ಸಿಡಿಲಿಗೆ ಅರ್ಧ
ಉರಿದ ಮರ
ಪ್ರತಿರೋಧವಿರದೆ
ಒಣಗುತ್ತಿರುವೆ ,
ಪಾಳು ಮನೆಯಾದರು ಬೇಕು .
ಅಲ್ಲಿನ ಹೆಂಚಿಗೆ ಆಸರೆ ,
ಬಾಗಿಲು ಕಿಟಕಿಗೆ ಮೈಯಿ ..,
ನೆಲಕ್ಕೆ ಹೊಸ್ತಿಲು .,
ಒಲೆಗೆ ಹೊಗೆ ಗೂಡು ,
ಯಾವ ಖಾಲಿತನವಾದರು
ಪೂರೈಸುವೆ ..,
ಫಲಾನುಫಲಕ್ಕೆ
ಒಂದಷ್ಟು ಆತ್ಮ ರತಿಯ
ಗಂಟು ಸಾಕು ..,
ಅರ್ಧ ಬೆಂದಿದೆ ಬೇರು ,
ನಡುವು ಅರ್ಧ ..,
ಎಲೆಗಳಿಗೆ ಇಬ್ಬನಿಯು
ದಕ್ಕುವುದು ಕಾಣೆ .,
ರವಿಯ ಬೆಳಕ ಅದು
ಮುಕ್ಕುವುದು ಕಾಣೆ .,
ಅಪ ಮೃತ್ಯುವಂತದ್ದು ಎರಗಿ
ಮುಕ್ಕಾಲು ಜೀವ ಸೊರಗಿ .,
ವ್ಯವಹಾರ ಹಪಹಪಿಯಲ್ಲಿ
ಕಾಲು ಜೀವ ಕೊರಗಿ ..,
ಆತ್ಮ ಹತ್ಯೆಗಾದರು ಸರಿ
ಪಾಳು ಮನೆಯಾದರು ಬೇಕು .....
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ