಾಗಿ ಚಿಂತಿಸಿದರು . ಸೂರ್ಯನಿಗೆ ಮತ್ತು  ಭೂಮಿಯ ನಡುವೆ ಮತ್ತೊಂದು ಕಕ್ಷೆ  ಮೂಡಿ ಆ ಕಕ್ಷೆಯಲ್ಲಿ ಮತ್ತಾವುದೋ ಅಂತರಿಕ್ಷದ ವಸ್ತು ಸದಾ ಭೋಮಿಯೊಟ್ಟಿಗೆ ಸೂರ್ಯನ  ಗಿರಕಿ ಹೊಡೆದು , ಒಂದು ಅನಂತ ಗ್ರಹಣ ಮೂಡಿದರೆ ಮಾತ್ರ ಅದು ಸಾಧ್ಯವೆಂದು ತೋರಿತು ! ಆದರೆ ಸೂರ್ಯನ ಗುರುತ್ವಾಕರ್ಷಣೆ ಭೂಮಿಯ ಮೇಲೆ ವೈಪರಿತ್ಯವಾಗಿ ಅದರ ಪರಿಣಾಮ ಭೂಮಿಯ ಸರ್ವ ಅಣುಗಳ ಮೇಲು ಹಾಗಿ ಎಂತದು ಅನಿರ್ದಿಷ್ಟ  ಬಂದೆರಗಿದಂತೆ ಭಾಸವಾಯಿತು .

ಮತ್ತೊಮ್ಮೆ ಚೇತರಿಸಿಕೊಂಡ ಶೇಷಾದ್ರಿ ಕೆಂಪೆರುತ್ತಿರುವ ಸೂರ್ಯನನ್ನೇ ದಿಟ್ಟಿಸಿ ನೋಡುತ್ತಾ ಅವನ   ಲಯಕ್ಕೆ ಮತ್ತೆ ಮಾರು ಹೋದರು , ಅವನ್ನ ಕಡು ಕೆಂಪು ಶರೀರ , ಅವನ ಬಿಳ್ಕೊಡಲು ಎಂಬಂತೆ ಸುತ್ತ ಅವನ ಕವಿದ ಮೋಡಗಳ ಹಾಸು , ಆ ಮೋಡಗಳ ಸೇರಲೆಂದು ಹಾರುವಂತೆ ಕಾಣೋ ಹಕ್ಕಿಗಳ ಸಾಲು , ಎದುರು ಮನೆಯ ಮತ್ತು ಹಿಂದಿನ ಮನೆಯ ಮುಂದಿನ  ತೆಂಗಿನ ಮರದ ಗರಿಗಳು ಗಾಳಿಗೆ ತೋಯ್ದು  ಮೂಡಿಸುತ್ತಿರುವ ಶಾರೀರ ಎಲ್ಲ  ಇಂದು  ಅಸಾದಾರಣವಾಗಿ ಕಾಣುತಿತ್ತು .

ಮತ್ತೆ ಪ್ರಜ್ಞೆ ಜಾಗ್ರ್ತವಾಗಿ , ಇಲ್ಲ ,ಎಲ್ಲಾದರು ಉಂಟೆ , ಎಲ್ಲ ಸುಳ್ಳು , ಸೂರ್ಯನ ಉಳಿವಿಕೆ , ಅವನ ಪ್ರಾಸ ಮತ್ತು  ಎರಡರ ಛಂದಸ್ಸು ನಿತ್ಯ ಸತ್ಯ ಯಾರೋ ಬುದ್ದಿ ಹೇಡಿಗಳ ಮಾತು  ನಾನ್ಯಾಕೆ ಈಗೆ ಮರುಗುತ್ತಿರುವೆ ಎಂದೆನಿಸಿ  ಮೈ ಕೊದರಿ ಹೆಂಡತಿಯ ಕಡೆ ನೋಡಿ "ಸವಿತಾ , ನಡಿಯೇ ರಘುನ ಏಳ್ಸು ,ಗಂಟೆ ೬ ಆಯಿತು , ಆ ಹುಡುಗ್ರು ಹಾಗೆ ಮಲಗಿವೆ , ಬೆಳಗ್ಗಯಿಂದ ಏನು ತಿಂದಿಲ್ಲ ಅವು , ನಡಿ " ಅಂತ  ಹೇಳಿದರು . ಹೆಂಡತಿ ತನ್ನ ಮಾತಿಗೆ ಕಿವಿಗೊಡದನ್ನು ಕೇಳಿ ಕೋಪ ಉಕ್ಕಿ ಬಂದು "ಲೇ , ನಡಿಯೇ ಕೆಳಕ್ಕೆ , ಹಾದಿ ಬೀದಿ ಮಾತು ಕೇಳಿ  ಬಾಳ್ಗೆಡ್ಸ್ ಬೇಡ " ಅಂತ ಗದರಿದರು .
ಪಕ್ಕದ ಮನೆಯಾಗೆ ಕೇಳಿಸದ ಹಾಗೆ ಗದರಿದರು , ಆಕೆಗೆ ಏನೋ ಅನಿಸಿ ಈ ಇಬ್ಬರು ಗಂಡ ಹೆಂಡಿರನು ಹೆಡ್ಡರ ಕಾಣುವಂತೆ ಕನಿಕರದಿ ನೋಡಿ ಮತ್ತೆ ಆಗಸಕ್ಕೆ ಕಣ್ಣಾದಳು .

ಇತ್ತ ಗಂಡನ ಮಾತು ಕೇಳಿ ಕೆಳಕ್ಕೆ ಇಳಿಯ ಬೇಕಾದ ಸವಿತಮ್ಮ ಮೆಟ್ಟಿಲು ಇಳಿದು  ತನ್ನ ಗಂಡನ ಮೇಲಿನ ಕೋಪವನ್ನು ಅವನಿಗೆ ತಿಳಿಯುವಂತೆ ಮತ್ತು ಆತ  ಪ್ರಶ್ನಿಸದಂತೆ ತೋರುತ್ತ ಮನೆಯ ಒಳ ಹೊಕ್ಕಳು .

                                                                                                                 (ಮುಂದುವರಿಯುವುದು )
                     






















ಶನಿವಾರ, ನವೆಂಬರ್ 15, 2014

ಗಾಯ!!

ಹುಸಿ ಗಾಯ
ಹಸಿ ಗಾಯ
ಮಾಸಿ ಮುಗಿದರು
ನುಸುಳಿದ  ಗಾಯ ,

ಮುಗಿದ ಗಾಯ ,
ಮಾಗಿದ ಗಾಯ ,
ಹುಗಿದು ಮರೆತು
ಹಗೆದು ತೆಗೆದ  ಗಾಯ ,

ಜರಿದ ಗಾಯ
ಹಗೆಯ ಗಾಯ
ಒಣ ಮನವ
ಕೊರೆದು ಭಿರಿದ ಗಾಯ ..,

ಮೌನದ ಗೋಡೆಗಳ
ಮೇಲೆ
ಮಾತು  ಮೂಡಿಸಿದ
ಗಾಯ ..,
ಮಾತಿನ ಮಂಟಪಕ್ಕೆ
ಮೌನ ಇರಿದ
ವಿಗ್ನ ಗಾಯ ..,

ಸಾವ ಮರೆಸಿದ
ಗಾಯ
ಮರೆವ ಕೊಂದ
ಗಾಯ ..,

ನೆನಪ ಹಾದಿ ಸವೆಸಿ
ಮೊಣಕಾಲ ಕೀಲ
ನಲುಗಿಸಿದ ಗಾಯ ..,

ಮನದ ಮೇಲೆ
ಗಾಯ
ಮನದ ಒಳಗೆ
ಗಾಯ ..,

ಈ ಜೀವದ
ಅಣು ಅಣುವಲು
ಗಾಯ ..,


















ಗುರುವಾರ, ನವೆಂಬರ್ 6, 2014

ಯಾಕಿ ಮೌನದ ಮುನಿಸು !

ಯಾಕೀ ಮೌನದ
 ಮುನಿಸು??

ಮಾತ ಅಳೆದು
ಅಳೆದು ,
ಸುರಿದು 
ನಾ ಬರಿದು 
ಬರಿದು .., 

ಎಂತ ದಾವು 
ನಿನ್ನದು ??

ಯಾಕಿ ಮೌನದ
ಮುನಿಸು ..

ಸುತ್ತ ನೋಡಿ
ಸದ್ದ ಮಾಡಿ
ಒಮ್ಮೆ ಗುನುಗ
ಬಾರದೆ ..

ಜಿನುಗೋ
ಪ್ರಾಣ ಒಮ್ಮೆ
ಜಿಗಿಸಿ ಮನವ
ತೊಯ್ಯಬಾರದೆ ??

ಯಾಕಿ ಮೌನದ
ಮುನಿಸು ..,

ಕಣ್ಣು ಕರಗಿ
ನೆಲವು ಜರುಗಿ
ಸಣ್ಣ ತೊರೆಯೆ
ಹರಿದಿದೆ ..,
ಒಮ್ಮೆ ಈಜ ಬರದೆ ..,
ಭವದ ಎಲ್ಲ
ಭಯವ ಮರೆತು
ಒಮ್ಮೆ ಮೀಯಬಾರದೆ ..,

ಭಾವ ತಾಕಿ
ಮನಸು ಜೀಕಿ
ನಿನ್ನದು ನಲಿವುದೇ ..!

ಮುನಿಸ ಮರೆತು
ಮೌನ ತೊರೆದು
ಒಮ್ಮೆ ಗುನುಗಬಾರದೆ ..,
ಒಮ್ಮೆ ಮರಳಬಾರದೇ ..,


ಯಾಕಿ ಮೌನದ ಮುನಿಸು ,
ಯಾಕಿ ಮೌನದ ಮುನಿಸು,






ಮಂಗಳವಾರ, ಅಕ್ಟೋಬರ್ 28, 2014

ಅಮ್ಮ...

ಅಮ್ಮ ನಿನ್ನ ಹಣೆಯ ಅಂಚ ನೆರಿಗೆಗಳು ,
 ನೆತ್ತಿಯ  ನಡುವಿನ ಬಿಳಿಯ ಕೂದಲು .,
ನನ್ನ ಏಕಾಂತಗಳ ಬೆದರಿಸುತ್ತವೆ ..
ಮತ್ತೆಲೋ ತಾಯ್ತನ ಹೊಸದಾಗಿ ಅರಳುವುದ ಕಂಡು ,
ನಿನ್ನೆಡೆ ಮತ್ತಷ್ಟು ಏಕಾಂತಗಳು ಹುಟ್ಟುತ್ತವೆ ..,




ಗುರುವಾರ, ಆಗಸ್ಟ್ 7, 2014

ಮತ್ತೆ ಬರೆದೆ ..

ಬರದೆ ಬತ್ತದ 
ಬರೆವಣಿಗೆಯ ಸುತ್ತ ,
ಇಂಗಿ ನುಂಗಿದ 
ಕಂಬನಿಯ ಹುತ್ತ ,
ಮಳೆಗೆ ಜರುಗಿ ,ಮರಳಿ ಕರಗಿ
ಸುರುಳಿ ಸುರುಳಿ 
ಸುತ್ತ ಸತ್ತು ಒರಗಿದೆ , 
ಸತ್ತ ಕನಸ ಪಕ್ಕ ಸರಿಸಿ ,
ಕಾಗಾದದೆಯಲ್ಲಿ  ಇಂಕ ಚೆಲ್ಲಿ,
ಮತ್ತೆ ಬರೆದೆ ,
ಮತ್ತು ಬರೆದೆ ,
 ಬರೆದ ಕರೆಯಲ್ಲಿ 
ಕರೆಯ ಮೊರೆಯಲ್ಲಿ 
ಕಾಲ ಜರುಗಿ,ನೆನಪು ಕರಗಿ 
ಮರಳಿ ಮರಳಿ 
ಹುತ್ತ ಕೆರಳಿದೆ !!




 

ಶುಕ್ರವಾರ, ಜುಲೈ 11, 2014

ಪ್ರಯತ್ನ

ಒಂದು ನೀಳ ಬಿಡುವಿನ ನಂತರ ಮತ್ತೆ ಬರೆಯುವ ಹವ್ಯಾಸಕ್ಕೆ ಜೀವ !!
ಜೀವ,  ಜೀವನ ಪ್ರೀತಿ ಎರಡು ಕೂಡ ಕಣ್ಣ ಮಿಟುಕಿನಂತೆ ಬಂದು ಹೋಗುವ  ಮಾನಸಿಕ ಸ್ಥಿತಿ , ಒಮ್ಮೆ ಬರವಣಿಗೆ ಮನಸಿಗೆ ಮುದ ನೀಡುವ ಪರಿಯ ಅನುಭವ , ಅದರ ಮೆಲುಕು , ಆತ್ಮ ಸಾರ್ಥಕ್ಯದ ತುದಿ ತಲುಪಿಸಿದರೆ ಕೆಲವೊಮ್ಮೆ ಇರದ ಪಾತಾಳಕ್ಕೆ ನಿಂತಲ್ಲೇ ಅದುಮಿ ಛೇದಿಸುತ್ತದೆ  , ಆದರು ಬರೆಯುವುದರಲ್ಲಿ ಅಲೌಕಿಕ ಆನಂದವಿದೆ , ಜೀವದ  ಒಳಗೆ ಕೂತ ದೈವ ಹೊಂಕರಿಸಿ ವಿಜ್ರಮ್ಬಿಸುತ್ತಾನೆ .
ಮನುಜ ಕುಲಕ್ಕೆ ಇರುವ ಅಮರನಾಗುವ  , ಅನಂತನಾಗುವ ತ್ರಷೆಗೆ ಸಾಹಿತ್ಯ,  ಕಲೆ ಇವು ಸುಲಭಕ್ಕೆ ಸಿಗುವ ಮಾರ್ಗಗಳು  . ಇರಲಿ ನಮ್ಮದು  ಒಂದು ಪ್ರಯತ್ನಕ್ಕೆ ಸ್ವಾರ್ಥದ ನಂಟು ಅಂಟಿಬಿಡಲಿ !!!

         
       
ಮೂಲೆಯಲ್ಲಿ ಕೂತು ಸದಾ ಕೂಡ ಕಣ್ಣ ಮುಚ್ಚಿ ಇರದ , ಬಾರದ ದೈವಕ್ಕೆ ಅಭಿನಂದನೆಅರ್ಪಿಸಿ ರಾತ್ರಿ ಮಲಗುತ್ತಿದೆ  , ದೈವ ಹೊರತು ಮತ್ತೆಲ್ಲ ಪಾತ್ರಗಳು  , ಇದ್ದವರು , ಇರುವವುರು ಎಲ್ಲರು . 
ಇರದವರು ಮತ್ತೆ ಬಂದಂತೆ ,  ಇರುವವರು ದೂರವಾದಂತೆ ಕನಸುಗಳು . ದಿನ ಮುಂಜಾನೆ ಕನಸುಗಳ ಮೆಲಕು ಹಾಕಿ ದುಃಖದಲಿ ನೀರಾಗುತ್ತಿದೆ , ಒಮ್ಮೆ ಮಾತ್ರ ಕನಸಲ್ಲಿ ಕಂಡ ಸಂಪೂರ್ಣ ಚಿತ್ರ ಎದೆಯಲ್ಲಿ ಹಾಗೆ ಉಳಿಯಿತು ಎಲ್ಲ ಪಾತ್ರಗಳು ಯಾವುದೋ  ಜೈಲನಲ್ಲಿ ಬಂಧಿಯದಂತೆ  ,ನಾನು ಆ ಸೆರೆಮನೆಯ ಬಾಗಿಲ ಹೊರಗೆ ನಿಂತು ಅವರೊಡನೆ ಸದಾ ಬೇಡುವ ಪರಿ ,ಆ ಪಾತ್ರಗಳು ಬಂಧ ಮುಕ್ತಿಯಗಿಸುವಂತೆ ಕಾಡುವ ಪರಿ ... ಆ ದಿನ ಕನಸ ,  ಭಾವಗಳಲ್ಲಿ ಸೆರೆಮನೆಯ ಬಾಗಿಲ ತೆರೆದು   ನೀಳವಾಗಿ ಅಭ್ಯಸಿಸಿದೆ  .., ಈ  ನಡುವೆ ಕನಸು ಖಾಲಿ ಖಾಲಿ !
ಮೂಲೆಯಲ್ಲಿ  ಕೂತು ದೈವ  ಅಭ್ಯಸಿಸುತ್ತೇನೆ  ಕತ್ತಲ ಹೊರತು ಮತ್ತೇನು ನೆನಪಿರದು ಮುಂಜಾವಿಗೆ, ಅಳುವಿಲ್ಲ ಸರಿ , ಆಸೆಯು ಕೂಡ :( 

 

ಭಾನುವಾರ, ಮಾರ್ಚ್ 16, 2014

ಕಪ್ಪು,!!!

ಇಡಿ ರಾತ್ರಿ ಕಪ್ಪು ಸೋಸುತ್ತಿರುವೆ ..
ಕಣ್ಣ ಮುಚ್ಚಿ ಬಂಧಿ ಮಾಡಿದ ಕಪ್ಪು,
ಸೂರ್ಯ ಮುಳುಗಿ ನಂದಿ ಹೋದ ಕಪ್ಪು,
ದೀಪವಾರಿಸಿ ಉದ್ಬವಿಸಿದ ಕಪ್ಪು,
ಎದೆಯ ಉರಿಸಿ ಉಳಿದ ಕಪ್ಪು,

ಹಲವು ಕಪ್ಪಲ್ಲಿ 
ಕೆಲವು ನನ್ನವು !
ಉಳಿದ ಕಪ್ಪು
ಒಲವು ನಿನ್ನವು ,
ಸೋಸಿ ಜರಡಿ ಮಾಡಿ ಉಳಿದ ಕೆಲವು ,ವಿದಿಯ
ಕಡೆಯವು ...
ದೈವ ಹಡೆದವ್ವು ..,
ಇಡಿ ರಾತ್ರಿ ಕಪ್ಪು ಸೋಸುತ್ತಿರುವೆ...!! 

ಅಂಬಿಗ ತನ್ನ ಹುಟ್ಟು ಮರೆತಿಹ ....

ಯಾವ ಪಯಣದ ಅ೦ಬಿಗ ನೀ
ಯಾವ ನಕ್ಷೆಗೆ ಒಡೆಯನೂ ?
ಸುತ್ತ ಮುತ್ತಕ್ಕೆಲ್ಲ ಹೆಸರು ಬರೆದರೆ 
ಇಹವ ಆಳುವ ಅರಸನೋ...?
ಪೂರ್ವ ಪಶ್ಚಿಮ 
ದಿಕ್ಕು ಹಲವು 
ಎತ್ತ ನಡೆದರೂ ಮಂಪರು ..
ಈಗೆ ನಡೆದು ,
ಹಾಗೆ ನಡೆದು,
ದಣಿದು ತಣಿಯಲು ಮೈಲಿಗಲ್ಲು ...
ನಿಂತ ಜಾಗದಿ ನೆಲವು
ಜರುಗಲು ಮುಂದೆ ಸಾಗಿದೆ
ಪಯಣವು ..?!!
ಉಸಿರ ದೀವಿಗೆ ಉರಿದು ಉರಿದು
ನಿತ್ಯ ಚಾರಣ ಜಾಥವು ...?

ದಾರಿ ತುಳಿದು ,
ದಾರಿ ಸುಲಿದು ,
ಕಾಲ ಸವೆಸಿ ನೋಡಲು ..,
ದಾರಿ ಮರೆತಿದೆ ,
ಊರು ದೊರಕದೆ
ನಕ್ಷೆ ಅರಿದು ಅಳಿಸಿದೆ ..,

ಉಸಿರ ದೀವಿಗೆ ಗಾಳಿಗಾಡಿದೆ,,.
ಸಣ್ಣ ಸಣ್ಣಗೆ ನಡುಕವು ,...
ಅಂಬಿಗ ತನ್ನ ಹುಟ್ಟು
ಮರೆತಿಹ ಮತ್ತೆ
ಇಲ್ಲಿ ಶೈಥಿಲ್ಯವು !!!!!

ಬುಧವಾರ, ಫೆಬ್ರವರಿ 19, 2014

ಈಗೊಂದು ಕನಸು !!!

ಕಾಲಿಗೆ  ಮುಳ್ಳು ಚುಚ್ಚಿದಂತೆ ,  ಇಕ್ಕಳಕ್ಕೆ ಸಿಗಿಸಿ ಎಳೆದು ತೆಗೆದೇ , ರಕ್ತ ಬಾರದು .  ಚುಚ್ಚಿದಂತೆ  ಚೂಪಾದ ನೋವು, ಮತ್ತೆ
ಬೆಳಕಿಗೆ ಕಾಲು  ತೋರಿ ಮುಳ್ಳು  ಹುಡುಕಿದೆ , ಹುಡುಕುತ್ತ , ಹುಡುಕುತ್ತ ಮೇಲೆ ಏರಿ ಎದೆಯ ತಲುಪಿದೆ ... ನೋವು ನಿಲ್ಲದು .. 
ಎದೆಯ ತಲುಪಿದಂತೆ  ಗೊಂದಲ ,  ಬರಿ ಕವಲುಗಳೇ ತುಂಬಿದ ವ್ರತ್ತ !!
ಎಂತದ್ದೋ  ಸದ್ದು ಎಚರಿಸಿದಂತೆ ,  ಭಯಕ್ಕೆ  ಬಿದ್ದೆ , ಯಾವುದೋ ಒಂದು ದಾರಿ ಇಡಿದು ನಡೆಯಾರಮ್ಬಿಸಿದೆ .. 
ಒಂದೇ  ಸಮನೆ ಏರುತ್ತ ಸಾಗಿ ಏದುಸಿರು ಬಿಡುತ್ತ ಬಸವಳಿದೆ , ನಂತರ  ಮುಳ್ಳಿನದು ನೋವು ನೆನಪಾಯಿತು .. ಆದರೆ ಈಗ ಸಂಕಟ  ಉಸಿರ ಮಟ್ಟಿಗೆ ಬಂತು ನಿಂತಿತ್ತು , ಎದೆಯ ಮುಳ್ಳು ಮೊಂಡಾಗಿ ನೋವ  ನೀಡದು .. 

ಅಯ್ಯೊ !! ಮುಳ್ಳ  ಎದರಿಸಿ ಓಡ ನಿಂತು ದಾರಿ ತಪ್ಪಿ ಎತ್ತ ಸಿಲುಕಿದೆ , ಯೋಚಿಸಿ ನಿಂತೇ .. ಈಗ ಬೆಳಕು ಕಾಣದು , ಭೀತಿ 
ನೆತ್ತಿ ಏರಿದಂತೆ , ಮತ್ತದೇ ಸದ್ಧು .. ಇಷ್ಟು ದೂರ ನಡೆವಾಗ ಯಾರೋ ಜೊತೆ ಇದ್ದದು ಈಗ ಒಂಟಿಯಾದಂತೆ , ಸಣ್ಣಗೆ ನಡುಕ ! 
 ಯಾರು !   ಯಾರು ಕಳೆದು ಹೋದದ್ದು ??   ನಾನೇ ಕೇಳಿ ಕೇಳಿ ದಣಿದೆ ..
 ಕತ್ತಲಿಗೆ ಕಣ್ಣು ಕಟ್ಟಿದಂತೆ , ನಿಶಬ್ದ ಶುರುವಾಯಿತು .. 
ದಿಕ್ಕು , ದೆಸೆ ಏನು ಕಾಣದು ಕಾಲುಗಳ ಹೆಜ್ಜೆಯ ಮಾಪನ ಕಷ್ಟ ಸಾದ್ಯ .. 


ಬೆಳಕ್ಕಿದರಷ್ಟೇ  ಅಳತೆ,  ಕತ್ತಲಿಗಾವ ದಿಕ್ಕು ??ಯಾವ  ದಾರಿ ??  ಬೆಳಕು ನೀಡುವ ದ್ವಂದ್ವಗಳು ಇದಾವುದೋ ಶಾಶ್ವತ ಕತ್ತಲಲ್ಲಿ ಕಳೆದು ಹೋಗಿವೆ .. ಕತ್ತಲಿಗೆ ಎಲ್ಲ  ಸಮನಾಗಿಸುವ ಕಲೆ ಹೇಗೆ  ಸಿದ್ದಿಸಿತೊ ?? ಎಲ್ಲವು , ಎಲ್ಲರು ಕಪ್ಪು .. 

ಹೀಗೆ ಉಸಿರ ಸದ್ದು ಮಾತ್ರ ಕೇಳುವ  ದಾರಿಯಲ್ಲಿ (ಮತ್ತಾವ  ಮೈಲಿಗಲ್ಲು  ಕಾಣದಿಲ್ಲಿ !!) ನಡೆದು , ನಡೆದ ದಣಿವ ಊಹಿಸಲು 
ಆಗದ ಅನಿವಾರ್ಯವಾಗಿ ಕಣ್ಣ ರೆಪ್ಪೆಯು ಮುಚಿದೆಯೊ , ತೆರೆದಿದೆಯೋ ಎಂದು ಅರಿಯಲಾಗದೆ ನಡೆವಾಗ , ಹಿಂದೆ ಯಾರೋ ಕಂಡಂತಾಗಿ  ದಿಕ್ಕು ಬದಲಿಸಿ ನೋಡಲು ಕಳೆದ ಸಂಗಾತಿ ಸಿಕ್ಕಂತಿತು .. 

ಅಲ್ಲಿಗೆ ಬೆಳಕು ಹರಿದು ದಾರಿ ಸಣ್ಣಗೆ ತನ್ನ ಮುದ್ರೆಯನ್ನು ಸಣ್ಣಗೆ ಭೂಮಿಗೆ ತಲುಪಿಸಿತ್ತು , ನನ್ನ ಸಂಗಾತಿ, ನನ್ನ ನೆರೆಳು  !!   
ಜೀವಕಂಟಿ ಬರಲು  , ಒಂಟಿನಕ್ಕೆ ಸಾಂತ್ವಾನ ಮನದ ಒಳಗಿನ ದೊರೆಗೆ ಸಾದ್ಯ ಎನಿಸಿ ನಿಟ್ಟುಸಿರು ..!!!