ಶನಿವಾರ, ಜನವರಿ 31, 2015

ಮೂರ್ತಿಗಳು...

ಮನಸ್ಸ ವಿಹ್ವಲ
ಅನುಮಾನ ,
ಅವಮಾನ ..
ನನ್ನ  ಕೊಂದ
ಮೂರ್ತಿಗಳ
ಸಾಲು ಸಾಲು
ನಿಲ್ಲಿಸಿದ ಮೇಲೆ 
ಮಹಾ ಯುದ್ದ
ಮುಗಿಸಿದೆ  ...

ಮನಸ್ಸು ಪ್ರಶಾಂತ,
ಈಗ ..
ಸತ್ತ ನಾನು
ಮತ್ತೆ ಎದ್ದಿದೇನೆ ..,
ದೇವರ
ಜೊತೆ ಯುದ್ದ
ಕಹಳೆ ಮೊಳಗಿದೆ ...
ಅವನದು ಒಂದು
ಮೂರ್ತಿ
ಕೆತ್ತುತ್ತಿದೇನೆ ...

ಶುಕ್ರವಾರ, ಜನವರಿ 30, 2015

thought !



May be ..its u ?? May be not ?... its me?? May be Not ?? Let me get back to sleep...truth shall lighten my dream..when I wake up.. i want to be u...!

ಗುರುವಾರ, ಜನವರಿ 29, 2015

ಬೆಟ್ಟ

ಇಲ್ಲೊಂದು  ಬೆಟ್ಟ ,
 ಹತ್ತಿ ಆಕ್ರಮಿಸಿ
ದಾರಿಯ ಕಲ್ಲುಗಳೆಲ್ಲ
ಸವೆಸಿದ್ದೇನೆ ...
ತುದಿಯಲಿ ನಿಂತಾಗ
ಜಾರುವ ಭಯ
ಹೋಗುತ್ತಿಲ್ಲ ...!

ಕಾಡಿಗೆ

ಕಣ್ಣ ಕಾಡಿಗೆ ,
ಗುಂಗುರು ಕೂದಲು
ಎಲ್ಲಿ ಕಂಡರೂ
ಮನದ ಹಾಳು ಮಂಟಪದ
ಕೀಲಿ ಹುಡುಕಿ  ..,
ಅದೇ ಪ್ರೀತಿಯ
ಗೋರಿಯ ಮೇಲೆ ನೆಟ್ಟ
ಹೂಬಳ್ಳಿಯ
ನಾಲಕ್ಕು ಹೂವ ಪಡೆದು ,
ಒಳ ಹೊಕ್ಕಿ  ,

ಮೂರ್ತಿಯ ಕಂಡು ,
ಕಣ್ತುಂಬಿ ಕೊಂಡು ,

ವಿಗ್ನವಾದ ದೇವಿಗೆ
ಹೂವು ಮುಡಿಸಲಾರದೇ,
ಬಾಡುವವರೆಗೆ ಹೂವು
ಬಾಗಿಲಲ್ಲೇ ಕಾಯುತ್ತೇನೆ  ..,







ಮಂಗಳವಾರ, ಜನವರಿ 27, 2015

ಯುದ್ದ

ಹುಟ್ಟಿ  ಮರು ಕ್ಷಣ
ನಕ್ಷತ್ರಗಳ ಜೊತೆ
ಯುದ್ದಕ್ಕೆ ಬೀಳುವ ಚಂದ್ರ  ..,
ಸಾಲು  ಸಾಲು
ತಾರೆಗಳ ನಿಲ್ಲಿಸಿ ಕೊಂದು ,
ಹುಣ್ಣಿಮೆಯಾಗುತ್ತಾನೆ   ,
ಅಸಂಖ್ಯ ತಾರೆಗಳೆಲ್ಲ
ಒಟ್ಟಾಗಿ ಸೇರಿ ಚೂರು ಚೂರೇ
ಚಂದಿರನ ಮುರಿದು
ಅಮಾವಾಸ್ಯೆಯ ಮತ್ತೆ
ಪ್ರತಿಷ್ಟಾಪಿಸುತ್ತವೆ !!

ಆಕಾಶಕ್ಕೆ ಪ್ರತಿ ತಿಂಗಳು
ಚಂದಿರನ ಹೆರುವ ಕೆಲಸವಾಗಿದೆ !

ಕೆಂಪು

ಚೂಪು , ಕತ್ತಿಯ ಗರಿಮೆ ,
ಚಿಮ್ಮುವುದು ನೆತ್ತರ ಕರ್ಮ ..
ಕೊಯ್ಯುವ ಕೈಗೆ ಸಂಕಲ್ಪವಾದ ಮೇಲೆ ..,
ಕೆಂಪು ನನ್ನ ಬಣ್ಣ .... 

ಬುಧವಾರ, ಜನವರಿ 21, 2015

ಸೋಂಕು

ಸೋಂಕು ತಗುಲಿದ
ಎದೆ  .,
ಪೂರೈಸಲು

ಇಡಿ ರಾತ್ರಿ  ಮೊಗಲು
ಅದಲು ಬದಲು ,
ನಿದಿರೆ ಸೂತಕದ ಮನೆಯಂತೆ
ಘಮದಲ್ಲೇ ಬೇಯಿಸುತ್ತಿತ್ತು ,
ಬೆದರಿ , ಚದುರಿ
ಬಿಟ್ಟೂ ಬಿಡದ
ಬಿಡುಗಡೆಯ ಬಯಕೆ ... !

ಶುಶ್ರುಷೆಗೆ ಲಸಿಕೆ ??
ಹುಡುಕ ಹೊರಟೆ ..,

ನಾಟಿ ಮದ್ದು .,
ನಾಡ ಮದ್ದು ..,
ಅರಿತವರ ,
ನುರಿತವರ
ಕೇಳಿ ಪಡೆದೆ ..,
ಕಂಡವರ ,
ಉಂಡವರ
ಬೇಡಿ ಪಡೆದೆ ,

ಎದೆ ಮತ್ತೆ ಲಯದಲ್ಲಿ
ತೂಗುತಿದೆ ,

ಈಗ ಲಸಿಕೆಯ ಗುರುತ
ಶಪಿಸುತ್ತೇನೆ  ..
ಸೋಂಕು ಹೊರ ಹೋದ
ದಾರಿ ನೇವರಿಸುತ್ತ ..,





ಮಂಗಳವಾರ, ಜನವರಿ 13, 2015

ಚಳಿ

ಈ ಚಳಿಗೆ ತಂಗಳು
ಮಾಡುವ ತವಕ  ..,

ಹಸಿ ಕನಸು , ಬಿಸಿ ಕನಸು
ಹುಸಿ ಕನಸು
ಎಲ್ಲಕ್ಕೂ
ತಕ್ಷಣಕ್ಕೆ ಮೋಕ್ಷ :)

ಗುರುವಾರ, ಜನವರಿ 8, 2015

ಗೀಟು

ಭೇದ ಕಾಣದು ,
ಅವರ  ಉಸಿರು
ತಮ್ಮದೇ   ಮಂದಿರ ,
ಮಸೀದಿ ,ಚರ್ಚಿನ
ಆವರಣಕ್ಕೆ
ಬಂಧಿಯಾಗುತ್ತಿಲ್ಲ ,

ಅವರ ರಕ್ತಕ್ಕೂ
ನಿಲಿಯಿದೋ
ಹಸಿರಿನದೋ
ಕೆಂಪಿನ ವೈವಿದ್ಯವಿಲ್ಲ  ..,

ಅಳುವಾಗ , ನಗುವಾಗ
ಹೆರುವಾಗ , ಹೊರುವಾಗ

ಒಂದೇ ದಿರಸು  !!

ಎಲ್ಲರು ಮತೀಯರು
ಮತಿಯುಳ್ಳವರೆ .,
ಗಾಳಿಯಲ್ಲೆ
ನೀರಿನಲ್ಲೇ
ಒಂದಷ್ಟು ಗೀಟು
ಎಳೆಯುತ್ತಾರೆ ,
ಒಬ್ಬರಿಂದೊಬ್ಬರು
ದೂರ ನಿಲ್ಲುತಾರೆ ,
ಮೇಲೆ ನೋಡುತ್ತಾರೆ ., !!

ಪಾಲಗಲೇಬೇಕು
ವಾಂಛೆ ಏರಿ

ಅವನ ಸೋಕಿದ
ಬಿಸಿಲು
ಇವನ ಕೆಮ್ಪಾಗಿಸುತ್ತದೆ ,
ಇವನು ತೊಯಿಸೋ
ಮಳೆ ಅವನ
ತಮ್ಪಗಿಸುತ್ತದೆ ,

ಇಲ್ಲ !ಇಲ್ಲಿ
ಏನೋ ವೈಪರಿತ್ಯವಿದೆ ,
ಎಂದು ಗುನುಗುತ್ತಾ  ,
ಕಣ್ಣ ಇಗಲಿಸಿ ,
ಜೀವದ ಪರಿಧಿ
ಮೀರಿ ನೋಡುತ್ತಾರೆ .,
ಎದೆಯ  ಹಿಂಡಿ ,
ಭೇದದ  ಔನತ್ಯದ
ವರದ ಆಸೆಗೆ
ಜೀವಗಳ ಸಾಮ್ಯತೆ
ತೂರಿ  ನೋಡುತ್ತಾರೆ ..,

ಏನೋ ಸಿಕ್ಕಂತೆ
ಹೂಂಕರ ,
ಭಯದ ಚಿತ್ಕಾರ,
ಸಾವು !!??
ಸಾವ ಕಾಣುತ್ತಾರೆ !
ಭಯದಿ ವಿಹ್ವಲರಾಗಿ
ದೈವ ನೆನೆಯುತ್ತಾರೆ ..!

ಗಾಳಿಯ ಗೀಟಿಗೆ
ದೈವದ ಉರಿ ಕಟ್ಟಿ,
ಮೌನ ಹೋಗುತ್ತಾರೆ , ...
ಹಾ ..!
ಸತ್ಯ ದರ್ಶನ
ಎಲ್ಲರಿಗು !!!!


ಸಾವಿನಾಚೆಗೆ ಇದೆ
ಅವನಿಗೆ ನರಕ 
ನನಗೆ ಸ್ವರ್ಗ 
ಎಂದು 
ಮನಸೇ ನಕ್ಕು 
ಗೀಟ ಆಚೆಗೆ
ವ್ಯಂಗ್ಯ ಬೀರುತ್ತಾರೆ ...  


ಒಟ್ಟಾರೆ 
ಸಾವ ದಡಕ್ಕೆ
ದೋಣಿ ಕಟ್ಟಿ
ಉಳಿದವರು ಬೇಕು ,
ಸ್ವರ್ಗ , ನರಕದ
ಆಮಿಷದ
ಅನಾವರಣಕ್ಕೆ  ..,
ದೇವರ ಕರೆದು
ಮೊರೆದವರು ಬೇಕು
ವಿಪರ್ಯಾಸಗಳ
ನೀರ್ವಾಣಕ್ಕೆ ..


ಈ ನಡುವೆ
ಹುಡುಕುತ್ತಿರುವೆ
ದೇವರಿಗಿಂತ
ಅವನ ಕಂಡವರ
ಸಿಕ್ಕರೆ ಕಳಿಸಿಕೊಡಿ
ನಮ್ಮವನ ...
ನೀರು , ಗಾಳಿಯ
ಮೇಲೆ ಗಡಿಗಳ
ಕೆಡವಬೇಕಿದೆ ...










ಸೋಮವಾರ, ಜನವರಿ 5, 2015

ಹುಡುಕಾಟ

ನೀ ಪಕ್ಕವಿದಾಗ
ಬದುಕ ಹುಡುಕಾಟ 
ದಿನ , ರಾತ್ರಿ
ಸತ್ತು  ,
ಈಗ ??
ನಿನ್ನ 
ಕುರುಹು ಸಿಗದೇ
ಸಾವ ಹುಡುಕುತ್ತಿರುವೆ
ಬದುಕು ಮುಗಿಯದ
ಹೊತ್ತು  ..,