ಮಂಗಳವಾರ, ಏಪ್ರಿಲ್ 7, 2015

ಮಾಲಿ

ಕೆಂಪು ಗುಲಾಬಿ
ನಿನ್ನಗೆ ಉಪಮೆ ,
ಕಂಪು ಮಲ್ಲಿಗೆ
ಕೂಡ .,
ಹೂದೋಟದ
ಮಾಲಿಯಗುವರ
ಪಟ್ಟಿಯಲ್ಲಿ
ಕೊನೆಯ ಹೆಸರೊಂದು
ಖಾಲಿ ಬಿಡು .,
ಮೂಡಿವ
ಭಾಗ್ಯವಿಲ್ಲ ,
ಬಿಡಿಸಿ ಮಾಲೆ
ಕಟ್ಟುವ
ಕೈಯಾದರು
ಸಾಕು , ,

ಮಂಗಳವಾರ, ಮಾರ್ಚ್ 31, 2015

ಸುಳ್ಳು ಮತ್ತು ವಾಸ್ತವ !

ಈ ಮಳೆ ,
ಆ ಸಮಾದಿಯ
ಮೇಲಿನ
ಒಣ ಹೂವಗಳಿಗೆ 
ಸುಳ್ಳೇ ಆಶ್ವಾಸನೆ
ನೀಡಿತ್ತು  ..
ಬಹುಶ: ,
ಮಣ್ಣ ಒದ್ದು
ಮಲಗಿದವನಿಗೂ ,
ಸುಳ್ಳೆ ... !

ವಾಸ್ತವ!!

ಅವನ ಹೂಳುವಾಗ
ಕಿತ್ತಿಟ್ಟ ಒಂದೆರಡು
ಪಾರ್ಥೆನಿಯುಮ್
ಗಿಡಗಳು ಮತ್ತೆ
ಚಿಗುರುತ್ತಿವೆ ,
ಸಮಾಧಿ ಇನ್ನಷ್ಟು
ಭದ್ರವಾಗಿದೆ ,
ಶ್ರದಾಂಜಲಿಗೆ
ಬಂದವರ ಹೆಜ್ಜೆ
ಗುರುತು ಸಂಪೂರ್ಣ
ಮಾಸಿದೆ ...

ಹೂಳುವವರೋ,
ಹೊಸ ಹಳ್ಳ
ತೋಡಿ ,
ಆಹ್ವಾನ ಪತ್ರಿಕೆ
ಮುದ್ರಿಸಿದ್ದಾರೆ ,







ಬುಧವಾರ, ಮಾರ್ಚ್ 25, 2015

ಅವಳು








ಇನ್ನೋಬರಿಗಾಗಿ  ಬದುಕುವುದು ಕೃತಕವೆನ್ನಿಸಿದ  ಮೇಲೆ  ಸಾಯುವುದು











ಮಂಗಳವಾರ, ಮಾರ್ಚ್ 10, 2015

ಹೊಸದೊಂದು ಜನ್ಮ

ಮೇಜಿನ ಮೇಲಿನ ನಾಲಕ್ಕು ಖಾಲಿ ಹಾಳೆ ನನ್ನ ಅರ್ಥ ಮಾಡಿಕೊಂಡ ಅಹಮ್ಮಿನಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಹೊರಳುತ್ತವೆ , ನೀಳವಾದ ಉಸಿರು ನನಗೆ ಅರಿವಿಲ್ಲದಂತೆ ನನ್ನ ಬಿಟ್ಟು ದೂರ ಸರಿಯುತ್ತದೆ , ಕಿಟಕಿಯ ಆಚೆ ದಿಟ್ಟಿಸಿ ಮುಗಿದ ಮಳೆಯ ಅವಶೇಷಗಳ ನಡುವೆ ತೊಯ್ದ ಅಂಗವಿಕಲ ತರೆಗೆಲೆಗಳ ಅಸಹಾಯಕತೆ , ನಿಶ್ಚಲತೆ ಚೆಡಿಸಿದನ್ತಾಗಿ ದೃಷ್ಟಿ ಒಳಗೆ ಎಳೆದುಕೊಂಡು ನಿರ್ಲಿಪ್ತನಾಗುತ್ತೇನೆ ... ಎದುರಿನ ಗೋಡೆಗೆ ಮುಪ್ಪಾದಂತಿದೆ ,ಅಲ್ಲಲ್ಲಿ ನೇತು ಹಾಕಿದ ಹಳೆಯ ಫೋಟೋಗಳು , ನಾನು ಬೇಡವೆಂದು ಕಿತ್ತಿಟ್ಟ ಫೋಟೋಗಳು ಉಳಿಸಿ ಹೋದ ಮೊಳೆಗಳ ಗುರುತು , ಮೈಯೆಲ್ಲಾ ಗಾಯದ ಗುರುತ್ತಂತೆ ಎಡೆದು ಹೋದ ಸುಣ್ಣದ ಚಕ್ಕೆಗಳು , ಮತ್ತೆ ಇವು ನನ್ನ ನಾಳೆಯ ನೆನಪಿಸಿದೆ ....... ನಾನು ಖಾಲಿಯಾಗದ ಭಾವದ ಒರತೆಯಾಗಿದೆ , ಹರಿಯುತ್ತಾ ಸದಾ ತುಳುಕುತ್ತಿದೆ ಇಂದೇಕೆ ಹೀಗೆ ಖಾಲಿ ಭಾವ ? ಕನ್ನಡಕ ಹುಡುಕಿ ಮುಖಕ್ಕೆ ನೀರು ತಾಕಿಸಿ ಮೇಲೆದ್ದು , ಮನೆಯೆಲ್ಲ ಹುಡುಕಿ ಇಲ್ಲಿ ಬಂದವರ , ಇದ್ದವರ , ಹೋದವರ ಎಲ್ಲರ ನೆನಪು ತರಿಸುವ ಎಲ್ಲ ನಿಗೂಡ ಗುರುತುಗಳ ಹುಡುಕಿ ಸುಟ್ಟಿದೇನೆ , ಬಣ್ಣದಂಗಡಿಯಿನ್ದ ಹೊಸದಂದು ಬಣ್ಣ ಆರಿಸಿ ತಂದಿದ್ದೇನೆ , ಒಂದಷ್ಟು ಸೀಮೆಂಟ್ ಬಳಿದು ನಂತರ ಇಲ್ಲಿ ಬಣ್ಣ ಬದಲಿಸಿ ನನ್ನ ಶೈಥಿಲ್ಯದ ಸೂಚ್ಯದಂತ ಮನೆಯ ವಾಸ್ತು ಬದಲಿಸುತ್ತೇನೆ ... ನನ್ನ ಮನೆಯ ನಡುವಲ್ಲಿ ಇದ್ದ ಉದ್ದದ ಕನ್ನಡಿಯ ಹೊರಗಾಕ್ಕಿದ್ದೇನೆ ... ಈಗ ಇಲ್ಲಿ ಹೊಸದೊಂದು ಜನ್ಮವಾಗಿದೆ , ಇವನಿಗೆ ನೆನ್ನೆಯಿಲ್ಲ , ನಾಳೆಯಿಲ್ಲ , ಪರಿಚಯಸ್ತರಿಲ್ಲ , ಕಲಿತ ವಿದ್ಯೆಗಳೆಲ್ಲವನ್ನು
ತೊಳೆದ ಮೇಲೆ ಒಂದಷ್ಟು ಖಾಲಿ ಹಾಳೆಯ ಮೇಲೆ ಅಕ್ಷರಾಭ್ಯಾಸ ನಡೆಯುತ್ತಿದೆ ...

ಸೋಮವಾರ, ಮಾರ್ಚ್ 9, 2015

ಸಂಗಾತ

ಸಂಗಾತ ಅಂಗಾತವಾಗಿದೆ
ಮುಂಗುರಳ ಕಂಪನ ,
ಅಂಗೈಯ ನಡುಕ
ಉಸಿರ ಕುರುಹಿಗೆ
ಎದೆಯ ಸಂಚಲನ,
ಈಗೆ ಬದುಕ ಪ್ರತಿಫಲಿಸೋ
ಸೂಕ್ಷ್ಮ ಹುಡುಕಿ ಹುಡುಕಿ
ಹೆಣ ಕಾಯುತ್ತಿದೇನೆ ....
ಬಾಯಾರಿದೆ , ಕಣ್ಣಿಗೂ ದಾಹ ,
ಉಸಿರು ಎದೆಯ ತಲುಪುವ
ಮುನ್ನ ಗಂಟಲಲ್ಲಿ ನಲುಗುತ್ತದೆ ...
ಈ ಸ್ಮಾಶನದ ಮುದುಕ
ಎರಡು ಹಳ್ಳ ತೆಗೆದಿದ್ದಾನೆ
ದೂರ ನಿಂತು ನನ್ನ ನೋಡಿ
ಮರುಗುತ್ತಾನೆ .....
ಅವ ನನ್ನಲ್ಲಿ
ಸಾವಿನ ಕುರುಹು
ಕಂಡಿದ್ದಾನೆ ..,,

ಪ್ರೀತಿ!

ಸುಡಲು ವಿರಹವಿತ್ತು ನಡುವೆ ,
ಪ್ರತಿ ಭೇಟಿಯಲಿ ಪ್ರೀತಿಗೆ ಪುನರುತ್ಥಾನದಿ 
ಸಾಕಾರ,
ಒಟ್ಟಿಗೆ ಬದುಕುವ ದಾಸ್ಯ ಒದಗಿ
ಪ್ರೀತಿ ಇನ್ನು ಉತ್ಕಲನದ ವಿಚಾರ

ಚಂದ್ರ ಮತ್ತು ಅವಳು !

ದಡಗಳ ನೇವರಿಸಿ ,
ಹರಿವ ನದಿಯಂತ ಅವಳು 
ಹೋದಮೇಲೆ ,
ಸಾಲು ಸಾಲು ಮರಗಳ 
ಒತ್ತರಿಸಿ ಓಡುವ 
ಟಾರ್ ರಸ್ತೆಯ ಮಧ್ಯೆ ,
ಚಂದ್ರ ಸ್ಥಿರವಾಗುತ್ತಾನೆ ....
ಈ ರಸ್ತೆ ಅವನ ಪ್ರತಿಫಲಿಸುವುದಿಲ್ಲ ,
ಅವನಿಗೆ ಮಂಪರು ಹಚ್ಚುವಂತೆ
ತೂಗುವುದೂ ಇಲ್ಲ ,
ಮುಂಜಾನೆಯವರೆಗೂ ಕಾದು
ಸೂರ್ಯನಲ್ಲಿ ದೂರುತ್ತಾನೆ ,,
ಮರುದಿನ ಇಲ್ಲಿ ಜೋರು
ಮಳೆ ..,
ಇರುಳಿನ ತಿಳಿ ಆಗಸದ ಕೆಳಗೆ
ಪ್ರೀತಿ ಉಕ್ಕುತ್ತಿದೆ .....!!
ಇಲ್ಲೊಂದು ಹೊಸಾ ನದಿ

 ಚಂದ್ರನ ತೂಗುತ್ತಿದೆ !!