ಗುರುವಾರ, ಜನವರಿ 8, 2015

ಗೀಟು

ಭೇದ ಕಾಣದು ,
ಅವರ  ಉಸಿರು
ತಮ್ಮದೇ   ಮಂದಿರ ,
ಮಸೀದಿ ,ಚರ್ಚಿನ
ಆವರಣಕ್ಕೆ
ಬಂಧಿಯಾಗುತ್ತಿಲ್ಲ ,

ಅವರ ರಕ್ತಕ್ಕೂ
ನಿಲಿಯಿದೋ
ಹಸಿರಿನದೋ
ಕೆಂಪಿನ ವೈವಿದ್ಯವಿಲ್ಲ  ..,

ಅಳುವಾಗ , ನಗುವಾಗ
ಹೆರುವಾಗ , ಹೊರುವಾಗ

ಒಂದೇ ದಿರಸು  !!

ಎಲ್ಲರು ಮತೀಯರು
ಮತಿಯುಳ್ಳವರೆ .,
ಗಾಳಿಯಲ್ಲೆ
ನೀರಿನಲ್ಲೇ
ಒಂದಷ್ಟು ಗೀಟು
ಎಳೆಯುತ್ತಾರೆ ,
ಒಬ್ಬರಿಂದೊಬ್ಬರು
ದೂರ ನಿಲ್ಲುತಾರೆ ,
ಮೇಲೆ ನೋಡುತ್ತಾರೆ ., !!

ಪಾಲಗಲೇಬೇಕು
ವಾಂಛೆ ಏರಿ

ಅವನ ಸೋಕಿದ
ಬಿಸಿಲು
ಇವನ ಕೆಮ್ಪಾಗಿಸುತ್ತದೆ ,
ಇವನು ತೊಯಿಸೋ
ಮಳೆ ಅವನ
ತಮ್ಪಗಿಸುತ್ತದೆ ,

ಇಲ್ಲ !ಇಲ್ಲಿ
ಏನೋ ವೈಪರಿತ್ಯವಿದೆ ,
ಎಂದು ಗುನುಗುತ್ತಾ  ,
ಕಣ್ಣ ಇಗಲಿಸಿ ,
ಜೀವದ ಪರಿಧಿ
ಮೀರಿ ನೋಡುತ್ತಾರೆ .,
ಎದೆಯ  ಹಿಂಡಿ ,
ಭೇದದ  ಔನತ್ಯದ
ವರದ ಆಸೆಗೆ
ಜೀವಗಳ ಸಾಮ್ಯತೆ
ತೂರಿ  ನೋಡುತ್ತಾರೆ ..,

ಏನೋ ಸಿಕ್ಕಂತೆ
ಹೂಂಕರ ,
ಭಯದ ಚಿತ್ಕಾರ,
ಸಾವು !!??
ಸಾವ ಕಾಣುತ್ತಾರೆ !
ಭಯದಿ ವಿಹ್ವಲರಾಗಿ
ದೈವ ನೆನೆಯುತ್ತಾರೆ ..!

ಗಾಳಿಯ ಗೀಟಿಗೆ
ದೈವದ ಉರಿ ಕಟ್ಟಿ,
ಮೌನ ಹೋಗುತ್ತಾರೆ , ...
ಹಾ ..!
ಸತ್ಯ ದರ್ಶನ
ಎಲ್ಲರಿಗು !!!!


ಸಾವಿನಾಚೆಗೆ ಇದೆ
ಅವನಿಗೆ ನರಕ 
ನನಗೆ ಸ್ವರ್ಗ 
ಎಂದು 
ಮನಸೇ ನಕ್ಕು 
ಗೀಟ ಆಚೆಗೆ
ವ್ಯಂಗ್ಯ ಬೀರುತ್ತಾರೆ ...  


ಒಟ್ಟಾರೆ 
ಸಾವ ದಡಕ್ಕೆ
ದೋಣಿ ಕಟ್ಟಿ
ಉಳಿದವರು ಬೇಕು ,
ಸ್ವರ್ಗ , ನರಕದ
ಆಮಿಷದ
ಅನಾವರಣಕ್ಕೆ  ..,
ದೇವರ ಕರೆದು
ಮೊರೆದವರು ಬೇಕು
ವಿಪರ್ಯಾಸಗಳ
ನೀರ್ವಾಣಕ್ಕೆ ..


ಈ ನಡುವೆ
ಹುಡುಕುತ್ತಿರುವೆ
ದೇವರಿಗಿಂತ
ಅವನ ಕಂಡವರ
ಸಿಕ್ಕರೆ ಕಳಿಸಿಕೊಡಿ
ನಮ್ಮವನ ...
ನೀರು , ಗಾಳಿಯ
ಮೇಲೆ ಗಡಿಗಳ
ಕೆಡವಬೇಕಿದೆ ...










ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ