ಭಾನುವಾರ, ಡಿಸೆಂಬರ್ 16, 2012

ದೀಪ ದಿಟ್ಟಿಸಿ..!

ದೀಪ ದಿಟ್ಟಿಸಿ
 ಕಣ್ಣು ತೋಯ್ದಿವೆ
ಯಾವುದು ಆ ಧ್ಯಾನ
ದೈವ ಕಾಣದು , 
ಜೀವ ತಣಿಯದು 
ಯಾವುದಾ ಪರಮಾತ್ಮ ..

ದೀಪವಾರಿಸೆ 
ಕತ್ತಲಪ್ಪಲು 
ಎಷ್ಟು  ದ್ವಂದ್ವ,
ಅನಂತ ಭಾವದ
ಅತಿಕ್ರಮಣ ,
ನಾಳೆ ನಿನ್ನೆಯ ಒಗಟು 
ಬಿಡಿಸಲು  
ಮತಿಬ್ರಮಣ ..

ನಿನ್ನೆ ಕಳೆದಿದೆ 
ನಾಳೆ ಬಾರದೆ 
ಇಂದಿನೆಡೆಗೆ ಅಲಸ್ಯ..,
ಜೀವ ಬಯಸಿದೆ 
ಕಾಲ ನಿಲಿಸಲು 
ಎಂತದು ಈ ಮೌಡ್ಯ ..

ಹೇಗೆ ನಿಲಿಸಲ್ಲಿ 
ಕಣ್ಣ ಮುಚ್ಚದೇ 
ಹರಿದು ಮರೆಯುವ 
ನೆನಪನು ..

ನನಗು ಗೊತ್ತು ಕಾಲ 
ನಿಲ್ಲದು ..
ಇಂದು ,ಉರಿದು
ಅಳಿದು ,ಮುಗಿವುದು...
ಇಂದು  
ನಿನ್ನೆ ಆಗದಿರಲು 
ಬದುಕದಿರುವ ಶಪಥವು .

ನಾಳೆಯಾ  
ನಿನ್ನೆಯಲಿ 
ನೆನಪು ಖಾಲಿ ..
ಬಾರದು 
ಮತ್ತಾವ 
ಖಯಾಲಿ .

ದೀಪ ದಿಟ್ಟಿಸಿ ನಾಳೆ 
ಕೂರುವೆ 
ಕಾಣಲ 
ಪರಮಾತ್ಮವು..... 







ಬುಧವಾರ, ಡಿಸೆಂಬರ್ 12, 2012

ಕಾಯುವುದು ಎನ್ನ ದೆಶೆಯು !!

ಎಲ್ಲೋ ಇರುವ
ಮಳೆಯ
ಮೋಡ ಹೊತ್ತು 
ತಂದು
ಹೊತ್ತು ಮುಳುಗೋ 
ಹೊತ್ತಲ್ಲಿ 
ಎರಚಿ ಹೋಗಿ ..
ಬೆಳೆದು ನಿಂತ 
ಪೈರು 
ಬೇರು ಆಚೆ 
ಬಂದು 
ನಲುಗಿ ಜರುಗಿ... 

ಉಳಿದ  ಕೊನೆಯ 
ಮೊಳಕೆಯು 
ಮುದುಡಿ 
ಪಸಲಿಲ್ಲ ,ಅಸಲಿಲ್ಲ 

ಎಂತ ಮುನಿಸದು 
ಮೋಡ ,
ಯಾಕೆ 
ಸುರಿದು ನಿಂತೇ ?

ಎಂತ ಕಾವು
ರವಿಯೇ 
ಮೊಡವ
ಇಲ್ಲಿಯವರೆಗೂ
ಬಿಟ್ಟೆ ...

ಮೋಡದ
ಮರೆಯಲ್ಲಿ 
ಇಣುಕಿರುವ
ದೊರೆಯೇ ?

ಯಾಕಿಂತ 
ಮುನಿಸಾಯಿತು  ..
ಮತ್ತೆ  ತೊರೆ ತುಂಬಲಿ
ಎಂದರಸೊ 
ಪೂಜೆ ಬಾಗಿನಕು 
ಬರವಾಯಿತು ..  

ಇನ್ನು  ಕಾಯುವುದು ಮಾತ್ರ 
ಎನ್ನ  ದೆಶೆಯು , 
ಉಳಲು 
ನೇಗಿಲ ಕಟ್ಟಿ 
ಹೂಳಲು 
ಬಿಜವ ಹೆಕ್ಕಿ , 
ಕಾಯುವೆ
ಅದೇ ಮಳೆಗೆ
ವರುಷ ಸವೆಸು ... 









ಭಾನುವಾರ, ಡಿಸೆಂಬರ್ 9, 2012

ವಾಂಛೆ ...

ಇಳಿ ಸಂಜೆಯ ಹೊತ್ತು , ಪಾರ್ಕಿನ ಮೊಗಲಿನ ಆ ಸಣ್ಣ ಮನೆ,  ಒಂದು ರೂಂನಷ್ಟು ಅಗಲ ..
ಆ  ಮನೆಯ ಅಂಗಳದಿ ಅತ್ತಿಂದಿತ್ತ ಓಡಾಡುಡುವ ಆ ಹುಡುಗ , ಕೈಯಲ್ಲಿ ಪುಸ್ತಕ .. ಸೆಕೆಂಡ್   ಪಿ ಯು  ..ಕೆಮಿಸ್ಟ್ರಿಯದ್ದು
ಒಮ್ಮೆಗೆ ನೆನಪು ಹತ್ತು ವರುಷ ಜಾರಿತ್ತು ... 
ಕಾಲು ಮುರಿದು ವರುಷ ಹಾಳಗಿತ್ತು , ಇನೆನ್ನು ಹೊಸ ಬ್ಯಾಚ್ ನಲ್ಲಿ ಸೇರಿ ಇಂಜಿನಿಯರ್ ಹಾಗುವ ಕನಸು , ಆ ಕ್ಷಣದಲ್ಲಿ ನಡೆಯುತ್ತಿದ್ದ  ಸಿ ಇ ಟಿ ಪರೀಕ್ಷೆಯ ಗೊಂದಲ , ಹೆಚ್ಚಗಬಹುದಾದ ಫೀಸ್ ನೆನೆದು ನಮ್ಮ ಅಂತಸ್ತು ಅನುಮತಿಸುವುದಿಲ್ಲ ಎಂದು ವಿನಾಕಾರಣ ಅಳುತಿದದ್ದು . ಅಪ್ಪ ಅಮ್ಮನ ಮೇಲೆ ಎಂತದೋ ಕಿಚ್ಚು ,  ಬಡತನದ ಬೇಸರಿಕೆ ಅಸಹಯಕತೆಯದ್ದು , ಅದರ ವಿನ್ನ: ಮತ್ತಾವ ಸೆಳೆವು ಸಿರಿತನವ ಅಹ್ವನಿಸದು .. ಇಂದು ಅದ್ಯಾವ ನೆನಪು ಮಾಸಲೊಲ್ಲದು ..
ಬಡತನ ಕಳೆದು , ಹತ್ತು ವರುಷ ಕಳೆದು ,  ಮಧ್ಯದಲ್ಲಿ  ಹುಟ್ಟಿ ನಶಿಸಿ ಹೋದ ಆಕಾಂಕ್ಷೆಗಳ ಮೂಟೆ ಕಳೆದು,
ಕೂತು  ಬದುಕ ಅವಲೋಕಿಸಿದರೆ ಮತ್ತವೇ ಅಸಹಾಯಕತೆ , ಅಂದು ಬಡತನದ್ದು ಇಂದು ಖಾಲಿತನದ್ದು ...
ಕುರುಡಬಿಕ್ಷು ಬದುಕು,  ಮತ್ತೆ ಮತ್ತೆ  ನಾಹಿ ಎಂದವರ ಮುಂದೆ ನಿಂತು ಕೈ ಚಾಚುತ್ತದೆ , ಕರೆದು ಕೊಟ್ಟವರನ್ನು ನೆನಪಿಡದ ಸ್ಮ್ರತಿ ಅವರನ್ನೇ  ದೂಷಿಸಿ ಎಡುವುತ್ತದೆ. ..

ಎಲ್ಲ ಇರುವವರಿಲ್ಲ , 
ಇಲ್ಲಿ,
ಇರುವವರೆಲ್ಲ ,
ಉಳಿದು ಹೋದವರೇ ,
ಕಳೆದು ಹೋದವರೇ , 
ಯಾರೋ ಮರೆತು 
ಯಾರನ್ನೋ ನೆನೆದು ,
ನೆಂದು ಹೋದವರೇ .
.
ಮಾರಾಟವಾಗದೆ ಉಳಿದ ಸರಕು ..
ಅಂಗಡಿಯವನ ಮಾತಲ್ಲಿ 
ಗಿರಾಕಿಯೆದುರು  
ಮೆರಗುಗಳು ..
ಅವನಿಗೂ ಅರಿವಿದೆ 
ಇವು ಬೋರ್ಗರೆದು 
ಹರಿದು ಹೋದ ನದಿ 
ಕೊನೆಯಲಿ ಉಳಿಸಿದ 
ಪಾಚಿಯ 
ವಸಹಾತುಗಳು..

 ಮದ್ಯ ವಯಸಿನ ಆಯಾಮಗಳಲ್ಲಿ ಹೋರಾಟ ಆವರಿಸಿ ಬದುಕು ಪಯಣವಾಗಿ ಮತ್ತರಿಗೋ ಬದುಕುವ ಬ್ರಮೆ , ಯೌವನದ ಕಿಚ್ಚಲ್ಲಿ ಪ್ರೀತಿ ,ಸ್ನೇಹ , ಸಂಪತ್ತಿನ  ಮೋಹ ,  ಅನಿರ್ದಿಷ್ಟ ಬೆಳಕು ,... 

ನನ್ನದು ಇದಾವು ಅಲ್ಲದ ವಯೋಮಿತಿ , ಬದುಕಿಗೆ ಇಡುವ ಪ್ರತಿ ಗುರಿ ಜಯದ ಪ್ರತಿಬಿಂಬ ಎಂಬ ಯೌವನದ ಕನವುಗಳು ಸಣ್ಣಗೆ ಜಾರುತ್ತಿವೆ . 
ಬದುಕಿನೆಡೆಗೆ ವಿಮುಖನಾಗದ ಹೊರತು ಬದುಕಿನೆಡೆಗೆ ಆಕರ್ಷಣೆ ಬಾರದು .
 ಕೆಲಸದ ಆತ್ಮ ರತಿ ಇನ್ನು ಮುಂದೆ ವಿಜ್ರಮ್ಬಿಸಬೇಕಿದೆ , ಆ ಉತ್ಸಾಹ ಸುಳ್ಳೇ ಮೂಡಿಸುವ ದಾರಿಯಲ್ಲಿ ಸಂಸಾರದ ಬೆಳವಣಿಗೆ , ನನ್ನ ಮನೆಗೆ ಸ್ತಿಮಿತವಾಗುವ ಲೋಕ  ಕಲ್ಯಾಣ!!

ಎಂತದೋ ಸೆಳೆವಿದೆ ವಿಕ್ರತ ವಾನ್ಚೆಯಿದೆ , ಪ್ರಶ್ನೆಗಳೆಡೆಗೆ .. ಉತ್ತರದ ಪರ್ವದ ಹೊತ್ತಿಗೆ ಮುಪ್ಪು ಅವಾರಿಸದಿರಲಿ , ..
ಏಕಾಂತದ ಏಕತಾನತೆಗೆ ಮೈ , ಮನಸ್ಸು ಒಡ್ಡದ ಹೊರತು ಪ್ರಶ್ನೆಗಳು ಸಂಬವಿಸವು ...
ಇರಲಿ ಬಾಳು ಪಯಣದ ಹಬ್ಬ , ದಾರಿಯ ನಕ್ಷೆ ಬದಲಾಗುವುದು ನಿರೀಕ್ಷಿತ , ಒಮ್ಮೊಮ್ಮೆ ಬೆಳಕಿನಂತ ಬದುಕೆಡೆಗೆ ತಿರಸ್ಕರ , ನೀರಿನಂತಿದರೆ ಎಷ್ಟು ಚಂದವಿತು , ಇಂತದ್ದೆ ದಾರಿ ಇಂತದ್ದೆ ಹುಟ್ಟು , ಬೆಳಕಿಗೆ ಅಂತದಾವುದು ಇಲ್ಲ ,ಹುಟ್ಟುವುದ ಹೊರತು ಮತ್ತಾವುದರ ನಿಖರತೆ ಇಲ್ಲ .
ಬದುಕು ಬೆಳಕಿನಂತೆ ಕಾಲು ನಡೆಷ್ಟು ಕಾಲ ಸವೆಸಿ ಎಲ್ಲೋ ಮುಗಿದು ಹೋಗುವುದು .
ಬದುಕ ವಿಸ್ತಾರಗಳ ಆಳ ಅಗಲ ಅರಿವ ಹೊತ್ತಿಗೆ ವಿರಕ್ತಿಯ ಭಾವ .ಇಸ್ಕ್ಕನ್ ದೇವಸ್ಥಾನದ ಇಕ್ಕೆಲಗಳಲ್ಲಿ , ಪರಮಹಂಸರ ವಚನ ವೇದಗಳಲ್ಲಿ , ರಮಣರ ಮೌನದಲ್ಲಿ, ಹುಡುಕಾಡದ  ಜಾಗವಿಲ್ಲ , ನಿರ್ಲಿಪ್ತತೆ  ಎಂಬುದು ಸಾದಿಸಲಾಗದ ಮೌನಕ್ಕೆ ಅರಸಿ  ದಿನ ಕಳೆಯುತ್ತಿವೆ .
ಯಾವುದನ್ನೂ ಯೋಚಿಸದೆ ಹಾಗೆ ಸುಮ್ಮನೆ ಮನಸ್ಸಿಗೆ ಅವರಿಸಲೆಂದು ಕಾಯುವ ಮೌನವ ಅಧ್ಯಾತ್ಮ ?? ದೇವರ ಕುರಿತು ಎಷ್ಟು ಓದಿದರು ಪ್ರಶ್ನೆಗಳ ಹೊರತು ಮತ್ತೇನು ಮೂಡದು , ಉತ್ತರ ತಿಳಿದವರಿಲ್ಲ , ಹಾಗುವ ಎಲ್ಲ ವಿಸ್ಮಯ ,   ದುರಂತಗಲಿಗೆಲ್ಲ ಕರ್ಮದ ಹೆಸರಿಟ್ಟು ,  ಮುಗುಳ್ನಕ್ಕು ನಡೆಯುವ ಹಾದಿ ಎಲ್ಲಿಹುದೋ ಕಾಣೆ



ದೈವತ್ವದ ನಂಬುಗೆಯ ಹೊರತು ಮತ್ತವುದು ಹಿಡಿದಿಡಲಾಗದ ಚಂಚಲತೆ , ಯಾವ ದೈವವ ಎಲ್ಲಿ ಹುಡುಕಲಿ ಎಂಬ ದ್ವಂದ್ವ , ಇಷ್ಟಂತೂ ಸತ್ಯ , ದೈವ ಕಾಣುವವರ , ಭಾವಿಸುವವರ , ಮನಕ್ಕೆ ಬಿಟ್ಟ ವಿಚಾರ , ಎಲ್ಲರೊಳಗೂ , ಇರುವ ಎಲ್ಲರಲ್ಲೂ ಪ್ರವಹಿಸುವ ಅಂಶ . ಧರ್ಮ ,ಜಾತಿ , ಸಾಕಾರ ,ನಿರಾಕರ , ದ್ವೈತ .ಅದ್ವೈತ ಇವುಗಲೆಲ್ಲದರಲ್ಲೂ ಅರಳುವ ಸತ್ಯ, ತಿರಸ್ಕರಿಸಲು ಕಾರಣ ಇರದು , ಪರಾಮರ್ಶಿಸಲು ತಾಳ್ಮೆ ...
ಹೊತ್ತು ಮುಳುಗುವ ಮುಂಚೆ ಬೆಳಗಾಗಲಿ ಅದಾವ ಸತ್ಯವೋ , ವ್ಯರಾಗ್ಯದಿಂದಿಚಗಿನ ಪ್ರಪಂಚದಲಿ ಒಮ್ಮೆ ಅರಳಿ .....  
                                                                                                             




ಶುಕ್ರವಾರ, ಡಿಸೆಂಬರ್ 7, 2012

ನೀರಾಗ ಬಯಸುವೆ ..

 ಸೊಂಪು ಸೊಂಪು ಕಾಡು
ಇಂಪು  ಸಾಹಿತ್ಯ...
ತಂಪ ಸುರಿದು ,
ದಾರಿಯಲ್ಲಿ ದಣಿವಿಲ್ಲ,
ಸಾಗುತಿಹುದು ....

ದಿಶೆಯು  ಇರದ ಪಯಣ ,
ಎಂಥ ಸೌಖ್ಯವೋ ಕಾಣೆ ..
ಒಂದೇ ಸಮನೆ ಅತ್ತಿತ್ತ
ನುಸುಳುತಿಹುದು ..

ಸಾವಿರ ಕಣ್ಣು ನೋಡಲು
ನಾ  ಬೆಳಕು !! 
ಒಮ್ಮೊಮ್ಮೆ ಮಂಜಾಗಿ
ಕವಿಯುತಿಹುದು ...

ನೋಡೋ ಕಣ್ಣಿಗೆ ,ತಿಕ್ಷ  , ವೇಗ...
ಜ್ನಾನದಾಯಮ ನಾನು  ...
ರೆಪ್ಪೆಯನ್ಚಲಿ ಹೊಟ್ಟೆ ಕಿಚ್ಚು ..

ಬೆಳಕಿಗಷ್ಟೇ ಗೊತ್ತು ಹುಟ್ಟಿದು ..
ಹರಿಯುವ ದಾರಿ ಎಲಿಹದು ..?
ತೂರಿ ತೂರಿ ಜಗವ
ದಿಕ್ಕು ದೆಸೆಯಾ ಮೀರಿ 
ನಡೆಯುತಿಹುದು ..

ಒಮ್ಮೆ ಕಲ್ಲ  ಬಂಡೆ ..
ಒಮ್ಮೆ ಉಕ್ಕಿನ ಗೋಡೆ ...
ಒಮ್ಮೆ ತಿಳಿ ನೀರು ..
ಒಮ್ಮೆ ಗಾಜಿನ ಗೋಡೆ..
ನೀರು ಹರಿದಂತೆ ಹರಿಯುತಿಹುದು
ಅಲ್ಲಲ್ಲಿ ಕವಲೊಡೆದು ಸೋರುತಿಹುದು ...


ನೀರ ದಾರಿಗೆ ಅಂಕುಶ ,
ಕಟ್ಟಿ..
ಸ್ವಚಂದ ಹಾಸಿನ
ಹೊಳೆಯು ,
 ಕಾಲುವೆಯು..

ನಾ ಬೆಳಕು ತಿಕ್ಷ್ಣ ,
 ಅರಿತ,
ಸಂಜೆಯಾ  ಕಪ್ಪು
 ಆವರಿಸಲು
ಮುಗಿದು ಹೋಗುವೆ..

 ಸಾವಿರ ಕಣ್ಣುಗಳ
ಮಮಕಾರ ಹೊತ್ತು
ಹುದುಗಿ
ಹೋಗುವೆ ...


ಬೆಳಕ ಜನ್ಮ ಬೇಡ
ನೀರಾಗ
ಬಯಸುವೆ ..
ಅವಳಂತೆ ಹುಟ್ಟು ಸಾವಿನ
ನಿಕರತೆ ಅರಸುವೆ ...








ಬುಧವಾರ, ಡಿಸೆಂಬರ್ 5, 2012

ಎಲ್ಲಿಹುದೋ ಕಾಣೆ,

ಊರ  ದಾಟಿಸೋ ಸಾವು ,
ಸಾವ ದಾಟಿಸೋ ಊರು 
ಎಲ್ಲಿಹುದೋ ಕಾಣೆ, 

ಊರ  ಸೂತಕ  ,  ಶವದ ಗಂಧ  
ಉಸಿರು ,ಏದುಸಿರು... 
ದಾರೀ  ಸಾವೆಸಿ ಹೋಗಲೆತ್ತ ?
ಕೈ ಹಿಡಿದು ನಡೆಸೆನ್ನ 
ಎಲ್ಲ ನಿನ್ನ ಚಿತ್ತ ...

ಸಣ್ಣ ಕಂಪನವು ಇರದ ಕೇರಿ ನಮದು 
ಊರಿಗೆಲ್ಲ ಹಬ್ಬದ ಸೋಬಗು ಇತ್ತು ,
ಯಾವ ದೇವಿಯೋ ಅವಳು 
ಮನೆಗುಂಟ ಬಂದವಳು , 
ಸೇವೆಗೆ ನಿಂತೇ ,
ಹಾಲು , ನೀರು , ಸಕ್ಕರೆ, ಯಾಕೆ? 
ಜೀವವ ತೇಯ್ದು ನೆತ್ತರ ಸುರಿದೆ , 
ದೇವಿಯ ಕಣ್ಣಲಿ ಮೂಡಿದ ನಗುವು 
ಅರಳಿಸಿತೆನನ್ನು ನಾನು ಮಗುವು ..,

ಪೂಜೆಯ ಕೊನೆಯಲ್ಲಿ
ಮೈಮರೆತು ಮಾಡಿದ ತಪ್ಪೊಂದಿತು 
ದೇವಿಯ ಮುನಿವಿಗೆ ನೆಪವೊಂದಿತ್ತು 
ಮುನಿದವಳ ಮಡಿಲಿಗೆ ಸಿಲುಕಿ
ಊರು ನಲುಗಿ 
ಕರಗಿಹೋದವು ಊರು ,ಸುತ್ತ ಹೆಣವು ..

ನೆನ್ನೆಯೇ  ಮುದುಕ ,  ನಾಳೆಯ ಮಕ್ಕಳು 
ಎಲ್ಲ ಶೂನ್ಯ  ..
ನಿನ್ನೆ ಬದುಕು  ,ನಾಳೆಯ ತಳುಕು ,
ಎಲ್ಲ ಶೂನ್ಯ , ..
 
ಊರ  ದಾಟಿಸೋ ಸಾವು ,
ಸಾವ ದಾಟಿಸೋ ಊರು 
ಎಲ್ಲಿಹುದೋ ಕಾಣೆ,