ಮಂಗಳವಾರ, ಮಾರ್ಚ್ 31, 2015

ಸುಳ್ಳು ಮತ್ತು ವಾಸ್ತವ !

ಈ ಮಳೆ ,
ಆ ಸಮಾದಿಯ
ಮೇಲಿನ
ಒಣ ಹೂವಗಳಿಗೆ 
ಸುಳ್ಳೇ ಆಶ್ವಾಸನೆ
ನೀಡಿತ್ತು  ..
ಬಹುಶ: ,
ಮಣ್ಣ ಒದ್ದು
ಮಲಗಿದವನಿಗೂ ,
ಸುಳ್ಳೆ ... !

ವಾಸ್ತವ!!

ಅವನ ಹೂಳುವಾಗ
ಕಿತ್ತಿಟ್ಟ ಒಂದೆರಡು
ಪಾರ್ಥೆನಿಯುಮ್
ಗಿಡಗಳು ಮತ್ತೆ
ಚಿಗುರುತ್ತಿವೆ ,
ಸಮಾಧಿ ಇನ್ನಷ್ಟು
ಭದ್ರವಾಗಿದೆ ,
ಶ್ರದಾಂಜಲಿಗೆ
ಬಂದವರ ಹೆಜ್ಜೆ
ಗುರುತು ಸಂಪೂರ್ಣ
ಮಾಸಿದೆ ...

ಹೂಳುವವರೋ,
ಹೊಸ ಹಳ್ಳ
ತೋಡಿ ,
ಆಹ್ವಾನ ಪತ್ರಿಕೆ
ಮುದ್ರಿಸಿದ್ದಾರೆ ,







1 ಕಾಮೆಂಟ್‌: