ಒಂದು ನೀಳ ಬಿಡುವಿನ ನಂತರ ಮತ್ತೆ ಬರೆಯುವ ಹವ್ಯಾಸಕ್ಕೆ ಜೀವ !!
ಜೀವ, ಜೀವನ ಪ್ರೀತಿ ಎರಡು ಕೂಡ ಕಣ್ಣ ಮಿಟುಕಿನಂತೆ ಬಂದು ಹೋಗುವ ಮಾನಸಿಕ ಸ್ಥಿತಿ , ಒಮ್ಮೆ ಬರವಣಿಗೆ ಮನಸಿಗೆ ಮುದ ನೀಡುವ ಪರಿಯ ಅನುಭವ , ಅದರ ಮೆಲುಕು , ಆತ್ಮ ಸಾರ್ಥಕ್ಯದ ತುದಿ ತಲುಪಿಸಿದರೆ ಕೆಲವೊಮ್ಮೆ ಇರದ ಪಾತಾಳಕ್ಕೆ ನಿಂತಲ್ಲೇ ಅದುಮಿ ಛೇದಿಸುತ್ತದೆ , ಆದರು ಬರೆಯುವುದರಲ್ಲಿ ಅಲೌಕಿಕ ಆನಂದವಿದೆ , ಜೀವದ ಒಳಗೆ ಕೂತ ದೈವ ಹೊಂಕರಿಸಿ ವಿಜ್ರಮ್ಬಿಸುತ್ತಾನೆ .
ಮನುಜ ಕುಲಕ್ಕೆ ಇರುವ ಅಮರನಾಗುವ , ಅನಂತನಾಗುವ ತ್ರಷೆಗೆ ಸಾಹಿತ್ಯ, ಕಲೆ ಇವು ಸುಲಭಕ್ಕೆ ಸಿಗುವ ಮಾರ್ಗಗಳು . ಇರಲಿ ನಮ್ಮದು ಒಂದು ಪ್ರಯತ್ನಕ್ಕೆ ಸ್ವಾರ್ಥದ ನಂಟು ಅಂಟಿಬಿಡಲಿ !!!
ಮೂಲೆಯಲ್ಲಿ ಕೂತು ಸದಾ ಕೂಡ ಕಣ್ಣ ಮುಚ್ಚಿ ಇರದ , ಬಾರದ ದೈವಕ್ಕೆ ಅಭಿನಂದನೆಅರ್ಪಿಸಿ ರಾತ್ರಿ ಮಲಗುತ್ತಿದೆ , ದೈವ ಹೊರತು ಮತ್ತೆಲ್ಲ ಪಾತ್ರಗಳು , ಇದ್ದವರು , ಇರುವವುರು ಎಲ್ಲರು .
ಇರದವರು ಮತ್ತೆ ಬಂದಂತೆ , ಇರುವವರು ದೂರವಾದಂತೆ ಕನಸುಗಳು . ದಿನ ಮುಂಜಾನೆ ಕನಸುಗಳ ಮೆಲಕು ಹಾಕಿ ದುಃಖದಲಿ ನೀರಾಗುತ್ತಿದೆ , ಒಮ್ಮೆ ಮಾತ್ರ ಕನಸಲ್ಲಿ ಕಂಡ ಸಂಪೂರ್ಣ ಚಿತ್ರ ಎದೆಯಲ್ಲಿ ಹಾಗೆ ಉಳಿಯಿತು ಎಲ್ಲ ಪಾತ್ರಗಳು ಯಾವುದೋ ಜೈಲನಲ್ಲಿ ಬಂಧಿಯದಂತೆ ,ನಾನು ಆ ಸೆರೆಮನೆಯ ಬಾಗಿಲ ಹೊರಗೆ ನಿಂತು ಅವರೊಡನೆ ಸದಾ ಬೇಡುವ ಪರಿ ,ಆ ಪಾತ್ರಗಳು ಬಂಧ ಮುಕ್ತಿಯಗಿಸುವಂತೆ ಕಾಡುವ ಪರಿ ... ಆ ದಿನ ಕನಸ , ಭಾವಗಳಲ್ಲಿ ಸೆರೆಮನೆಯ ಬಾಗಿಲ ತೆರೆದು ನೀಳವಾಗಿ ಅಭ್ಯಸಿಸಿದೆ .., ಈ ನಡುವೆ ಕನಸು ಖಾಲಿ ಖಾಲಿ !
ಮೂಲೆಯಲ್ಲಿ ಕೂತು ದೈವ ಅಭ್ಯಸಿಸುತ್ತೇನೆ ಕತ್ತಲ ಹೊರತು ಮತ್ತೇನು ನೆನಪಿರದು ಮುಂಜಾವಿಗೆ, ಅಳುವಿಲ್ಲ ಸರಿ , ಆಸೆಯು ಕೂಡ :(