ಸೋಮವಾರ, ಡಿಸೆಂಬರ್ 30, 2013

ಮುಪ್ಪು

ಪ್ರತಿದಿನ ಸಂಧ್ಯೆ ಎನ್ನ ಮುತ್ತಿಕ್ಕೊ  ಹೊತ್ತು , ಹೊರಗೆ ಚಾವಣಿಯ ನೆರಳಲ್ಲಿ ಕೂತು ತೂತು ಹೆಂಚುಗಳ ಸಣ್ಣ ಕಿಂಡಿಗಳಲ್ಲಿ ಇಣುಕುವ ಕಿರಣಗಳಿಗೆ ಮೈ ಒಡ್ಡಿ ನೆನಪ ಕಾಯಿಸುತ್ತೇನೆ. ಬದುಕಿನ ಕಾರಣಗಳಿಗೆ ಮುಕ್ತಿ ಹುಡುಕುತ್ತ ಹಲವು ವರುಷ ಕಳೆದಿದೆ ಮುಕ್ತಿ ಅರಸಿ ಹೊಸ್ತಿಲ ದಿಂಬಾಗಿಸಿ ಕಾಲ ಸವೆಸೋ ಕ್ರಿಯೆಗೂ ಮುಪ್ಪಾಗಿದೆ .

ಈ  ನಡುವೆ ನನ್ನಲ್ಲಿ ಒಂದು ಬಗೆಯ ಪಾಪ ಪ್ರಘ್ನೆ ಶಾಶ್ವವತವಾಗಿದೆ  , ನಿನ್ನ ಪ್ರೀತಿ , ನಿನ್ನಲ್ಲಿ ನಾನಾಗುವ ಪ್ರೀತಿಯಾ ಬಗ್ಗೆ  ,

ಅದು ಕೇವಲ , ಇಂದು ನನ್ನ  ಆವರಿಸಿರುವ ಮುಪ್ಪ, ಚಿರಂತನವಾಗಿ  ದೂರವಾಗಿಸುವ ,  ತೀಕ್ಷ್ಣವಾಗಿ   ಸೀಳಿ  ಕಣ್ಣ ಅಂಗಳ ಕೆಮ್ಪಾಗಿಸುವ ಸಾವ ಭಯವ ನಿರಂತರವಾಗಿ ಮಂಕಾಗಿಸಲು  ನನ್ನ ಸ್ವಾರ್ಥ  ಮನದ ಸಂಚ ? ಇರಲಿ .,.
ಈ ನಡುವೆ ಸಣ್ಣ ಸಲಿಗೆಯಲ್ಲಿ ಎನ್ನ ಮಾತಿಗೆಳುಯುವ ಹಲವು ಬೆಂಚುಗಳು ಪಾರ್ಕಿನ ಸುತ್ತ ಕಾಯುತ್ತವೆ , ಅನುದಿನ ಅವುಗಳೆಡೆಗೆ ಬೆನ್ನ ತಾಕಿಸಿ ನಿನ್ನ ಕಥೆ ಹೇಳುತ್ತೇನೆ .
ನಿನ್ನೆಯಲ್ಲೇ   ಬದುಕುವ ನನ್ನ, ಅನಂತ ಭಾವಗಳ ಭಾರ ಹೊರುವ ಬೆಂಚುಗಳಿಗೆ ಏಕತಾನತೆ ಕಾಡದಿರಲೆಂದು ಅನುದಿನ  ಬೆಂಚು ಬದಲಿಸುತ್ತೇನೆ , ಅನುದಿನ ನಾನು ಕತ್ತಲಿಗಂಜಿ ಮನೆಗೆ ಹೊರಡುವಾಗ  ದಾರಿಯುದ್ದ ಒಂದು ನಿಯತಕಾಲಿಕ ಆಲೋಚನೆ,  ಇಡಿ ರಾತ್ರಿ ಆ ಪಾರ್ಕಿನ ಬೆಂಚುಗಳು ಪರಸ್ಪರ ಮಾತಿಗಿಳಿದರೆ  ,  ನನ್ನವಿಚಾರ ಸ್ವಾರಸ್ಯವಾಗಬಹುದು!  ಏಕತಾನವಾದರೆ ?? ಜೀವ ಕಂಪಿಸುತ್ತದೆ , ಪಾರ್ಕು ಬದಲಿಸುವ ಯೋಚನೆ ಮೂಡುತ್ತದೆ .
ಮತ್ತಾರೋ ನನ್ನ ಅರಿತ ಬೆಂಚ ಆರಿಸಿ  ಕೂತು, ನನ್ನ ನೋವ ಕಾವಿಗೆ ಮೈ ಬೆಚ್ಚಗಾಗಿಸಿಕೊಂಡರೆಮ್ಬ ಭಯವು  ಕಾಡುತ್ತದೆ .






ಬುಧವಾರ, ಆಗಸ್ಟ್ 28, 2013

ಮತ್ತೆ ಆರಂಭ ...!!

ಕಳೆದ ನಾಲಕ್ಕು ವಾರಗಳ ಓದಿನ ಭರಕ್ಕೆಒಂದಿಷ್ಟು ಕಾದಂಬರಿ ಜೀರ್ಣವಾಗಿವೆ .

ಸಂಸ್ಕಾರ , ನಿರಾಕರಣ , ಗ್ರಹಣ ,ಮಾಂಡೋವಿ ... ಈಗ ಅವಸ್ಥೆ .. 
ಏನು ತೋಚದೇ , ಏನು ಗೀಚದೆ ಕಳೆದ ತಿಂಗಳುಗಳಲ್ಲಿ ಬದುಕು ಸಣ್ಣದಾಗಿ ಬದಲಾಗಿದೆ ,ಅವಳು ಅಳಿಸಿ ಹೋದ ಬದುಕ ಚಿತ್ರಪಟ ಕಲಸಿದ  ಮಸಿಯ ನಡುವೆ ತಂತಾನೇ ಚಿತ್ರವಾಗುತ್ತಿದೆ , ನಾನು ವಿಸ್ಮಯನಾಗಿದ್ದೇನೆ .  ಕಲೆಗಾರ ಬದುಕಿಗೆ ನಮಿಸಿ ಮತ್ತೆ ಆರಂಭ ...!! 

ಹೊಸ ಕನಸುಗಳು ಬದುಕ ಪಯಣಕ್ಕೆ ಜೊತೆಯಾಗಿವೆ . ಕೆಲವು ದೂರಕ್ಕೆ ಜೊತೆ , ಇನ್ನು ಉಳಿದವು ನಿಮಿಷದ ಆಮಿಷಗಳಿಗೆ ಒರತೆ .
 ಹೇಗೆ ಮರೆಯಲ್ಲಿ ಅರಿಯೆ ,
ಹೇಗೆ ಸರಿಯಲ್ಲಿ ಅರಿಯೆ 
ಜಡತೆ ಅಂಟಿದ ಮನಕ್ಕೆ ,
ಹೇಗೆ ತಿಳಿಸಲಿ ಅರಿಯೆ ,
 ಹೀಗೆ ಕೊರಗುವ ಹಳೆಯ ಜೀವಗಳೆಲ್ಲಎದೆಯ ಯಾವುದೋ ಮೂಲೆಯಲ್ಲಿ ಬಂದಿಯಾಗಿವೆ , ಸದ್ಯಕ್ಕೆ ಅವುಗಳು ಕೂಗಿಗೆ 
ನನ್ನ ತಲುಪುವ  ವೇಗವಿಲ್ಲ ಅಲ್ಲಿಗೆ ಹೊಸ ಪಯಣದ ಹಾದಿಗಳಿಗೆ ನಾನು ಭಾರ ಇಳಿಸಿದ ಸಂಚಾರಿ. 

ಇಲ್ಲಿ ಚಲಿಸುವದಷ್ಟೇ ಸತ್ಯ ಚಲನೆಯೊಂದೇ ಸ್ಥಿರ.  ಜೊತೆಗೆ ಚಲಿಸದವು ಸ್ಥಿರ , ನಿಂತು ಸೊರಗಿದವು ಕಳೆದ ಕಾಲವಷ್ಟ್ತೆ 
....., ಚಲಿಸುವ ವೇಳೆ ಸುತ್ತ  ನೋಡ ಬಾರದೆಂಬ ಒಣ ಪ್ರತಿಜ್ಞೆ ಎಂದಿನಂತೆ , ಅಂಟಿನೆಡೆಗೆ ತಿರಸ್ಕಾರದಿಂದ . ಅಂಟದೆ 
ನಡೆಯಬೇಕಿದೆ ,..., ಮತ್ತೆ ಬದುಕಿನೆಡೆಗೆ  .....,


 

ಬುಧವಾರ, ಏಪ್ರಿಲ್ 3, 2013

ಬಂಧಿ ...

ಮೋಡಗಳ ಜಗಳಗಳು
ಆಗಸವ ಹಿಂಡಿ,
ಮಳೆಯ ಹನಿ
ಸೆರೆ ಜಾರಿ 
ಇಳೆಗೆ ಸೋರುತಿರೆ  .., 
ದಿಟ್ಟಿಸಿ ಆಗಸವ 
ಕಾಲದೊಳು 
ಜಾರಿದ್ದ  ನಾ, 
ದಿಶೆ 
ಬದಲಿಸಿಈಗ 
ನೇರ ನೋಡುತ್ತೇನೆ .., 
ಕೂತೂಹಲ !
ಒಂದಷ್ಟು ಹನಿಗಳು 
ಕಣ್ಣಿಗೆ ಕಾಣವು ,
ಅವಕ್ಕೆ ನಾಳೆಯ 
ರವಿ ಮೂಡುವ ಮೊದಲು 
ಇಂಗಿ ಹೋಗುವ ಆತುರ !
ಒಂದಷ್ಟಕ್ಕೆ  ,
ಹರಿಯುವ ಸೆಲೆಗಳಿಗೆ ಸೇರಿ 
ಊರೂರ ಸುತ್ತೋ ನದಿಗೆ ಆಮಿಷ ತೋರಿ .., 
ಸಾಗರಕೆ  ಜಾರಿ 
ಅನಂತವಾಗುವ 
ಬಯಕೆ ... !! 

ಮುಕ್ತ್ತಿ ಮನುಕುಲಕ್ಕೆ 
ಮೀರಿದ್ದ ??!
ಯೋಚಿಸಿ ನಾ 
ಮತ್ತೆ  ವಿರಾಗಿ .. .. 


ಇನ್ನು ಒಂದಷ್ಟು, 
 ಕಣ್ಣ 
ಮುಂದೆ ನಿಂತು 
ನನ್ನ 
ಅಣಕಿಸಿ ಮೆಲ್ಲನೆ ಇಳಿಯುತ್ತವೆ .., 
ಸ್ವಾತಂತ್ರದ ಮತಿ ಭ್ರಮಣೆ?? 
ಮೋಡದ ಹೊರಗೆ 
ಇಣುಕ್ಕಿದೆ , ಸುಖವಾಗಿ , 
ಇಳೆಯ ಮೊರೆಗೆ 
ಜಾರಿದ್ದೆ,  ಸಿರಿಯಾಗಿ , 
ಮುಕ್ತನಾದಂತೆ ಓಲಾಡುತ್ತವೆ ..!
ಇಂಗಲಾರವು , 
ತೇಲಲಾರವು , 
ನಿಂತಲ್ಲೇ ನಿಂತು 
ನಾರುತ್ತವೆ ..:

ಮಳೆಯ ಆರ್ಭಟ 
ಮುಗಿದು ರವಿಯು 
ಅರಳುತ್ತಾನೆ , 
ಸ್ವೇಚ್ಚೆಯ ಮದದಿ
ರವಿಯ ಅಣಕಿಸಿ 
ಕೆಣಕುತ್ತವೆ .., 
ಕೆಕ್ಕರಿಸಿ ನೋಡಲವ 
ಆವಿ ಹನಿಯು ..
ಮೋಡದ ಅಂಚಲ್ಲಿ 
ಮತ್ತೆ ಸೆರೆಯು ...   

ಅಂದಿನಂತೆ ಇಂದು ,
ಅಂಗಾತ ಮಲಗಿ 
ಆಗಸ ದಿಟ್ಟಿಸುತ್ತೇನೆ 
ಕಳೆದ ರಾತ್ರಿಗಳಷ್ಟ್ತೆ 
ನಕ್ಷತ್ರ ಮಿನುಗುತ್ತಿವೆ .., 
ಮೋಡಗಳು ಎಂದಿನಂತೆ 
ಮತ್ತೆ ಊರಿಂದ 
ಊರು ದಾಟುತ್ತಿವೆ ..,














ಸೋಮವಾರ, ಮಾರ್ಚ್ 25, 2013

ನಿನ್ನ ಹೆಸರು ಇರಬಹುದಾ...

ಈ  ನಡುವೆ ಇಲ್ಲೆಲ್ಲ ಬೀದಿ ಬದಿಯಲ್ಲಿ ಸತ್ತವರ ಫೋಟೋ ಹಾಕಿ ಶ್ರದ್ದಾಂಜಲಿ ಅರ್ಪಿಸುವುದು ರೂಡಿ ..
ಪ್ರತಿ ಬಾರಿ ನಮ್ಮೊರ ರಸ್ತೆಗಳಲ್ಲಿ ನಡೆವಾಗ ನಾ ನನ್ನ ಫೋಟೋ ಹುಡುಕುತ್ತೇನೆ , ಪ್ರಚಾರದ  ಹುಚ್ಚೇನಿಲ್ಲ , ಫೋಟೋ ಕೆಳಗೆ ಶ್ರದಾಂಜಲಿ ಅರ್ಪಿಸಿದವರ ಪಟ್ಟಿಯಲ್ಲಿ ನಿನ್ನ ಹೆಸರು ಇರಬಹುದಾ  ಎಂಬುದಷ್ಟೆ ಕುತೂಹಲ.., ಮತ್ತದೇ ಆಸೆ ಬುರುಕ ಮನದ ಕೀಟಲೆ ...  

ಭಾನುವಾರ, ಮಾರ್ಚ್ 24, 2013

ಕಾಯುತ್ತೇನೆ ....

ಒಟ್ಟಾಗಿ  
ಕೂತು ಬಸ್ಸಿನ ಸೀಟಿನ ಹಿಂಬದಿಯ  
ಯಾರದೋ 
ಪ್ರೇಮ ಕಾವ್ಯ, ಕೆತ್ತನೆಗಳಿಗೆ 
ನಕ್ಕಿದು ನೆನಪಿದೆಯ ???
ಹೋಗಿ ನೋಡು , 
ಅಲ್ಲೊಂದು ಹೊಸ ಕಾವ್ಯ ಮೂಡಿದೆ ..!! 
ಅರ್ಧಕ್ಕೆ ನಿಲ್ಲಿಸಿದ್ದೇನೆ . 
ಪಯಣದಲ್ಲಿ ನಿನ್ನೊಟ್ಟಿಗೆ ಯಾರಿರುವರೋ ಏನೋ !!
ನೀನು ಅದೇ ಬಸ್ಸ  ಸೀಟಿನ ಹಿಂದೆ 
ನನ್ನಂತೆ ಮತ್ತೇನೋ 
ಬರೆಯಬಾರದಲ್ಲ .. ,!! 
ಇನ್ನರ್ಧ?? 
ಹಾಳೆಗೆ 
ಬರೆದು ತಲೆಗೆ 
ದಿಂಬಾಗಿಸಿ ನಿತ್ಯ 
ಒರಗುತ್ತೇನೆ ಆಸರೆಗೆ .. 
ಕನಸಲ್ಲಿ ನಮ್ಮಿಬರಿಗೂ 
ಮತ್ತೆ ವಿಚ್ಚೇದನ :(  
ಅಂದಿಗೆ  ಕಾವ್ಯ 
ಸಂಪೂರ್ಣ ಅಸ್ತಂಗತ ..,


ಮುಂಜಾನೆ ಮತ್ತೇನೋ 
ಗೀಚುತ್ತೇನೆ , 
ಹೊಸದೊಂದು  ಹಾಳೆಗೆ, 
ಈ ರಾತ್ರಿಯು 
ಕಣ್ಣ ಪರದೆಯಲ್ಲಿ  
ಸೂರ್ಯ 
ಉದಯಿಸುತ್ತಾನೆ.. 
 ಕ್ಲೈಮಾಕ್ಸ್ 
ಬದಲಾಗಬಹುದು 
ಎಂದು ಕಾಯುತ್ತೇನೆ ..,
 
ನನ್ನ ದೂಷಿಸಬೇಡ ... 
ಅಸೆ ಬುರುಕ ಮನದ 
ಕೊನೆಯ 
ತುಂಡು ಇನ್ನು 
ಉಳಿದಿದೆ 
ಅದೇ  ಆರೋಪಿ ..,   

ಬಸ್ಸ ಸೀಟಿನ ಹಿಂಬದಿಯ 
ಕಾವ್ಯ ನಾ ಹೇಗಾದರೂ 
ಮುಗಿಸಬೇಕ್ಕಲ್ಲ :( 
ಅದರೊಟ್ಟಿಗೆ ಕಾಲಚಾಚಿ 
ಕಾಯುತ್ತೇನೆ .... 

 




ಬುಧವಾರ, ಮಾರ್ಚ್ 20, 2013

ಜಾಗ್ರತೆ !!

ನೀ ನಡೆವ ರಸ್ತೆಗಳಿಗೆ ಡಾಂಬರು ಹಾಕುವವನ ಪರಿಚಯ ಮಾಡಿಕೊಂಡಿರುವೆ , ನಿನಗೆಂದು ದಾರಿಯ ಅಂಚುಗಳುದ್ದಕ್ಕು
ಎಂತದೋ ಮೇಣದಂತ ಮಣ್ಣಾಕಿಸಿ  ದಾರಿ ಮೆದುವಾಗಿಸಿದೇನೆ  , ದಾರಿ ಸವೆಸುವುದು ನಿನಗೆ ಇನ್ನು ತ್ರಾಸವಾಗದಿರಲಿ .
 ನಾನಿಲ್ಲದ ಪಯಣ,   ಒಂಟಿತನ ಕಾಡಬಹುದು  , ರಸ್ತೆ ಬದಿಯ ಮರಗಳೆಲ್ಲ ಮಾತು ಕೊಟ್ಟಿವೆ ಒಂದಷ್ಟು ಎಲೆ ಉದುರಿಸಿ ನಿನ್ನ ಹಿಂದೆ ಕಳಿಸುವುದೆಂದು ,ಗಾಳಿಗಂಟಿ ನಿನ್ನ ಹಿಂಬಾಲಿಸೀತು , ಬೆಚ್ಚಬೇಡ . ತಾ ಅನಾಥವಾದರು ನಿನ್ನಗಾಗಿ ಉರುಳುತ್ತವೆ , ಅಲಲ್ಲಿ  ನೇವರಿಸು ಅವುಗಳ,  ನಿನ್ನ ತಾಯ್ತನ ಜರುಗಲಿ .

ಆ ದಾರಿ ಎಷ್ಟು ದೂರದ್ದೋ ನಾ ಅರಿಯೆ , ನೀನೆ ಆರಿಸಿದ್ದು , ನನಗೆ ಗೊತ್ತು ನೀನು ಆ ದಾರಿಗೆ ಅಪರಿಚಿತೆ .
ನನ್ನ ಕಣ್ಣೋಟಕ್ಕೆ ಮಿತಿ ಇದೆ ಮಿತಿ ಮೀರಿ ದಿಟ್ತಿಸುತ್ತಿರುವೆ , ಇನ್ನು ಸ್ವಲ್ಪ ಮುಂದೆ ಹೋದ ಮೇಲೆ ನೀ ಕಾಣುವುದಿಲ್ಲ ,ನಾ ಕಾಯಲಾರೆ ,  ಜಾಗ್ರತೆ !!

ನನ್ನ ಕಣ್ಣಿಗೆ ನಡೆದು ಹೋದದ್ದು ನೀನಾ , ಇಲ್ಲ ದಾರಿಯ ಎಂಬುದು ಬದುಕು ಪೂರ ಬಿಡಿಸಬೇಕಾದ ಒಗಟು .

ಒಮ್ಮೊಮ್ಮೆ ಕಾಲು ನಿಂತಲ್ಲೇ ಅಂಟಿದಕ್ಕೆ ಖೇದವಿದೆ , ಆದರೆ ಸ್ತಂಬನ ಹಿತ ಎನ್ನಿಸಿದೆ , ಇಲ್ಲಿ ನೀ ಕೊಟ್ಟದ್ದು , ಇಟ್ಟದ್ದು , ಬಿಟ್ಟದ್ದು ಎಲ್ಲ ಇದೆ ನಿನ್ನ ಹೊರತು .
ನೀನು ಕನಸುಗಳಲ್ಲಿ ಬರುವೆ ಎಂದು ಮಾತು ಕೊಟ್ಟಿದ್ದೆ , ನೆನಪಿಲ್ಲವ ? ಇರಲಿ ನೀ ಹೊರಟಾಗ ನನ್ನ ನಿದ್ದೆ ನಿನ್ನ ಕಾಲಿಗಂಟಿ ಹೊರಟ್ಟದ್ದು ನೆನಪಿದೆಯ ?? ಸಾದ್ಯವಾದರೆ  ಹಿಂತಿರುಗಿಸು :(

ಕನಸಿಲ್ಲದ ನನಗೆ ನೀ ನೆನಪಿನ್ನಲ್ಲೇ  ಸಂಭವಿಸುವೆ , ಆದರೂ  ನನಗೆ  ಕನಸೆಡೆಗೆ ಮೋಹ ,ಅಲ್ಲಿ  ನಾಳೆ ನಿನ್ನಿಲ್ಲದೆ ನೀ  ಹುಟ್ಟಬಲ್ಲೆ ,  ಪ್ರಾಯಶಾ .

ನಿದ್ದೆಗೆ ಇಲ್ಲೊಂದು ತಪ್ಪಸ್ಸು ನಡೆಯುತ್ತಿದೆ , ಕಲ್ಪನೆಗಳಿಗಿಂತ ಕನಸು ಹಿತ ಎಂಬ ನಿಜವಷ್ಟೆ ಕಾರಣ . ಕಲ್ಪನೆಗೆ ಮಿತಿ ಇದೆ ಬುದ್ದಿಯದ್ದು , ಕನಸಿಗೆ ?? ಹಾ .ಅ ವೇಗ , ಆ ವಿಸ್ತೀರ್ಣ , ಸಾಟಿ ಇಲ್ಲ .

ನಿದೆರೆ ಹಿಂತಿರುಗಿಸು .

ನಾಳೆಯ ಬೇಡಿಕೆಗೆ ತಾನೇ ನಾನು ನನ್ನ ನಿನ್ನೆಗಳ ನಿನಗೆ ಲಂಚಇತ್ತದ್ದು ?
ಒಂದು ಕ್ಷಣ ಯೋಚಿಸಿದರೆ ಮನುಕುಲ ಇಂದಿನೆಡೆಗೆ ಎಸೆಯುವ ಎಲ್ಲ ಕಸುವು ನಾಳೆಯ ಅಸ್ಪಷ್ಟತೆಯ ನಿಖರತೆಗೆ ತಾನೇ ??ನಿನಗೆ ಸ್ವಾರ್ಥ ಕಂಡಿತ್ತ ? ಇರಲಿ ಇಲ್ಲೊಂದು ದೀಪ ಕತ್ತಲಲ್ಲಿ ಕಳೆದಿದೆ ಹುಡುಕಲು ಕಣ್ಣಿಲ್ಲದ ನಾನು ಹರಕೆ ಹೊತ್ತಿರುವೆ , ಉಸಿರ ದೀಪ ಉರಿವವರೆಗೂ ಹುಡುಕೋಣವಾಗಲಿ  .

ಇರಲಿ , ನಿನಗೆ ಸಂತಸ ,ಗೆಲುವು  ಅಷ್ಟೇ ನಾ ಬಯಸಿದ್ದ  ವರ ,  ನಿನ್ನ ಸಂಗಾತ ನಾನು ಎಂದು ಬೇಡಲೇ ಇಲ್ಲ , ಇಂದು  ದೈವ ದೂರುವುದು ತಪ್ಪಾದೀತು , ನಾನು ನಿಸ್ವಾರ್ಥಿ ??

ನೀ ನಡೆದು ಹೋದ ದಾರಿ ವಿಚಿತ್ರ ,  ಅದಕ್ಕೆ ಹುಟ್ಟು , ಸಾವು ದ್ವಂದ್ವದ್ದು .
 ಇಲ್ಲಿ ನಿಂತ ನನಗೆ ನೀ ಯಾವುದೊ ತೀರಕ್ಕೆ ಹರಿದು ಹೋದ ನದಿ , ನಾನು ಎಲ್ಲೋ ದಾರಿ ಮಧ್ಯೆ ಆಸರೆಯಾಗಿದ್ದ ದಡ ??
ಇಲ್ಲ ನದಿ ಎನ್ನಲಾರೆ ಅವು ಏಕ ಮುಖಿ . ನೀನು ನಡೆಯುತ್ತಿರವ ದಾರಿಗೆ ಹುಟ್ಟಿದೆ ನೀನು ದಿಶೆ ಬದಲಿಸಿದರೆ ನಾನು ನೀ ಸೇರಬೇಕಾದ ತೀರ :)ನದಿಯಲ್ಲ ನೀ ...

ದಾರಿಯುದ್ದ ನಾ ಕೊಟ್ಟ ಕವನಗಳ ಹೋದುವೆಯ ?? ಅದೊಂದ ಮಾಡದಿರು . ನೀನು ಬೆಳಕು ನನ್ನ ಕವನದಿ ನನ್ನ ಬಾಳ ಕತ್ತಲು ಕಂಡೀತು , ನೀ ಇಲ್ಲಿ ಮತ್ತೆ ಹರಿಯಬಾರದು , ನಿನ್ನ ದಾರಿಯ ತೀರದಲ್ಲಿ ನೀ ಬಯಸಿದ ನಿಧಿ ನಿಕ್ಷೆಪಕ್ಕೆ ವಿರಹವಾದೀತು .

ನಿನ್ನ ಮರೆವ ನೋವು ನನ್ನ ಶತ್ರುವಿಗು ಬೇಡ ಎಂದು ವರ ಪಡೆದಿದ್ದೇನೆ , ನನಗು ಗೊತ್ತು ನೀನು ಬರಲಾರೆ ,
 ಹಾಗೆ ಸುಮ್ಮನೆ ಸ್ವಗ್ತಿಸುತ್ತೆನೆ , ಆತ್ಮ ರತಿ ...








ಶುಕ್ರವಾರ, ಮಾರ್ಚ್ 15, 2013

ಒಬ್ಬಂಟಿಯಲ್ಲ ...

ಅಲ್ಲಿಯ  ಮಳೆಗೆ
ಇಲ್ಲಿ
ಒದ್ದೆಯಾಗುವ
ತೃಷೆ
ಅಲ್ಲಿಯ
 ಉರಿಗೆ
ಬೆವರಾಗುವ  ತೃಷೆ ,
 ವಾಸ್ತವ ??!!
ನಿಮ್ಮ
ಊರಿಗೆ
ಮೋಡಗಳು
ಹರಿಯುವುದು
ನಮ್ಮ
ಕೇರಿಯ ಮೇಲೆ..
ಮನೆಯಾಚೆ ನಿಂದು
ರವಿಯ
ಅರಸುತ್ತೇನೆ ಅನುದಿನ,
ನೀ ಹೊಯ್ದ ಬೆಳಕು..
ಅವನದಕ್ಕೆ ಹೋಲಬಹುದು ??
ಕೊಂಚ ಸಾಲ
ಪಡೆಯುವದಷ್ಟೇ  ಕಾರಣ ..

ನಿನ್ನೆಗೆ ಕಣಜ ತುಂಬಿದೆ,
ಎರವಲು ಬೆಳಕಿನ ಸರಕು  ..
ನಿನ್ನೆಸರಲ್ಲಿ ಇಲ್ಲಿ ಉರಿಯಲಿ
ಅನಂತ  ಮಿನುಗು ...

ಆದರು ಚಟ??
ಇಂದು  ಕೂಡ ಆಗಸ
ದಿಟ್ಟಿಸುತ್ತಿರುವೆ  ,

ಎಂದಿನಂತೆ
ಇಂದು
ರವಿ ಕಾಣುತ್ತಿಲ್ಲ :(

ಆಗಸ ದಿಟ್ಟಿಸಿ
ಹಾಗೆ ಕೂತೆ ...
ಬರಿ ಮೊಡಗಳದ್ದೆ
ಸಂತೆ...
ಒಂದಷ್ಟು ಮೋಡಗಳು
ಗುಂಪು ಕಟ್ಟಿ
ಪಿಸುಗುಟ್ಟುತ್ತಿವೆ..
ದ್ವಂದ್ವದ ಮಾತು
ಅರ್ಧಕ್ಕೆ
ನಿನ್ನ
ಸೇರುವ ಆಸೆ.
ಅರ್ಧಕ್ಕೆ
ನನ್ನ
ಸೇರುವ ಆಸೆ ..
.ಒಂದಷ್ಟು
ಬೆಳ್ಳಿಯಂತವು
ನಿಮ್ಮೂರ
ದಾರಿ ಹಿಡಿದವು
ಒಂದಷ್ಟು
ಕಪ್ಪಿನಂತವು
ಇಲ್ಲೇ
ಇಳಿದು
ಭೋರ್ಗರೆದವು  
ಅವಕ್ಕೆ
ನನ್ನ ತೆಕ್ಕೆಗೆ ಇಂಚಿಂಚು  ಇಳಿದು
ನೀ ಹಚ್ಚಿದ
ಬೆಂಕಿ ನಂದಿಸಲು ಶ್ರಮಿಸುವ
ಚಟ
ನಾ
 ಒದ್ದೆಯಾಗುವುದು
ಅವಕ್ಕೆ ಮುಕ್ತಿಯ ದರ್ಶನವಂತೆ !!!


ನಿನ್ನ ಅರಸಿ
ಹೋದ ಬೆಳ್ಳಿಯವಲ್ಲವೇ
ನನ್ನವು ??
ಒದ್ದೆ ಅಸ್ಪರ್ಶ್ಯ
ನಿಮ್ಮೂರ
ಶೆಕೆಗೆ  ಬೆವರಾಗುತ್ತೇನೆ ..
ಅಲ್ಲಿಗೆ  ದುಖಕ್ಕೆ
ಅಮೃತ  ಪಾನ,,
ನೀ ಹಚ್ಚಿಟ್ಟ ಉರಿ
ಚಿರಾಯು ..



ನನ್ನ ಕೇರಿಗೆ
ಇಳಿದ ಕಾರ್ಮೋಡಗಳು ??
ಇಲ್ಲೇ ಅಡ್ಡಡುತ್ತವೆ
ಅವಕ್ಕೆ ಸೋತ ಭಾವ ,,

ಈಗ ನಾನು
ಒಬ್ಬಂಟಿಯಲ್ಲ
ಇಲ್ಲಿ ಒಂದಷ್ಟು
 ಅತ್ರಪ್ತ
ಆತ್ಮಗಳಿವೆ ಮೋಡಗಳವ್ವು ..
ಅವುಗಳಿಗೆ
ಸಾಂತ್ವನವಾಗಿ
ದಿನ ನಿನ್ನ ಕತೆ ಹೇಳುತ್ತೇನೆ


ಈಗ ಆಗಸ
ನೋಡುವುದ ಬಿಟ್ಟಿದೇನೆ
ರವಿಯ ಬೆಳಕು ?
ಮೋಡಗಳ ದಾರಿ ?
ಯಾವುದು ಅರಿಯೆ
ನಿಮ್ಮೊರಿನಲ್ಲಿ ಈಗ ಶೆಕೆಯೋ ??
ಮಂಜ ಹೊದಿಕೆಯೋ ??

ಇಲ್ಲಿ ಸುಡು ಬೇಸಿಗೆ
ಆತ್ಮ ಉರಿಸಿ ಉರಿಸಿ ಇಲ್ಲೊಂದಿಷ್ಟು
ಬೂದಿ ಉಳಿದಿದೆ.
ನಮ್ಮೂರ ನದಿ ಮಾತು ಕೊಟ್ಟಿದೆ!
ನಿನ್ನ ಕಾಲಿಗೆ ಹೇಗಾದರೂ ಆ  ಬೂದಿ
ತಾಕಿಸುವೆನೆಂದು ..
ಹಾಗಾಗೆ ಹಿಂತುರುಗಿ
ನೋಡು :(

ನಿನಗೆ
ನನ್ನ ಹೆಜ್ಜೆ ಗುರುತು
ಕಂಡರೆ
ನನಗೆ
ನನೊಂದಿಗೆ
 ಕಾಯುತ್ತಿರುವ
ಕಾರ್ಮೋಡಗಳಿಗೂ
ಮುಕ್ತಿ .... :(


ಭಾನುವಾರ, ಮಾರ್ಚ್ 3, 2013

ನಿನ್ನ೦ತೆ ಮೇಣ

ನಿನ್ನ
ಮೊಗವೊಂದೆ
ಮಿನುಗಲೆಂದು 
ನಿನ್ನ ಮುಂದೆ 
ಕ್ಯಾಂಡಲ್ ಹಚ್ಚಿ 
ನಾ ನಿನ್ನೆದುರು 
ಕೂರುತ್ತಿದದ್ದು 
ನೆನಪಿದೆಯ ??

ಎಷ್ಟೋ ಬಾರಿ 
ಅಮಾವಾಸ್ಯೆಗೆ , 
ದಟ್ಟ ಕತ್ತಲಿಗೆ 
ಹಂಬಲಿಸಿದ ಆ 
ರಾತ್ರಿಗಳು ?? 
ನಿನ್ನ ಚಂದ್ರನನ್ನಗಿಸಿ 
ಕಂಡ ಬೆಳದಿಂಗಳು .., !!

ನೀ 
ಹೋದಮೇಲೆ
ಆ ಕ್ಯಾಂಡಲ್ 
ನಿನ್ನಗೆಂದು 
ಅತ್ತು ಅತ್ತು 
ನೆಲದ ಮೇಲೆ 
ಮಡುಗಟ್ಟಿದೆ ...:( 

ಸೋರಿದ 
ಅಷ್ಟೂ ಮೇಣ 
ಒಟ್ಟಾಗಿಸಿ 
ಒಂದು ಬಟ್ಟಲಲ್ಲಿ 
ಇಟ್ಟು ದಿನ
ಉರಿಸುತೇನೆ .., 
ಉಸಿರ ಮಸೆದು 
ಬತ್ತಿ ಮಾಡುತ್ತೇನೆ 
ಬತ್ತಿಯಂತೆ  
ಉರಿಯುತ್ತೇನೆ .., 
ಬತ್ತಿ 
ಬದಲಿಸುತ್ತೇನೆ ... 
ಉರಿದಾಗಲೆಲ್ಲ 
 ಮೇಣದಲ್ಲಿ 
ನಿನ್ನ ನೆನಪುಗಳ 
ಮೆದುವಾಗಿಸುತ್ತೇನೆ .. !








...  










.. 
ಕತ್ತಲಾರಿಸಲು...    

ಬುಧವಾರ, ಫೆಬ್ರವರಿ 27, 2013

ಹನಿಯಾದರೂ ??

ಏ ಸಂಧ್ಯೆ ನಿನ್ನದು
ಅದೆಂತ  
ವೈಕರಿ ?

ದಿನಲು 
ಅರಳುತ 
ಮರಳಿ ಬಾರುತ,  
ತಂಪ 
ಸುರಿಸುವ 
ನಿತ್ಯ ಐಸಿರಿ .. .. 

ನೀನು ಎರೆವ
ರಾತ್ರಿಗಳು .. .., !
ನಡು ನಡುವಲಿ  
ಕಾಡೋ
ಕನವುಗಳು  .. !!

ನೆನಪ ಕೈ ತುತ್ತಲಿ 
ನಿನ್ನೆಗಳ ಮೆಲುಕು , 

ಮುಂಜಾನೆ ಕಳೆದ
ಇಬ್ಬನಿಗಳ ಕೆದುಕುವ 
ನಿರ್ಗತಿಕ ., 

ಮಣ್ಣಾಗಿದೆ
ಮಂಜ ಹನಿ
ಯಾರ ಕೇಳಲಿ ...??

ಸಂಧ್ಯೆ .,

ನೀ
ಅರಿತಿರುವೆ
ನನ್ನೆದೆಯ ಕೋರ್ಟಿನ
ಅವರಣಗಳಲ್ಲಿ
ನಡುಯುವ ವಾದ
ವಕಾಲತ್ತು ..,
ಒಮ್ಮೆ ಅವಳಿಗೆ
ಜೀವವಾಧಿ
ಒಮ್ಮೆ  ನನಗೆ
ಗಲ್ಲು ...

ಆಂಟಿ ಹರಿವ ನದಿ
ಅವಳು
ನಾನು
ಅವಳ
ನೇವರಿಸಿ ಸತ್ಕರಿಸುವ
ನೆಲ ..,
ಅವಳಿಗೆ ನನ್ನ
ಆವರಿಸಿದ ಅಹಂ
ನನಗೆ ಅವಳ
ನೇವರಿಸಿದ ಅಹಂ ..,

ತಿರುಗಿ
ನೋಡುವಷ್ಟರಲ್ಲಿ
ಅವಳು  ಆವಿ
ನಾನು ಬಿರುಕು
ಭುವಿ ..,

ಅವಳು ಮತ್ತೆ
ಮಳೆಯಗುವಳೇ ?
ಆದರು,
ನನ್ನ ನೆಲವ
ಸೇರುವಳೇ ??
ಭೋರ್ಗರೆತ
ಬೇಡ
ಬೊಗಸೆ
ದಕ್ಕುವುದೇ ?

ಹನಿಯಾದರೂ ??

ಕಾದು ಕುಳಿತಿರುವೆ ...,

ಸಂಧ್ಯೆ..
ನಾಳೆ ಇಲ್ಲಿ ಬರುವ ಮುನ್ನ
ಅಲ್ಲಿ ಹೋಗಿಬಾ
ನನ್ನ ನೆಲದ
ಬಂಜರಿಗೆ
ಅಲ್ಲಿ ಕಣ್ಣಹನಿಯ
ಬಳುವಳಿ ತಾ..
ನೇವರಿಸಿ ನೇವರಿಸಿ
ಹನಿಯ ಮುತ್ತಾಗಿಸಿ
ತಿರುಗಿ ಅವಳಿಗೆ
ಎರೆವೆ ...,



















ಗುರುವಾರ, ಫೆಬ್ರವರಿ 21, 2013

ಅರಿವು

ವರುಷಗಳ
 ಹಿಂದಿನ ಮಾತು
ನಾನು ಮಳೆಯಗಿದ್ದೆ
ಋತು ನನಗೆ ಸಂಗಾತಿ
ಅದೊರೊಟ್ಟಿಗೆ  ಪಯಣ,
ಅದರೊಟ್ಟಿಗೆ ಯಾನ ,
ಅದು ನಿಂತಲ್ಲಿ
ನಿಂತು ,
ತಿರುಗಿದಲ್ಲಿ
ತಿರುಗಿ
ಸಾಗಿತ್ತಿದೆ ..

ಋತು ಮೊದಲಿಂತೆ ಇರಲಿಲ್ಲ
ದಿನಕೊಮ್ಮೆ ಬದಲು ..,
ಒಮ್ಮೊಮ್ಮ್ಮೆ ದಿನಕ್ಕೆ ನಾಲಕ್ಕು  ಸಾರಿ ..,


ದಾರಿಯ ಅಂದಾಜು ಸಿಗುತ್ತಿರಲಿಲ್ಲ
ನಕ್ಷೆಯ ಬರೆದಿಟ್ಟು
ನನ್ನ ಕಾಲಿಗೆ ಇಂಕು ಮೆತ್ತಿ
ದಾರಿ ಬರೆದೆ , ..,

ಎಷ್ಟು ತಿರುವು !!???

ತಿರುವ ತಿರಿಸಿ
ನಕ್ಷೆ ನೋಡಲು
ನಿಂತಲೇ ನಿಂತ ಭಾವ !!
ನಾನು ಚಲಿಸಿದ್ದು ಸುಳ್ಳೇ
ಹುಟ್ಟಿದ ಚಪಲ .. :(

ನಿಂತ ನಾನು
ಮಳೆಯಲ್ಲ ,
ಇಲ್ಲಾವುದೋ  ರಸ್ತೆ
ಬದಿಯಲ್ಲಿ ಉಳಿದು ಹೋದ
ನೀರ  ಹನಿ
ನಾನು ..

ಸೂರ್ಯನಿಂದ ದೂರಾದೆ ಮೇಲೆ
ಅನಾಥ ಭಾವ ..,
ಭೂಮಿಯ ಅಪರಿಚಿತ
ಮಡಿಲಿಗೆ
ಅಸ್ಪರ್ಶ್ಯ ಭಾವ ..,





ಶುಕ್ರವಾರ, ಫೆಬ್ರವರಿ 15, 2013

ನಾ ಸೋಲಲಿಲ್ಲ ಗೆಳತಿ

 ದಿನಗಳು ಲೆಕ್ಕಕ್ಕೆ ಸಿಲುಕವು .., ತಿರುಗಿ ನೋಡಿದರೆ ಬದುಕು ಎರಡೇ ಭಾಗ ಒಂದು ನಿನ್ನ ತೆಕ್ಕೆಯಲಿ ಕಳೆದದ್ದ್ದು ಮಾತೊಂದು ನಿನ್ನ ಕಳೆದು ಹೋದ  ತೆಕ್ಕೆಯನು ಹರಸಿದ್ದು ..,
ಆ ಊರಿನ ಬೀದಿಗಳಲೆಲ್ಲ ನನ್ನ ನಿನ್ನ ಮನೆಗೆ ತಲುಪಿಸಲೆಂದೇ ಹುಟ್ಟಿದವ ? ಗೊತ್ತಿಲ್ಲ , ಊರಿನ ಅಷ್ಟು ಪರಿಚಯಗಳೆಲ್ಲ ಮುಗಿಸಿ ನಿನೆಡೆಗೆ ಬಂದವನು ನಾನು , ಈಗ ನೀನಿರುವ  ಮನೆಯ ಅರಿಯದೆ ಬೀದಿಗಳೆಲ್ಲ ದಿಕ್ಕೆಟಿವೆ , ನಾ ಅವುಗಳ ಬೆನ್ನೇರಿ ಹೊರಟು  ಮತ್ತೆ ಮತ್ತೆ ದಾರಿ ತಪ್ಪುತೇನೆ ..,ಮತ್ತೆ ಮತ್ತೆ ಅರಸುತೇನೆ .. 

ಉರಿವ ಬೆಳಕಂತ ನಿನ್ನ ನಗುವ ಅರಸಿ ಅರಸಿ ಮತ್ತೆ ಮತ್ತೆ ಆ ಮನೆಯ ಗೋಡೆಗಳನ್ನು ದಿಟ್ತಿಸುತೇನೆ , ನಿನ್ನ ಕಣ್ಣ ಮಿಂಚಿನ ಬೆಳಕು ನನ್ನ ಮೊಗವ ಮತ್ತೆ ಅರಳೀಸಿತೆಂಬ ಆಕ್ರಂದನೆ...ಅನಂದವಲ್ಲಿ .., 
ಈ ದೇಹ ಮಂಡಿಯೂರಿ ಆ ಪರಿ ದೈವವನ್ನು ಬಯಸಲಿಲ್ಲ , 
ನಿನಗೂ  ಗೊತ್ತು ಉಸಿರ ಬಗೆದು ಎನ್ನ ಕದ್ದೊಯುವ ಸಾವಿಗೂ ನಾ  ಆ ಪರಿ  ಸೋಲುವುದಿಲ್ಲ ..,
ಅದಾವ ಕ್ರೌರ್ಯದ ಮೊನಪೋ ನಿನ್ನ ಮಾತಿನ ಬಿರುಸಿಗೆ , ಆ ಕೊನೆಯ ಚೂಪಿಗೆ ನಾ ಕೊರಗಿ ಸೊರಗಿ 
ನಲುಗಿ ಹೋದೆ .., 

ನಾ ಸೋಲಲಿಲ್ಲ ಗೆಳತಿ ನಿನ್ನ ಗೆಲ್ಲಿಸಿ ಹೊರಟೆ .., 

ನಿನಗೆಂದು ಬರೆದ , ಬರೆಯದೆ ಉಳಿಸಿದ ಅಷ್ಟು ಕವಿತೆಗಳು ಇಂದು ಎದೆ ಒಳಗೆ ಬೇಯುತ್ತವೆ , 
ನನ್ನ ಭಾವದ ತೆಕ್ಕೆಯ ಬಿಸಿ ಇದ್ದದ್ದು ನನ್ನ ಕಾವ್ಯದಲ್ಲಿ,   ನಾ ಕಾವ್ಯವಾಗಿ  ಹೊಮ್ಮಿದ್ದರೆ  ನೀನು ಕರಗುತ್ತಿದೆಯೇನೋ ..

ಉಳಿದು ಹೋದ ಎಲ್ಲ ಜೀವಗಳಂತೆ ನನ್ನಲು ಜನ್ಮಕಾಗುವಷ್ಟು ನೋವಿದೆ , ಮೋಸ ಹೋದ ದಣಿವಿದೆ ..,

ಚೆಲುವ ನಿನ್ನದು ? ನನ್ನ ಸಳದದ್ದು , ಮುಗ್ಧತೆಯ ? ಅದಾವ ಸಂಕೀರ್ಣ ಅಭೇದ್ಯ ಗಣಿತವೋ ಇನ್ನು ಉತ್ತರ ಅರಸಿ ತತ್ತರಿಸುತಿರುವೆ .., ಪ್ರತಿ ಬಾರಿ ಉಳಿದದ್ದು ಸೊನ್ನೆಯೆ ..,
ಬದುಕು ಹಿಂದೆ ಹೋಗುವ ಪಯಣವಲ್ಲ , ಮುಂದೆ ಸಾಗಲು ನನ್ನ ಗಾಲಿಗಳೆಲ್ಲ ಈ ಗಾಡಿ ಬಿಟ್ಟು ಹೋಗಿ ಅರ್ಧ ಆಯಸ್ಸಾಗಿದೆ.

ನಿನಗೆ ಹೇಳದ ಒಂದು ಸಂಗತಿ ಗೊತ್ತ , ತಿಂಗಳು ನಿನ್ನ ಕಾಣದೆ ನಾ ನೋವುಂಡು  ಕಾಯುತಿದದ್ದು ??
ಅಪರರೂಪಕ್ಕೆ ನಿನ್ನ  ಮನೆಯ ಬಾಗಿಲಿಗೆ  ಬಂದಾಗ   ನಿನ್ನಲ್ಲಿ   ನನ್ನ ಕಂಡೊಡನೆ ಮೂಡುವ ಸುಳ್ಳು ಆಶ್ಚರ್ಯದ್ದು ,
 ಗೆಳತಿ ನೀ ದೂರ ದೂಡುವೆಯೆಂಬ ಸಣ್ಣ ಸುಳಿವ ನನಗೆ ತೋರಬಾರದಿತ್ತೆ :(??
 ಆ ತಿಂಗಳು , ,ವಾರ  ವರುಷ ನಿನ್ನ ಉಸಿರಗಂಟಿ ನಿಂತು  ಬಿಡುತ್ತಿದೆ ,

 ಇರಲಿ ನಾನು ಕರುಣೆಗೆ ಅರ್ಹನಲ್ಲ ಎಂಬುದು ನೀನಿಟ್ಟ ತೀರ್ಪು , ನಾ  ಅರಿಯಬಲ್ಲೆ ...,

ನಮ್ಮೂರ   ಹೊಳೆಗೆ ಅಂಟಿದ ಮೆಟ್ಟಿಲ  ಮೇಲೆ , ಅ ದೇವಸ್ಥಾನದ ಹಜಾರದಲ್ಲಿ  ಕುಳಿತು ,  ಮತ್ತೆ  ಮತ್ತೆ ಅಳುತೇನೆ .
ನಿನಗೆ ಗೊತ್ತ ಆ ಬಸವನಿಗೆ   ನಮ್ಮ  ಪ್ರೀತಿ ಫಲಿಸಿದರೆ  ಸಣ್ಣ  ಕಿರೀಟ ಕೊಡುವ ಹರಕೆ ಇಟ್ಟಿದ್ದೆ ??
 ಈ ನಡುವೆ ಆ ಗುಡಿಯ   ಬಾಗಿಲಲ್ಲಿ ಕೂತು ಅಣಕಿಸುವ ಅವನಿಂದ  ಅವಿತು  ನಿಂತು ನಿಟ್ಟುಸಿರು ಬಿಡುತೇನೆ..

ಆ ಕೃಷ್ಣನ ಗುಡಿಯ ಬಕುತಿಯ ಅಲೆಗೆ ಸಿಕ್ಕಿ ಉನ್ಮಾದದಿ ತೇಲುತಿದ್ದ ನಾ , ನಿನ್ನ ಪ್ರೀತಿಯೂ  ಪ್ರಾಪಂಚಿಕ ವಿಚಾರದ , ಮೋಹಕ್ಕೆ ಮುಸುಕು  ಹಾಕಿದ ಸೆಳೆತ ಎಂದು ಭಾವಿಸಿದ ಮರುಕ್ಷಣಕ್ಕೆ   ಅಧ್ಯಾತ್ಮದ ಹಸಿವು ಮರೆಸಿ ಹೊರಗೆ ಬಂದೆ .

ಈಗ  ನೀನಿಲ್ಲ , ಆ ಗುಡಿಯ ಬಾಗಿಲು ನನ್ನ ವ್ಯಂಗ್ಯದಿ  ಕರೆಯುತಿದೆ , ಹೋಗಲಾರೆ  ...,

ದೈವ ಇಲ್ಲಿಂದ ಸೋತವರು ಅರಸುವ ಪಲಾಯನ ಸೂತ್ರವಲ್ಲ ಅದು ಗೆದ್ದವನಲ್ಲಿ ಹುಟ್ಟುವ ವೈರಾಗ್ಯ ..,
ನಾನು ಗೆದ್ದರೆ ದೈವಕ್ಕೆ ಕೈ ಚಾಚುವೆ ,  ಇಲ್ಲವಾದರೆ ದೈವಕ್ಕೆ ಅವಮಾನ , ಒಮ್ಮೆ ದಿಕ್ಕರಿಸಿರುವೆ ಮತ್ತೆ ದಿಕ್ಕರಿಸಲಾರೆ .
ನಾನು ತಿರಸ್ಕಾರಕ್ಕೆ ಸಿಲುಕಿ ಕೊಚ್ಚಿ ಹೋದ  ಆತ್ಮಾಬಿಮಾನವ ?
ಇಲ್ಲ ,
ನಿನ್ನ ಪ್ರೀತಿಯ ಹಳಸಿದ ನೆನಪ ,  ನಿನ್ನೆಗಳ , ನಿನ್ನ ಸಾ೦ಗತ್ಯದ ಮೆಲುಕಿನ ಸಣ್ಣ ಬಿಸಿಲಿಗೊಡ್ಡಿ ಒಣಗಿಸಿ ಒಣಗಿಸಿ ಎದೆಗಪ್ಪುವ,  ಮನಸ್ಸ  ಸುಟ್ಟಿ ಕೊಳ್ಳುವ  ಕಾವ ...,
ನನ್ನ ಪ್ರೀತಿ ಅತಿರೇಕ , ಮೌಡ್ಯ , ಹುಚ್ಚು , ನನ್ನ ಪ್ರೀತಿ  ಕಂಬನಿ , ನೋವು ,  ಸಂಕಟ
ನಾ ಬರೆವ ಪ್ರತಿ ಪದವು ನಿನ್ನ ಪಡೆಯದೇ ಹೋದ ಮನವು ಸಾವಿನೆಡೆಗೆ ಮುಖ ಮಾಡಿ ದೂಡಿದ ದಿನವ ,
 ಇಲ್ಲ ಬದುಕ ಗಾಡಿಗೆ ನಿನ್ನೊಡನೆ ಹೋದ ಗಾಲಿಯ ಅರಸುವ ಸೋಲುವ  ಪ್ರೀತಿಯ ..,

 ನನ್ನೆದೆ  ಸ್ಮಾಶನವಾಗಿದೆ , ನಾನು ಚಂಡಲ , ಇಲ್ಲಿ ದಿನ ಸಾಯುತ್ತೇನೆ , ನನ್ನನ್ನು ನಾ  ಸುಡುತೇನೆ , ನನ್ನ ನಿನ್ನೆಗಳ ಹೂಳುತೇನೆ ..ಮತ್ತೆ ಮೇಲೇರುವ ದೇಹವಿರದ ಆತ್ಮದಂತೆ ಗೊರಿಯಗಳಾಚೆ  ಹೊರಳುತೇನೆ , ನರಳುತೇನೆ ..,

 ನಾ  ವರುಷಗಳು  ಹಿಂದೆ ನೀ ಕೊಂದ ಆತ್ಮ , ಗೆಳತಿ .., ಮುಕ್ತಿ ನನಗೆ ಬೇಡವಾದ ವರ,
 ನನಗೆ ನಿನ್ನೊಡನೆ  ಮುಕ್ತನಾಗುವ ಬಯಕೆ .., ಮುಂದೆಲ್ಲೋ ಸಾವಿನಾಚೆಯ ಜನ್ಮದಲ್ಲಿ ನನ್ನ ತಪವು ಫಲಿಸಿ ನಿನ್ನ ಆರಾಧಿಸುವ ಜ್ವರ .... 

ಭಾನುವಾರ, ಫೆಬ್ರವರಿ 10, 2013

ಸುಳ್ಳೇ ಸರಿ...

ಮಾತು, ಮೌನ, ನೋವು ,ಸುಖದ ನಿಕ್ಷೇಪ ಅರಸಿ ಹೊರಟವಗೆ ಮಾರ್ಗ ಮಧ್ಯೆ ಅನಂತ ಅನಂತ ಅನುಭವ . ಗುರಿ, ನಡೆದು ಸೇರಲು   ಹೊರಟ್ಟಿದವಳ ಹೆಸರ ? ಇಲ್ಲ ಕಾಲ ಕೆಳಗೆ ಬಿಡದೆ ಬೀಳದೆ ಅಂಟಿದವಳ  ಹೆಸರ ??  ನೂರು ನೂರು ಪ್ರಶ್ನೆಗಳ ಸಲುಹುತಿರುವವನಿಗೆ ಆ ಪ್ರಶ್ನೆ ಮಲತಾಯಿಯ ಮಗು ..

ಬದುಕು ಅಧ್ಯಾತ್ಮದ , ಧೈವಾನುಭುತಿಯ  ಅವಕಾಶವ ? ಇಲ್ಲ ಸಾವಿನೆಡೆಗೆ ಮನುಜ ಮಾಡಿಕೊಳ್ಳುವ ಸಣ್ಣ ಪೂರ್ವ ಸಿದ್ದತೆಯ ?
ಪ್ರೀತಿ , ಸಂಬಂದ ,ಸ್ನೇಹ ,ದ್ವೇಷದ ಅವಶೇಷಗಳ ಕೆಳಗೆ ಮನುಕುಲ ಹುಡುಕುವುದು ತಾತ್ಕಾಲಿಕ ಮರೆವ , ನಶೆಯ ನಿಶೆಯ?
ಸಣ್ಣ  ಮಂಪರ ?ಮುಗಿದು ಹೋಗುವ ಆ ಜೋಂಪು , ದಿಟ್ಟಿಸಿ ನೋಡುವ ವಾಸ್ತವ , ಬಿಡದೆ ಕಾಡುವ ವ್ಯರಾಗ್ಯ !!  ನಡುವೆ ಸುಡುವ ಹೊಸ ಬಂಧಗಳು,  ಅವುಗಳ ತುಸು ಹಿಂದೆ ನಿಂತು ಅಣಕಿಸುವ ಹಳೆಯ ಅವಶೇಷದ ಧೂಳು .....

ಏತ ಹೋಗಲೋ ನಾನು ಸುತ್ತಲು ಕವಿದವನೇ
ಇತ್ತ ಬಾರದಿರೆಂಬ ದಾರಿಯೆಡೆಗೆ .... !!

ಇಂದು ನಿನ್ನೆಯೆದಲ್ಲ ಕಣ್ಣಿನ ದಣಿವು ,ದಿಟ್ಟಿಸೋ ಕಸುವು , ಆದರು ಮುಂಜಾವ ಕರೆಗೆ ನನ್ನ ಆರಂಬಿಸಿ , ಕತ್ತಲ ನಿದ್ದೆಗೆ ಜಾರಿಸಿ ಎಂತದೋ ಸುಂಕಕೆ , ಋಣಕ್ಕೆ ಸಿಲುಕಿ ನನ್ನ ಜೊತೆ ಸಾಗುವ ಬಗೆ...
ನನ್ನ ಬಿಟ್ಟು ಹೋಗಿ ಕ್ಷಣವೂ ದೂರವಿರದೆ ಮತ್ತೆ ಬಿಗಿದಪ್ಪುವ ಉಸಿರ ಬುಗ್ಗೆ ..,
ಸದಾ ನನ್ನೊಳಗೆ ಮೀಟುವ ,ನನ್ನ ಭಾವಗೀತೆಗಳಿಗೆ ಹಿನ್ನೆಲೆಯಾಗಿ ನನ್ನಾ ಕಾಲ ಚಕ್ರದೊಡನೆ ನೂಕುವ ಹೃದಯ ..,
ನನ್ನ ನಾನತ್ವಕ್ಕೆ , ಉಳಿವಿಗೆ , ಅಸ್ತಿತ್ವವೆ ಉದ್ದೇಶದಂತಿರುವ ಈ ದೇಹ ...,

ಈ ಪಯಣ ಎಲ್ಲಿಗೋ ಇರಬಹುದೆಂಬ ಸಮರ್ಥನೆ ಕೊಡುತಿದೆ.

ಎಲ್ಲರ ಬದುಕು ಈಗಿರಲಾರದೇನೋ ? :(
 ಪ್ರೀತಿಯ ಜೊಂಪು ಇಳಿಯದೆ ಬದುಕೆಲ್ಲ ಮಿಂದವರು ,
ಸಾಧನೆಯ ಎತ್ತು ದಾರಿ ಸವೆಸಿ ಆಯಸು ಕಳೆದು ...
ವಾಸ್ತವದೊಳಗೆ ವಾಸ್ತವಗಳ ಕೋಟೆ ಕಟ್ಟಿ ಮೆರೆದವರು ಇಲ್ಲೇ ಬದುಕಿದಾರಂತೆ .., ಸುಳ್ಳೇ ಸರಿ , ದ್ವಂದ್ವ ಮೀರಿ ಬದುಕಿದರಲ್ಲವೇ ನಿರ್ದಿಷ್ಟತೆ ??


                                                                                                            (to be continued ...)


ಶನಿವಾರ, ಜನವರಿ 19, 2013

ಮರುಕದ ಸನಿಹ !

ಎಂತ 
ಸನಿಹವೋ ಕಾಣೆ 
ಬದುಕೇ... 
ಉಸಿರಂತ ಅಂಟ,
ನಂಟ
ಉಳಿಸಿದೆ .., 

ಎಂತ
ಮರುಕವೋ ಕಾಣೆ  
ಬದುಕೇ .., 
ಹೆಸರಂತೆ ಕಿವಿಗೆ 
ಅಂಟಿ 
ಅಪ್ಪಳಿಸಿದೆ .., 

ಕೊಂಚ 
ಇಕ್ಕಟು ದಾರಿ ,
ಪುಕ್ಕಟೆ ಪಯಣದ 
ಭಾವ ..,  
ತುದಿಯಲಿ 
ದೊರೆತವನು 
ಒಪ್ಪಿಸಿದ 
ಲೆಕ್ಕಕೆ 
ಬಿಕಾರಿ ಜೀವ ..,  

ಮರುಕದ ಸನಿಹ 
ಸನಿಹದ ಮರುಕ .., 
ದಾರಿ ಮುಗಿಸಿ 
ಮುಪ್ಪಾದವಗೆ 
ಉಳಿದ ಧನ ಕನಕ .., 

ರಶೀದಿ ಇಡಿದು 
ಪಯಣ ಮುಗಿಸಿರುವೆ.., 
 





  





ಬುಧವಾರ, ಜನವರಿ 16, 2013

ಕಾದಿದೆ..

ಇರದ ನಿನ್ನ
ಅರಸಿ ಅರಸಿ
ನಾ
ಮಿಡಿಯುತಿರುವೆ
ಬರದ
ನಿನ್ನ
ಮೆರೆಸಿ ಮೆರೆಸಿ
ನಿನ್ನೆ
ಮಡುವಲಿ
ಕೊಳೆಯುತಿರುವೆ ..

ಬಾನು ಕರಗಿತು
ಭುವಿಯ ತಪಕೆ ,
ಭುವಿಯು ಸವೆಯಿತು
ಅಲೆಯ ತಪಕೆ..,

ನಿಂತ ನೀರು ಹರಿಯ
ತೊಡಗಿದೆ
ಹರಿದ ನೀರು
ಸೇರಿದೆ ..,

ಇರುವ
ನಿದಿರೆಯ
ನಿನಗೆ ಬರೆದು
ಕನಸು ಎಂದಿಗೋ
ಮುಗಿದಿವೆ ..,

ಕನಸು ಬಿಳದೆ
ನಿದಿರೆ ಬಾರದೆ
ಕತ್ತಲು ,
ದಿಗಿಲಾಗಿದೆ

ಎಲ್ಲಿ ಇರುವೆ
ಹೇಗೆ ಬರುವೆ
ನಡೆದು ಬರುವೆಯ.,
ಜಾರಿ ಬರುವೆಯ ..,
ಹರಿದು ,ಕರಗಿ
ಬರುವೆಯ ....
ಕಾದು ಕಾದು
ಸೊರಗಿದೆ
ನನ್ನ ಕಣ್ಣು
ಕಾದಿದೆ...,